ಲಕ್ನೋ: ತಲೆಮರೆಸಿಕೊಂಡಿದ್ದ 150 ಮಂದಿ ತಬ್ಲಿಘಿ ಜಮಾತ್ ಸದಸ್ಯರನ್ನು ಉತ್ತರ ಪ್ರದೇಶದ ಪೊಲೀಸರು 48 ಗಂಟೆಗಳ ಕಾರ್ಯಾಚರಣೆಯನ್ನು ನಡೆಸಿ ಪತ್ತೆ ಮಾಡಿದ್ದಾರೆ. ಪತ್ತೆಯವರಲ್ಲಿ ವಿದೇಶಿ ತಬ್ಲೀಘಿಗಳು ಕೂಡ ಸೇರಿದ್ದಾರೆ.
ಇವರ ಪತ್ತೆಗಾಗಿ ಪೊಲೀಸರು 48 ಗಂಟೆಗಳ ಸರ್ವೆಲೆನ್ಸ್ ಮಿಷನ್ ಆರಂಭಿಸಿದ್ದರು. ಮಂಗಳವಾರ ಕಾರ್ಯಾಚರಣೆ ಸ್ಥಗಿತಗೊಂಡಿದೆ.
ನಾಪತ್ತೆಯಾದ ತಬ್ಲಿಘಿಗಳ ಪತ್ತೆ ಬಳಿಕ ತಬ್ಲಿಘಿ ಜಮಾತ್ ಸದಸ್ಯರ ಕ್ವಾರಂಟೈನ್ ಸಂಖ್ಯೆ 3,204ಕ್ಕೆ ಏರಿದೆ, ಇದರಲ್ಲಿ 341 ಮಂದಿ ವಿದೇಶಿಗರೂ ಸೇರಿದ್ದಾರೆ.
ವರದಿಗಳ ಪ್ರಕಾರ, 48ಗಂಟೆಗಳ ಕಾರ್ಯಾಚರಣೆಯು ಏಪ್ರಿಲ್ 19 ರಂದು ಪ್ರಾರಂಭವಾಗಿತ್ತು. ಉತ್ತರಪ್ರದೇಶದಲ್ಲಿ ಸುಮಾರು 500 ಮಂದಿ ದೆಹಲಿ ಜಮಾತ್ ಸಮಾವೇಶದಲ್ಲಿ ಪಾಲ್ಗೊಂಡಿದ್ದ ತಬ್ಲೀಘಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಗುಪ್ತಚರ ಇಲಾಖೆಯು ಮಾಹಿತಿಯನ್ನು ನೀಡಿದ ನಂತರ ಈ ಕಾರ್ಯಾಚರಣೆಯನ್ನು ಆರಂಭಿಸಲಾಗಿತ್ತು.
ಸುಮಾರು 123 ಮಂದಿ ತಬ್ಲಿಘಿಗಳನ್ನು ಮೀರತ್, ಮುಜಾಫರ್ನಗರ, ಶಾಮ್ಲಿ, ಶಹರನ್ ಪುರ್, ಭಾಗ್ಪತ್, ಬುಲಂದ್ಸರ್, ಗಾಜಿಯಾಬಾದ್, ಹಪುರ್ಗಳಲ್ಲಿ ಪತ್ತೆಯಾಗಿದ್ದಾರೆ. ಗುಜರಾತ್ ಮೂಲದ 10 ಮಂದಿ ಕಾನ್ಪುರದಲ್ಲಿ ಪತ್ತೆಯಾಗಿದ್ದಾರೆ. ಇನ್ನು ಕೆಲವರು ಹತ್ರಸ್ ಮತ್ತು ಬರೇಲಿಯಲ್ಲಿ ಪತ್ತೆಯಾಗಿದ್ದಾರೆ.
ಇವರನ್ನು ಪತ್ತೆ ಹಚ್ಚುವ ಸಲುವಾಗಿ ಪೊಲೀಸರು ನೈಟ್ ವಿಷನ್ ಡ್ರೋನ್ಗಳನ್ನು ಸುಧಾರಿತ ಕಣ್ಗಾವಲು ಮಿಷನರಿಗಳೊಂದಿಗೆ ಬಳಕೆ ಮಾಡಿದ್ದರು. ಯಾವ ಪ್ರದೇಶದಲ್ಲಿ ತಬ್ಲಿಘಿಗಳು ಆಶ್ರಯ ಪಡೆದುಕೊಂಡಿದ್ದಾರೆ ಎಂಬುದನ್ನು ಪತ್ತೆಹಚ್ಚಲು ಪಬ್ಲಿಕ್ ಅಡ್ರೆಸ್ ಸಿಸ್ಟಮ್ ಅನ್ನು ಕೂಡ ಪೊಲೀಸರು ಬಳಕೆ ಮಾಡಿಕೊಂಡಿದ್ದರು.
ಪ್ರಸ್ತುತ ಕ್ವಾರಂಟೈನ್ನಲ್ಲಿ ಇರುವ ಒಟ್ಟು ತಬ್ಲಿಘಿಗಳ ಪೈಕಿ 1,400 ಮಂದಿ ಮೀರತ್ ವಲಯದಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.