ನವದೆಹಲಿ: ಭಾರತದ ಕವಿ ಹಾಗೂ ರಾಜತಾಂತ್ರಿಕ ಅಭಯ್ ಕೆ. ಅವರು ಕೆನ್ಯಾದ ಕಲಾವಿದ ಕಪ್ನೆಯ ಅವರೊಂದಿಗೆ ಸೇರಿ ಕೆಂಪು ಗ್ರಹವಾದ ಮಂಗಳಕ್ಕಾಗಿ ಗೀತೆಯನ್ನು ರಚನೆ ಮಾಡಿದ್ದಾರೆ.
2020ರ ಬೇಸಿಗೆಯಲ್ಲಿ ಮಂಗಳ ಭೂಮಿಯ ಕಕ್ಷೆಗೆ ಹತ್ತಿರವಾಗುವುದರಿಂದ ಈ ವರ್ಷ ಮಂಗಳನ ಪರಿಶೋಧನೆಗೆ ಉತ್ತಮ ವರ್ಷವಾಗಿದೆ. ಜುಲೈ 17, 2020 ರಂದು ಮಾರ್ಸ್ ರೋವರ್ ಮಿಷನ್ ಆದ ‘ಮಾರ್ಸ್ 2020’ ಅನ್ನು ಪ್ರಾರಂಭಿಸಲು ನಾಸಾ ಯೋಜಿಸುತ್ತಿದ್ದಂತೆ, ಅಭಯ್ ಕೆ. ಕೆಂಪು ಗ್ರಹವನ್ನು ಅನ್ವೇಷಿಸಲು ಕಾಯುತ್ತಿರುವ ಅದ್ಭುತಗಳಿಗೆಗೆ ಹೆಚ್ಚಿನ ಗಮನವನ್ನು ನೀಡುವ ಸಲುವಾಗಿ ಯುವ ಪೀಳಿಗೆಗೆ ಪ್ರೇರಣೆ ನೀಡಲು ಗೀತೆಯನ್ನು ರಚನೆ ಮಾಡಿದ್ದಾರೆ.
ಮಂಗಳ ಗೀತೆಯ ಮ್ಯೂಸಿಕ್ ವಿಡಿಯೋವನ್ನು ನೇಪಾಳದ ಮಿಶ್ರೀ ಯಾದವ್ ಸಂಯೋಜಿಸಿದ್ದಾರೆ.
ತನ್ನ ಮಂಗಳ ಗೀತೆಯ ಬಗ್ಗೆ ಮಾತನಾಡಿರುವ ಅಭಯ್ ಕೆ. ಅವರು, “ಮಂಗಳ ಗ್ರಹವು ಬಾಹ್ಯಾಕಾಶ ಪರಿಶೋಧನೆಯ ಹೊಸ ಕೇಂದ್ರವಾಗಿದ್ದು, ಅಲ್ಲಿ ಮನುಷ್ಯನು ಶೀಘ್ರದಲ್ಲೇ ಇಳಿಯುವ ಸಾಧ್ಯತೆಯಿದೆ. ಮಂಗಳದ ದೃಷ್ಟಿಕೋನದಿಂದ ಒಂದು ಗೀತೆ ಬರೆಯಲು ನಾನು ಬಯಸಿದ್ದೆ, ಮಂಗಳ ತನ್ನ ಗ್ರಹದ ಬಗ್ಗೆ ಹೇಗೆ ಭಾವಿಸಬಹುದು? ಎಂಬುದು ನನ್ನ ಗೀತೆಯ ಸಾರ. “ಕ್ಷೀರಪಥದಲ್ಲಿ ಭೂಮಿಯ ಅವಳಿ’ ಎಂಬುದು ಗೀತೆಯ ಸಾರವಾಗಿದೆ.
ಅಭಯ್ ಕೆ. ಅವರು ಈ ಹಿಂದೆ ಭೂಮಿಯ ಗೀತೆ ಮತ್ತು ಚಂದ್ರಗೀತೆ ಬರೆದಿದ್ದಾರೆ. ಭೂಮಿಯ ಗೀತೆಯನ್ನು 50 ಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದಿಸಲಾಗಿದೆ ಮತ್ತು ಇದನ್ನು ಭೂ ದಿನ ಮತ್ತು ವಿಶ್ವ ಪರಿಸರ ದಿನವನ್ನು ಆಚರಣೆಯ ವೇಳೆ ವ್ಯಾಪಕವಾಗಿ ಬಳಸಲಾಗುತ್ತದೆ. ಚಂದ್ರಯಾನ- II ಚಂದ್ರನ ಮೇಲೆ ಇಳಿಯುವ ಕೆಲವೇ ಗಂಟೆಗಳ ಮೊದಲು ಪ್ರಮುಖ ಭಾರತೀಯ ಟಿವಿ ಚಾನೆಲ್ಗಳಲ್ಲಿ ಚಂದ್ರ ಗೀತೆ ಪ್ರಸಾರವಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.