ನವದೆಹಲಿ: ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಕುಷ್ಠ ರೋಗಕ್ಕಾಗಿನ ಅಂತಾರಾಷ್ಟ್ರೀಯ ಗಾಂಧಿ ಪ್ರಶಸ್ತಿಯನ್ನು ಡಾ. ಎನ್. ಎಸ್. ಧರ್ಮಶಕ್ತು ಅವರಿಗೆ ಪ್ರದಾನಿಸಿದ್ದಾರೆ. ಭಾರತೀಯ ನಾಮನಿರ್ದೇಶನ (ವೈಯಕ್ತಿಕ) ವಿಭಾಗದ ಅಡಿಯಲ್ಲಿ ಧರ್ಮಶಕ್ತು ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಸಾಂಸ್ಥಿಕ ವಿಭಾಗದ ಅಡಿಯಲ್ಲಿ ಕುಷ್ಠರೋಗ ಮಿಷನ್ ಟ್ರಸ್ಟ್ಗೆ ಕುಷ್ಠ ರೋಗಕ್ಕಾಗಿನ ಅಂತಾರಾಷ್ಟ್ರೀಯ ಗಾಂಧಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿಗಳು, “ಹಲವು ವರ್ಷಗಳ ಕುಷ್ಠರೋಗದ ವಿರುದ್ಧದ ನಮ್ಮ ಹೋರಾಟದಲ್ಲಿ ನಾವು ಸಾಕಷ್ಟು ಸಾಧಿಸಿದ್ದೇವೆ. ಹತ್ತು ಸಾವಿರ ಜನಸಂಖ್ಯೆಗೆ ಒಂದಕ್ಕಿಂತಲೂ ಕಡಿಮೆ ಪ್ರಕರಣವನ್ನು ದಾಖಲಿಸುವ ಮೂಲಕ ಕುಷ್ಠರೋಗ ನಿರ್ಮೂಲನೆಯ ಮಟ್ಟವನ್ನು ನಾವು ಯಶಸ್ವಿಯಾಗಿ ಸಾಧಿಸಿದ್ದೇವೆ” ಎಂದಿದ್ದಾರೆ.
“ಕುಷ್ಠರೋಗದ ವಿರುದ್ಧದ ಕಳಂಕ ಮತ್ತು ಪೂರ್ವಾಗ್ರಹ ಗಣನೀಯವಾಗಿ ಕಡಿಮೆಯಾಗಿದೆ. ಆದರೆ, ಹೊಸ ಪ್ರಕರಣಗಳು ಸಂಭವಿಸುತ್ತಲೇ ಇರುತ್ತವೆ ಮತ್ತು ರೋಗದ ಹೆಚ್ಚಿನ ಖರ್ಚು ವೆಚ್ಚಗಳ ಹೊರೆ ಇನ್ನೂ ಅಸ್ತಿತ್ವದಲ್ಲಿವೆ” ಎಂದು ಅವರು ಹೇಳಿದ್ದಾರೆ.
“ಕುಷ್ಠರೋಗ ಪ್ರಕರಣಗಳನ್ನು ಮೊದಲೇ ಪತ್ತೆ ಹಚ್ಚುವತ್ತ ನಾವು ನಮ್ಮ ಪ್ರಯತ್ನಗಳನ್ನು ತೀವ್ರಗೊಳಿಸಬೇಕಾಗಿದೆ, ಸೂಕ್ತ ಚಿಕಿತ್ಸೆಗೆ ಸಮಾನ ಪ್ರವೇಶ ಮತ್ತು ಭೌಗೋಳಿಕವಾಗಿ ಕೇಂದ್ರೀಕೃತ ಪ್ರದೇಶಗಳಲ್ಲಿ ಸಮಗ್ರ ಕುಷ್ಠರೋಗ ಸೇವೆಗಳನ್ನು ಒದಗಿಸುವುದಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಬೇಕಾಗಿದೆ “ಎಂದು ಅವರು ಹೇಳಿದ್ದಾರೆ.
ಕುಷ್ಠರೋಗದ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವನ್ನು ಒತ್ತಿಹೇಳಿದ ಅವರು, “ನಾವು ಈ ರೋಗ ಮತ್ತು ಅದರ ವಿಭಿನ್ನ ಆಯಾಮಗಳ ಬಗ್ಗೆ ಜಾಗೃತಿ ಮತ್ತು ಶಿಕ್ಷಣ ಪಡೆಯಬೇಕು ಮತ್ತು ಆ ಜಾಗೃತಿಯನ್ನು ನಮ್ಮ ಸಮುದಾಯಗಳಲ್ಲಿ ಹರಡಬೇಕು. ಕುಷ್ಠರೋಗದ ಕಾರಣದಿಂದಾಗಿ ತಾರತಮ್ಯಕ್ಕೊಳಗಾದವರನ್ನು ನಾವು ಸಬಲೀಕರಣಗೊಳಿಸಬೇಕಾಗಿದೆ ಮತ್ತು ಮಾಹಿತಿ ಪ್ರಸಾರಗೊಳಿಸಬೇಕಾಗಿದೆ” ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.