ನವದೆಹಲಿ: ಕೊರೋನಾ ಲಾಕ್ಡೌನ್ ನಂತರ ದೂರದರ್ಶನ ಮರು ಪ್ರಸಾರ ಮಾಡಿದ ರಾಮಾಯಣ ಧಾರವಾಹಿ ಬಹುಜನ ಮೆಚ್ಚುಗೆ ಪಡೆದು, ಟಿಆರ್ಪಿ ರೇಟ್ನಲ್ಲಿಯೂ ಮೊದಲನೆ ಸ್ಥಾನ ಪಡೆದ ಬೆನ್ನಲ್ಲೇ, ದೂರದರ್ಶನ ರಮಾನಂದ ಸಾಗರ ವಿರಚಿತ ಉತ್ತರ ರಾಮಾಯಣವನ್ನು ಪ್ರಸಾರ ಮಾಡಲು ನಿರ್ಧರಿಸಿದೆ.
ಎಪ್ರಿಲ್ 18 ರಂದು ಪ್ರಸಾರವಾದ ರಾಮಾಯಣ ಧಾರಾವಾಹಿಯ ಕಂತಲ್ಲಿ ರಾವಣ ಸಂಹಾರದ ಕಥೆ ಮೂಡಿ ಬಂದಿತ್ತು. ಈ ಭಾಗದಲ್ಲಿ ರಾವಣ ಸಾಯುವ ಸಂದರ್ಭದಲ್ಲಿ “ಶ್ರೀ ರಾಮ್” ಎಂದು ಉಚ್ಚರಿಸುವ ಮೂಲಕ ನೋಡುಗರನ್ನು ಭಾವ ಪರವಶತೆಯತ್ತ ಕೊಂಡೊಯ್ದಿತ್ತು. ರಾಮಾಯಣದ ಕೊನೆಯ ಕಂತು ಇದಾಗಿದ್ದು, ಮುಂದೆ ಉತ್ತರ ರಾಮಾಣವನ್ನು ಪ್ರಸಾರ ಮಾಡುವುದಾಗಿ ದೂರದರ್ಶನ ಟ್ವಿಟ್ಟರ್ನಲ್ಲಿ ತಿಳಿಸಿದ್ದು, ಪ್ರಸಾರವಾಗುವ ಸಮಯವನ್ನು ಹಂಚಿಕೊಂಡಿದೆ.
Watch #UttarRamayan from Sunday at 9 pm only on @DDNational pic.twitter.com/ltdm3yzvh9
— Doordarshan National (@DDNational) April 17, 2020
ಎಪ್ರಿಲ್ 19 ರಿಂದ ರಾತ್ರಿ 9 ಗಂಟೆಗೆ ಉತ್ತರ ರಾಮಾಯಣವನ್ನು ಪ್ರಸಾರ ಮಾಡುವುದಾಗಿ ಡಿಡಿ ತಿಳಿಸಿದೆ. ಅಲ್ಲದೆ ಪ್ರತಿನಿತ್ಯ ಬೆಳಗ್ಗೆ 9 ಗಂಟೆಗೆ ಪುನರಾವರ್ತಿತ ಪ್ರಸಾರ ಮಾಡಲಾಗುವುದಾಗಿಯೂ ಡಿಡಿ ಮಾಹಿತಿ ನೀಡಿದೆ. ಇನ್ನು ರಾಮಾಯಣ ಧಾರಾವಾಹಿಗೆ ಜನರಿಂದ ಅಭೂತಪೂರ್ವ ಬೆಂಬಲ ದೊರೆತಿದ್ದು, 1980-90 ರ ದಶಕಗಳ ಕಾಲದ ಜನರು ಪ್ರೋತ್ಸಾಹ ನೀಡುತ್ತಿದ್ದಂತೆಯೇ ಈ ಯುಗದ ಜನರೂ ಪ್ರೋತ್ಸಾಹ ನೀಡುತ್ತಿದ್ದಾರೆ. ಆದ್ದರಿಂದಲೇ ಇಂದು ಎಲ್ಲಾ ಟಿವಿ ಶೋ ಗಳನ್ನು ಹಿಂದಿಕ್ಕಿ ರಾಮಾಯಣ ಟಿಆರ್ಪಿ ರೇಟ್ನಲ್ಲಿ ನಂಬರ್ 1 ಸ್ಥಾನಕ್ಕೇರಿದೆ ಎಂದರೆ ಅತಿಶಯೋಕ್ತಿಯಾಗಲಾರದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.