ನವದೆಹಲಿ: ಮೇ 3 ರ ವರೆಗೆ ಲಾಕ್ಡೌನ್ ವಿಸ್ತರಿಸಿ ಆದೇಶ ಹೊರಡಿಸಿರುವ ಕೇಂದ್ರ ಸರ್ಕಾರ ಈ ಸಂದರ್ಭದಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಮೋದಿ ಅವರು ಈ ಆದೇಶವನ್ನು ಹೊರಡಿಸಿದ ಬೆನ್ನಲ್ಲೇ ಕೇಂದ್ರ ಗೃಹ ಸಚಿವಾಲಯ ಸಭೆಯೊಂದನ್ನು ನಡೆಸಿ, ಈ ಸಂದರ್ಭದಲ್ಲಿ ಅನುಸರಿಸಬೇಕಾದ ಗೈಡ್ಲೈನ್ ಅನ್ನು ಎಲ್ಲಾ ರಾಜ್ಯ ಸರ್ಕಾರಗಳಿಗೂ ನೀಡಿದೆ. ಇದರ ಪ್ರಕಾರ,
🔹 ಸಾರಿಗೆ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿಮಾನ, ರೈಲು ಮತ್ತು ಭೂ ಸಾರಿಗೆಗಳನ್ನು ಬಳಸಿ ಪ್ರಯಾಣಿಸುವುದಕ್ಕೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ಇನ್ನು ಶಿಕ್ಷಣ, ರಾಜಕೀಯ, ಧಾರ್ಮಿಕ, ಸಾಮಾಜಿಕ ವಿಚಾರಗಳಿಗೆ ಸಂಬಂಧಿಸಿದಂತೆಯೂ ಈ ಕ್ರಮ ಅನ್ವಯವಾಗುತ್ತದೆ.
🔹 ಸಾರ್ವಜನಿಕ ಮತ್ತು ಕಾರ್ಯ ಸ್ಥಳಗಳಲ್ಲಿ ಮಾಸ್ಕ್ ಬಳಕೆ ಸೇರಿದಂತೆ ಇತರ ನಿಯಂತ್ರಣ ಕ್ರಮಗಳನ್ನು ಖಡ್ಡಾಯವಾಗಿ ಅನುಸರಿಸುವುದು. ತಪ್ಪಿದಲ್ಲಿ ದಂಡ
🔹 ಎಪ್ರಿಲ್ 20, 2020 ರಿಂದ ತೊಡಗಿದಂತೆ ಲಾಕ್ಡೌನ್ ಮುಗಿಯುವವರೆಗೆ ರಾಜ್ಯ, ಜಿಲ್ಲೆಗಳು ಗುರುತಿಸಿದ ಕಂಟೈನ್ಮೆಂಟ್ ಝೋನ್ಗಳಲ್ಲಿ ಜಪರು ಒಳ ಬರುವ ಅಥವಾ ಹೊರ ಹೋಗುವುದನ್ನು ನಿಷೇಧಿಸಲಾಗಿದೆ. ಸರ್ಕಾರಿ ಕೆಲಸಗಳು, ತುರ್ತು ವೈದ್ಯಕೀಯ ಸೇವೆ, ಸರಕು ಸಾಗಾಟ, ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದಂತೆ ಮಾತ್ರ ಸಂಚಾರಕ್ಕೆ ಅವಕಾಶ ನೀಡುವುದು.
🔹 ಕೊರೋನಾ ಹಾಟ್ಸ್ಪಾಟ್ಗಳಲ್ಲಿ ಕಠಿಣ ನಿರ್ಬಂಧ ಗಳನ್ನು ಹೇರಲಾಗಿದ್ದು, ಕೇವಲ ಅಗತ್ಯ ಸೇವೆಗಳನ್ನು ಒದಗಿಸುವುದಕ್ಕೆ ಮಾತ್ರ ಅವಕಾಶ.
🔹 ಕೃಷಿಗೆ ಸಂಬಂಧಿಸಿದಂತೆ ರಕ್ಷಣಾ ಕ್ರಮಗಳನ್ನು ಅನುಸರಿಸುವ ಮೂಲಕ ಕೃಷಿ ಚಟುವಟಿಕೆಗಳಿಗೆ ಅವಕಾಶ. ದಿನಗೂಲಿ ನೌಕರರು ಮತ್ತು ಸಣ್ಣ ಪುಟ್ಟ ಕೆಲಸಗಳ ಮೂಲಕ ಬದುಕು ಕಟ್ಟುವ ಕಾರ್ಮಿಕರಿಗೆ ಉಪಯೋಗವಾಗುವಂತೆ ಚಟುವಟಿಕೆಗಳನ್ನು ನಡೆಸಲು ಅನುಮತಿ. ಆ ಮೂಲಕ ಬಡ ಕುಟುಂಬಗಳ ಸಬಲೀಕರಣಕ್ಕೆ ಕ್ರಮ. ಆದರೆ ನಿಯಂತ್ರಣ ಕ್ರಮಗಳನ್ನು ಅನುಸರಿಸದೇ ಇದ್ದಲ್ಲಿ ದಂಡ
🔹 ಎಲ್ಲಾ ರೀತಿಯ ಸರಕು ಸಾಗಾಟಕ್ಕೆ ಮುಕ್ತ ಅವಕಾಶ
🔹 ಕೃಷಿಗೆ ಸಂಬಂಧಿಸಿದ ಕಾರ್ಖಾನೆ, ಮಂಡಿ, ಹೈನುಗಾರಿಕೆ, ಹಾಲು ಉತ್ಪಾದನೆ, ಸರಬರಾಜು ಮೊದಲಾದ ಎಲ್ಲಾ ಕ್ಷೇತ್ರಗಳಿಗೂ ಕಾರ್ಯ ನಿರ್ವಹಿಸಲು ಅನುಮತಿ
🔹 ಗ್ರಾಮೀಣ ಜನರಿಗೆ ಉದ್ಯೋಗ ಕಲ್ಪಿಸುವ ನಿರ್ಮಾಣ ಕಾರ್ಯ, ಸಣ್ಣ ಕಾರ್ಖಾನೆಗಳು, ರಸ್ತೆ ಕಾಮಗಾರಿ, ಮನ್ರೇಗಾ ,ನೀರಾವರಿ ಮೊದಲಾದ ಕೆಲಸಗಳಿಗೂ ಕಾರ್ಯ ನಿರ್ವಹಿಸಲು ಅವಕಾಶ ನೀಡುವ ಮೂಲಕ ಊದ್ಯೋಗ ಸೃಷ್ಟಿಗೆ ಒತ್ತು
🔹 ಮ್ಯಾನ್ಯುಫ್ಯಾಕ್ಚರಿಂಗ್ ಮತ್ತು ಇತರ ಉದ್ಯಮಗಳಿಗೂ ಸೋಂಕು ನಿಯಂತ್ರಕ ಕ್ರಮಗಳನ್ನು ಅನುಸರಿಸಿ ಕಾರ್ಯ ನಿರ್ವಹಿಸಲು ಅವಕಾಶ. ಐಟಿ ಹಾರ್ಡ್ವೇರ್, ಅಗತ್ಯ ವಸ್ತುಗಳ ಪ್ಯಾಕೇಜಿಂಗ್, ಎಣ್ಣೆ, ಅಹಾರ, ಕೋಲ್, ಮಿನರಲ್ ಉತ್ಪಾದನೆಗೆ ಅವಕಾಶ ನೀಡುವ ಮೂಲಕ ಉದ್ಯೋಗ ಸೃಷ್ಟಿಗೆ ಕ್ರಮ. ಜೊತೆಗೆ ಆರ್ಥಿಕ ಕ್ಷೇತ್ರಗಳಾದ ಬ್ಯಾಂಕಿಂಗ್, ಎಟಿಎಂ, ಫೈನಾನ್ಸ್ ಮೊದಲಾದವುಗಳಿಗೆ ಕಾರ್ಯ ನಿರ್ವಹಣೆಗೆ ಅವಕಾಶ ಕಲ್ಪಿಸಲಾಗಿದೆ
🔹 ದೇಶದ ಅಭಿವೃದ್ಧಿಗೆ ಪೂರಕವಾಗಿ ಡಿಜಿಟಲ್ ಎಕಾನಮಿ, ಸರ್ಕಾರಿ ಸ್ವಾಮ್ಯದ ಕಾಲ್ ಸೆಂಟರ್, ಆನ್ಲೈನ್ ಟೀಚಿಂಗ್ಗೆ ಅವಕಾಶ
🔹 ಆರೋಗ್ಯ ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಮಾನ್ಯತೆ ಪಡೆದ ಅಗತ್ಯ ಸೇವಾ ಕ್ಷೇತ್ರಗಳು ಈ ಲಾಕ್ಡೌನ್ ಸಂದರ್ಭದಲ್ಲಿ ಕಾರ್ಯ ನಿರ್ವಹಿಸಲು ಅನುಮತಿ ನೀಡಲಾಗಿದೆ.
ಜೊತೆಗೆ ಕೋವಿಡ್-19 ನಿಂದ ಮುಕ್ತಿ ಪಡೆಯಲು ಈ ಹಿಂದಿನ ಅಂದರೆ 21 ದಿನಗಳ ಲಾಕ್ಡೌನ್ ಸಂದರ್ಭದಲ್ಲಿ ಅನುಸರಿಸಲಾದ ನಿಯಂತ್ರಣ ಕ್ರಮಗಳನ್ನು ಅನುಸರಿಸುವುದು. ಎಪ್ರಿಲ್ 20 ರ ವರೆಗೆ ಕಠಿಣ ಕ್ರಮಗಳನ್ನು ಅನುಸರಿಸಿ, ಬಳಿಕ ಆರ್ಥಿಕತೆಗೆ ಒಂದಷ್ಟು ಬಲ ನೀಡುವ ನಿಟ್ಟಿನಲ್ಲಿ ಕೇಂದ್ರ ಗೃಹ ಸಚಿವಾಲಯ ಈ ಮಾರ್ಗಸೂಚಿಗಳನ್ನು ಜಾರಿಗೆ ತಂದಿದೆ. ಆ ಮೂಲಕ ದೇಶವನ್ನು ಕೊರೋನಾ ಮುಕ್ತಗೊಳಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲು ಮುಂದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.