ನವದೆಹಲಿ: ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಖ್ರಿಯಲ್ ನಿಶಾಂಕ್ ಅವರು ಗುರುವಾರ ವಿಶ್ವ ಪುಸ್ತಕ ದಿನಾಚರಣೆಯ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ #MyBookMyFriend ಎಂಬ ಅಭಿಯಾನವನ್ನು ಪ್ರಾರಂಭ ಮಾಡಿದ್ದಾರೆ. ಈ ಬಗ್ಗೆ ವಿಡಿಯೋ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿರುವ ಅವರು, ನಾವು ಪುಸ್ತಕವೊಂದನ್ನು ತೆರೆದರೆ ಇಡೀ ಜಗತ್ತನ್ನು ತೆರೆದಂತೆ, ಪುಸ್ತಕ ಮನುಷ್ಯನ ಅತ್ಯುತ್ತಮ ಗೆಳೆಯ ಎಂದಿದ್ದಾರೆ.
ಪುಸ್ತಕಗಳು ಪ್ರತಿಯೊಬ್ಬನಿಗೂ ಪ್ರೇರಣೆಯನ್ನು ನೀಡುತ್ತವೆ ಮತ್ತು ಹೊಸ ಚಿಂತನಾ ವಿಧಾನವನ್ನು ಕಲಿಸುತ್ತದೆ ಜೀವನದ ಸಂಕಷ್ಟದ ಸಂದರ್ಭದಲ್ಲಿ ಪುಸ್ತಕಗಳು ಮಾರ್ಗದರ್ಶನವನ್ನು ಮಾಡುತ್ತವೆ ಎಂದಿದ್ದಾರೆ.
साथियों, विश्व पुस्तक दिवस की आपको हार्दिक शुभकामनाएं।
कहा गया है कि “जब आप एक पुस्तक खोलते हैं तो आप एक नई दुनिया खोलते हैं।
मेरा आग्रह है कि आप सभी एक पुस्तक पढ़कर उसके बारे में #MyBookMyFriend के साथ मुझे बताएं की आप इस समय कौन सी पुस्तक पढ़ रहें हैं |#WorldBookDay pic.twitter.com/ex3uhDH9kl— Dr Ramesh Pokhriyal Nishank (@DrRPNishank) April 23, 2020
ಲಾಕ್ಡೌನ್ ಸಂದರ್ಭದಲ್ಲಿ ವಿಶ್ವ ಪುಸ್ತಕ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಎಲ್ಲಾ ವಿದ್ಯಾರ್ಥಿಗಳು ತಮ್ಮ ಪಠ್ಯಪುಸ್ತಕಗಳಿಗೆ ಹೆಚ್ಚುವರಿಯಾಗಿ ಇತರ ಪುಸ್ತಕಗಳನ್ನು ಓದಬೇಕು. ಹೊಸತನ್ನು ಕಲಿಯಲು ಈಗ ಅವಕಾಶ ಇದೆ. ವಿದ್ಯಾರ್ಥಿಗಳು ಪುಸ್ತಕವನ್ನು ಓದಿ ಅದನ್ನು ತನ್ನೊಂದಿಗೆ ಹಂಚಿಕೊಳ್ಳುವಂತೆ ಅವರು ಕರೆ ನೀಡಿದ್ದಾರೆ. ಇದಕ್ಕಾಗಿ #MyBookMyFriend ಹ್ಯಾಶ್ಟ್ಯಾಗ್ ಬಳಸುವಂತೆ ಅವರು ಸೂಚಿಸಿದ್ದಾರೆ.
#MyBookMyFriend ಅಭಿಯಾನಕ್ಕೆ ಸೇರಿಕೊಳ್ಳುವಂತೆ ಅವರು ಇತರ ಕೇಂದ್ರ ಸಚಿವರುಗಳಿಗೂ ಟ್ಯಾಗ್ ಮಾಡಿದ್ದಾರೆ. ಅಲ್ಲದೆ ದೇಶದಾದ್ಯಂತ ಇರುವ ಇತರ ಗಣ್ಯರು ಕೂಡ ಈ ಅಭಿಯಾನದಲ್ಲಿ ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ. ಈ ಅಭಿಯಾನ ಮುಂದಿನ ಏಳು ದಿನಗಳವರೆಗೆ ಇದ್ದು, ಇದರಲ್ಲಿ ಎಲ್ಲರೂ ಭಾಗವಹಿಸಬೇಕು ಎಂದು ಅವರು ಕರೆ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.