ನವದೆಹಲಿ: ಭಾರತ ಕೊರೋನಾವೈರಸ್ನಿಂದಾಗಿ ಲಾಕ್ಡೌನ್ಗೆ ಒಳಗಾಗಿದೆ. ದಿನ ನಿತ್ಯ ಮನೆಯಿಂದ ಹೊರಹೋಗಿ ದುಡಿಯುತ್ತಿದ್ದವರು ಮನೆಯ ಒಳಗೆ ಬಂಧಿಗಳಾಗಿದ್ದಾರೆ. ಸೋಂಕು ಹರಡುವುದನ್ನು ತಡೆಯಲು ತಂದ ನಿಯಂತ್ರಣ ಕ್ರಮಗಳು ಆರೋಗ ಯದ ದೃಷ್ಟಿಯಿಂದ ಅತ್ಯಗತ್ಯವೇ ಆದರೂ, ಮನೆಯೊಳಗೆ ಕುಳಿತುಕೊಳ್ಳುವ ಕಷ್ಟ ಮಾತ್ರ ಎಲ್ಲರನ್ನೂ ಕಂಗೆಡಿಸಿದೆ.
ಇಂತಹ ಸಂದರ್ಭದಲ್ಲಿ ದೂರದರ್ಶನ ತನ್ನ ಹಳೆಯ ಧಾರಾವಾಹಿ ರಾಮಾಯಣವನ್ನು ಮತ್ತೆ ಪ್ರಸಾರ ಮಾಡಲಾರಂಭಿಸಿದೆ. ಇದು ಕಡಿಮೆ ಅವಧಿಯಲ್ಲಿ ಹೆಚ್ಚು ವೀಕ್ಷಕರನ್ನು ಸೆಳೆದು ಟಿಆರ್ಪಿ ರೇಟಿಂಗ್ ಅಲ್ಲಿ ಮೊದಲ ಸ್ಥಾನವನ್ನು ಪಡೆದಿದೆ. ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಕಾರ್ಯಕ್ರಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕೆಲವು ವರ್ಷಗಳ ಹಿಂದೆ ಪ್ರಸಾರವಾಗುತ್ತಿದ್ದ ರಾಮಾಯಣ ಧಾರಾವಾಹಿಯನ್ನು ಪ್ರಸಾರ ಭಾರತಿ ಮತ್ತೆ ಮರು ಪ್ರಸಾರ ಮಾಡಲು ತೊಡಗಿದ್ದು, ಈ ಧಾರಾವಾಹಿಯು ಇದೀಗ ಉಳಿದೆಲ್ಲಾ ಕಾರ್ಯಕ್ರಮಗಳನ್ನು ಹೀಂದಿಕ್ಕಿ ಟಿಆರ್ಪಿ ಪಟ್ಟಿಯ ಮೊದಲ ಸ್ಥಾನ ಕಾಯ್ದುಕೊಂಡಿದೆ.
ರಾಮಾಯಣ 15.1 ಟಿಆರ್ಪಿ ರೇಟ್ ಅನ್ನು ದಾಖಲಿಸಿದ್ದರೆ, ಮಹಾಭಾರತ ಮತ್ತು ಮೋದಿ ಅವರ 9PM 9Minute 4.7 ಮತ್ತು 1.9 ಟಿಆರ್ಪಿ ರೇಟ್ ಗಳಿಸಿದೆ. ಸೂಪರ್ ಹೀರೋ ಕಾರ್ಯಕ್ರಮ 1.4 ಗಳಿಸಿದೆ. ಇನ್ನು ಮುಖೇಶ್ ಖನ್ನಾ ಅವರ ಶಕ್ತಿಮಾನ್ ನಾಲ್ಕನೇ ಸ್ಥಾನದಲ್ಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.