ನವದೆಹಲಿ: ಕೊರೋನಾ ಹಾವಳಿ ಕಡಿಮೆ ಇರುವ ಪ್ರದೇಶಗಳಲ್ಲಿ ಲಾಕ್ಡೌನ್ ನಿಯಮಗಳನ್ನು ಕೊಂಚ ಮಟ್ಟಿಗೆ ಸಡಿಲಿಸಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಇದೀಗ ರಕ್ತದಾನಕ್ಕೆ ಪೂರಕವಾಗುವಂತೆ ಮತ್ತು ರಕ್ತದಾನವನ್ನು ಉತ್ತೇಜಿಸುವಂತೆ ಕ್ರಮ ಕೈಗೊಳ್ಳಲು ಮುಂದಾಗಿದೆ.
ಥಮಾಸ್ಸೆಲಿಕ್ ಮತ್ತು ಹಿಮೋಫೆಲಿಕ್ ರೋಗಿಗಳಿಗೆ ರಕ್ತದ ಅವಶ್ಯಕತೆ ತೀರಾ ಅಗತ್ಯವಿದ್ದು, ಇಂತಹ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಈ ಕ್ರಮವನ್ನು ಜಾರಿಗೊಳಿಸುವಂತೆ ಎಲ್ಲಾ ರಾಜ್ಯ ಸರ್ಕಾರಗಳಿಗೂ ಮಾಹಿತಿ ನೀಡಿದೆ. ರಕ್ತದಾನಕ್ಕೆ ಸಂಬಂಧಿಸಿದಂತೆ ದಾನಿಗಳಿಗೆ ಮತ್ತು ರಕ್ತ ಸಾಗಾಟಕ್ಕೆ ಅನುಕೂಲವಾಗುವಂತೆ ವ್ಯವಸ್ಥೆ ರೂಪಿಸುವಂತೆಯೂ ಗೃಹ ಸಚಿವಾಲಯ ರಾಜ್ಯಗಳಿಗೆ ತಿಳಿಸಿದೆ. ಈ ಬಗ್ಗೆ ಎಲ್ಲಾ ರಾಜ್ಯಗಳ ಕಾರ್ಯದರ್ಶಿಗಳು, ನಿರ್ವಾಹಕರು ಮತ್ತು ಪೊಲೀಸ್ ಕಮಿಷನರ್ ಜೊತೆಗೂ ಮಾಹಿತಿ ಹಂಚಿಕೊಂಡಿದೆ.
ಈ ಬಗ್ಗೆ ಎಲ್ಲಾ ರಾಜ್ಯದ ಆರೋಗ್ಯ ಮಂತ್ರಿಗಳಿಗೆ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಪತ್ರ ಬರೆದಿದ್ದು, ಬ್ಲಡ್ ಬ್ಯಾಂಕ್ಗಳಲ್ಲಿ ರಕ್ತದ ಲಭ್ಯತೆ ತೀರಾ ಅಗತ್ಯವಿದೆ. ಮಾರ್ಚ್ 21 ರಿಂದ ಆರಂಭವಾದ ಲಾಕ್ಡೌನ್ ಕಾರಣದಿಂದಾಗಿ ರಕ್ತದ ಕೊರತೆ ಕಂಡುಬರುವ ಸಾಧ್ಯತೆಗಳಿವೆ. ಅಲ್ಲದೆ ಲಾಕ್ಡೌನ್ ನಿರ್ಬಂಧದ ಕಾರಣದಿಂದಾಗಿ ರಕ್ತದಾನ ಶಿಬಿರ ನಡೆಸುವ ಅವಕಾಶವೂ ಇಲ್ಲ. ಹಾಗಾಗಿ ರಕ್ತದ ಲಭ್ಯತೆಯನ್ನು ಪರಿಶೀಲಿಸಿ, ಕೊರತೆ ಇದ್ದಲ್ಲಿ ಅದಕ್ಕೆ ಸರಿಯಾದ ಕ್ರಮಗಳನ್ನು ಅನುಸರಿಸುವ ಮೂಲಕ ಹೊಂದಿಸಿಕೊಳ್ಳುವುದಕ್ಕೆ ವ್ಯವಸ್ಥೆ ಮಾಡಿಕೊಳ್ಳುವಂತೆ ತಿಳಿಸಿದ್ದಾರೆ. ಜೊತೆಗೆ ರಕ್ತ ಸಾಗಾಟಕ್ಕೆ, ದಾನಿಗಳಿಗೆ ಲಾಕ್ಡೌನ್ ಸಂದರ್ಭದಲ್ಲಿ ಪಾಸ್ ನೀಡುವ ಮೂಲಕ ರಕ್ತದಾನಕ್ಕೆ ಪ್ರೋತ್ಸಾಹ ನೀಡುವಂತೆ ತಿಳಿಸಲಾಗಿದ್ದು, ಆ ಮೂಲಕ ರಕ್ತ ತೀರಾ ಅನಿವಾರ್ಯ ಎನಿಸಿರುವ ರೋಗಿಗಳ ಕಾಳಜಿ ವಹಿಸಲು ಸೂಚಿಸಿದೆ.
ಜೊತೆಗೆ ರಕ್ತದಾನದ ಸಂದರ್ಭದಲ್ಲಿ ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ಪಾಲಿಸುವಂತೆಯೂ ಸಚಿವರು ಸೂಚನೆ ನೀಡಿದ್ದಾರೆ. ಒಟ್ಟಾರೆಯಾಗಿ ರಕ್ತದಾನ, ಕೊರತೆ, ಲಭ್ಯತೆಗಳನ್ನು ಪರಿಶೀಲಿಸಿ ರಕ್ತದಾನಕ್ಕೆ ಪೂರಕ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರ ಎಲ್ಲಾ ರಾಜ್ಯ ಸರ್ಕಾರಗಳಿಗೂ ಆದೇಶಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.