ನವದೆಹಲಿ: ದೆಹಲಿ ದಂಗೆಯ ಸಂದರ್ಭದಲ್ಲಿ ಶಾರೂಖ್ ಎಂಬ ದಂಗೆಕೋರ ಪೊಲೀಸರ ಮೇಲೆ ಫೈರಿಂಗ್ ನಡೆಸಿದ ಘಟನೆ ಇಡೀ ದೇಶವನ್ನೇ ದಿಗ್ಭ್ರಾಂತಗೊಳಿಸಿತ್ತು. ಈ ಸಂದರ್ಭದಲ್ಲಿ ಧೈರ್ಯಶಾಲಿಯಂತೆ ಆತನ ಎದುರು ಹೋಗಿ ನಿಂತ ಪೊಲೀಸ್ ಪೇದೆ ದೀಪಕ್ ದಹಿಯಾ ಅವರು ಎಲ್ಲರ ಪ್ರಶಂಸೆಗೆ ಪಾತ್ರರಾದರು.
ಪಿಸ್ತೂಲ್ ಹಿಡಿದ ದಂಗೆಕೋರನ ಮುಂದೆ ಧೈರ್ಯದಿಂದ ನಿಲ್ಲಲು ನನಗೆ ಪೊಲೀಸ್ ತರಬೇತಿಯೇ ಸಹಾಯ ಮಾಡಿತು ಎಂದು ದಹಿಯಾ ಹೇಳಿದ್ದಾರೆ.
“ನನ್ನನ್ನು ಸೋಮವಾರ (ಫೆಬ್ರವರಿ 24) ತುರ್ತು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ನನ್ನ ತರಬೇತಿ ವಜೀರಾಬಾದ್ ದೆಹಲಿ ಪೊಲೀಸ್ ತರಬೇತಿ ಕೇಂದ್ರದಲ್ಲಿ ನಡೆಯುತ್ತಿದೆ. 2012 ರಲ್ಲಿ ದೆಹಲಿ ಪೊಲೀಸ್ ಇಲಾಖೆಗೆ ನೇಮಕಗೊಂಡಿದ್ದೇನೆ” ಎಂದಿದ್ದಾರೆ.
ಹರಿಯಾಣದ ಸೋನೆಪತ್ ನಿವಾಸಿ ದಾಹಿಯಾ ಅವರು, “ನನ್ನ ತಂದೆಯನ್ನು ಕೋಸ್ಟ್ ಗಾರ್ಡ್ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ನನ್ನ ಸಹೋದರರೊಬ್ಬರು ದೆಹಲಿ ಪೊಲೀಸ್ ಇಲಾಖೆಯಲ್ಲಿದ್ದಾರೆ” ಎಂದು ಹೇಳಿದ್ದಾರೆ.
“ಈಶಾನ್ಯ ದೆಹಲಿಯಲ್ಲಿ ಕೋಮು ಹಿಂಸಾಚಾರ ನಡೆದ ದಿನ, ನನ್ನ ತರಬೇತಿ ಕೇಂದ್ರದಿಂದ ನನ್ನನ್ನು ತುರ್ತು ಕರ್ತವ್ಯಕ್ಕೆ ಕರೆಸಲಾಯಿತು. ಇದ್ದಕ್ಕಿದ್ದಂತೆ ಮರೂನ್ ಬಣ್ಣದ ಟಿ-ಶರ್ಟ್ ಧರಿಸಿದ ವ್ಯಕ್ತಿಯೊಬ್ಬ ನನಗೆ ಗುಂಡು ಹಾರಿಸುವುದಾಗಿ ಬೆದರಿಕೆ ಹಾಕಿ ನನ್ನ ಮುಂದೆ ಬಂದ. ಆತ ನನ್ನ ಮೇಲೆ ಗುಂಡು ಹಾರಿಸಬಹುದಾದ ಎಲ್ಲಾ ಸಾಧ್ಯತೆ ಇತ್ತು, ಆದರೆ ನಾನು ಶಾಂತನಾಗಿ ಕಿಂಚಿತ್ತೂ ಭಯ ತೋರ್ಪಡಿಸದೆ ಪರಿಸ್ಥಿತಿಯನ್ನು ಎದುರಿಸಿದೆ” ಎಂದಿದ್ದಾರೆ.
“ಆತ ಪಿಸ್ತೂಲ್ ಹಿಡಿದ ಮುಂದೆ ಬರುತ್ತಿದ್ದಂತೆ ಆತನಿಗೆ ಪಿಸ್ತೂಲ್ ಕೆಳಗಿಡುವಂತೆ ಎಚ್ಚರಿಸಿದೆ, ಆತನ ಎದುರು ನಿಂತೆ, ನನ್ನ ಮಾತು ಫಲಿಸಿತು ಆತ ಗಾಳಿಯಲ್ಲಿ ಗುಂಡು ಹಾರಿಸಿ ಓಡಿ ಹೋದ” ಎಂದು ದಹಿಯಾ ಹೇಳಿದ್ದಾರೆ.
“ನನ್ನ ಪೊಲೀಸ್ ತರಬೇತಿಯ ಕಾರಣದಿಂದಲೇ ನನಗೆ ಆತನನ್ನು ಎದುರಿಸಲು ಸಾಧ್ಯವಾಯಿತು” ಎಂದಿದ್ದಾರೆ.
ದಹಿಯಾ ಅವರಿಗೆ ಪಿಸ್ತೂಲ್ ತೋರಿಸಿದ ಯುವಕನನ್ನು ಶಾರೂಖ್ ಎಂದು ಗುರುತಿಸಲಾಗಿದೆ. ಈತನ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.