ಕೊಕ್ರಜಾರ್: ಅಸ್ಸಾಂನಲ್ಲಿ ಇಂದು ನಡೆದ ಬೋಡೋ ಒಪ್ಪಂದದ ಬಗೆಗಿನ ಸಂಭ್ರಮಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಮೋದಿ, “ಶಾಂತಿ ಪ್ರಿಯ ಅಸ್ಸಾಂಗೆ, ಶಾಂತಿ ಮತ್ತು ಅಭಿವೃದ್ಧಿ ಪ್ರಿಯ ಈಶಾನ್ಯಕ್ಕೆ, ನವ ಭಾರತದ ನವ ನಿರ್ಣಯಕ್ಕೆ ಸ್ವಾಗತ” ಎಂದು ಜನತೆಗೆ ಹೇಳಿದ್ದಾರೆ.
ಒಪ್ಪಂದಕ್ಕೆ ಸಹಿ ಹಾಕುವಲ್ಲಿ ಯಶಸ್ವಿಯಾದ ಅಸ್ಸಾಂ ಸರ್ಕಾರ ಮತ್ತು ಅಸ್ಸಾಂ ವಿದ್ಯಾರ್ಥಿ ಸಂಘಕ್ಕೆ ಅವರು ಕೃತಜ್ಞತೆ ಸಲ್ಲಿಸಿದರು. “ಆಲ್ ಬೋಡೋ ಸ್ಟೂಡೆಂಟ್ಸ್ ಯೂನಿಯನ್ (ಎಬಿಎಸ್ಯು), ನ್ಯಾಷನಲ್ ಡೆಮಾಕ್ರಟಿಕ್ ಫ್ರಂಟ್ ಆಫ್ ಬೋಡೋಲ್ಯಾಂಡ್ (ಎನ್ಡಿಎಫ್ಬಿ)ಗೆ ಸಂಬಂಧಿಸಿದ ಎಲ್ಲಾ ಯುವ ಕಾರ್ಯಕರ್ತರಿಗೆ, ಬಿಟಿಸಿ ಮುಖ್ಯಸ್ಥ ಹಗ್ರಾಮ ಮೊಹಿಲಾರಿ ಅವರಿಗೆ ಮತ್ತು ಅಸ್ಸಾಂ ಸರ್ಕಾರದ ಬದ್ಧತೆಯನ್ನು ಅಭಿನಂದಿಸುವ ದಿನ ಇಂದು. ಈ ಒಪ್ಪಂದದಲ್ಲಿ ಅವರುಗಳ ಪಾತ್ರ ಮಹತ್ವದ್ದು” ಎಂದಿದ್ದಾರೆ.
ಪ್ರಧಾನಿ ಮೋದಿಯವರು ಇನ್ನು 6 ತಿಂಗಳಲ್ಲಿ ಬಡಿಗೆಯೇಟು ತಿನ್ನುತ್ತಾರೆ ಎಂದು ಇತ್ತೀಚೆಗೆ ಹೇಳಿದ್ದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರ ವಿರುದ್ಧ ವಾಗ್ ಪ್ರಹಾರ ನಡೆಸಿದ ಮೋದಿ, “ಕೆಲವು ಜನರು ನನಗೆ ಬಡಿಗೆಯಿಂದ ಹೊಡೆಯುವ ಬಗ್ಗೆ ಮಾತನಾಡುತ್ತಾರೆ, ನಿಮ್ಮಂತಹ ತಾಯಂದಿರ ಪ್ರೀತಿ ಮತ್ತು ಬೆಂಬಲವಿರುವಾಗ ನನಗೆ ಎಷ್ಟು ಬಾರಿ ಪೆಟ್ಟು ಬಿದ್ದರೂ ಏನೂ ಆಗಲಾರದು. ಇಂದು ನಾನು ನನ್ನ ಹೃದಯಾಂತರಾಳದಿಂದ ನಿಮ್ಮನ್ನು ಬೆಸೆಯಲು ಬಂದಿದ್ದೇನೆ” ಎಂದಿದ್ದಾರೆ.
ಜನವರಿ 27 ರಂದು ನವದೆಹಲಿಯಲ್ಲಿ ನಿಷೇಧಿತ ನ್ಯಾಷನಲ್ ಡೆಮಾಕ್ರಟಿಕ್ ಫ್ರಂಟ್ ಆಫ್ ಬೊಡೋಲ್ಯಾಂಡ್ (ಎನ್ಡಿಎಫ್ಬಿ)ನ ಎಲ್ಲಾ ಬಣಗಳ ಪ್ರತಿನಿಧಿಗಳು ಮತ್ತು ಕೇಂದ್ರ ಗೃಹ ಸಚಿವಾಲಯ, ರಾಜ್ಯ ಸರ್ಕಾರ ತ್ರಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿದ ಕೆಲವೇ ದಿನಗಳಲ್ಲಿ ಮೋದಿ ಅಸ್ಸಾಂಗೆ ಭೇಟಿ ನೀಡಿ ಸಂಭ್ರಮಾಚರಣೆಯಲ್ಲಿ ಭಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.