ನವದೆಹಲಿ: “ಗಾಂಧೀಜಿ ನಿಮಗೆ ಟ್ರೇಲರ್ ಆಗಿರಬಹುದು, ಆದರೆ ನಮಗೆ ಪ್ರಾಣ” ಎಂದು ಪ್ರಧಾನಿ ನರೇಂದ್ರ ಮೋದಿಯವರು ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಿರುಗೇಟು ನೀಡಿದ್ದಾರೆ.
ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದ ಮೇಲೆ ಲೋಕಸಭೆಯಲ್ಲಿ ಇಂದು ಮೋದಿಯವರು ಪ್ರತಿಕ್ರಿಯೆ ನೀಡಿದ ಸಂದರ್ಭದಲ್ಲಿ ವಿರೋಧ ಪಕ್ಷಗಳು ‘ಗಾಂಧೀಜಿ ಅಮರ್ ರಹೇ’ ಎಂದು ದೊಡ್ಡ ಮಟ್ಟದಲ್ಲಿ ಘೋಷಣೆಯನ್ನು ಕೂಗಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಮೋದಿ, ‘ಕೇವಲ ಇಷ್ಟೆಯಾ ಇನ್ನೇನಾದರು ಇದೆಯಾ?’ ಎಂದು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಅವರಿಗೆ ತಿಳಿಸಿದ್ದಾರೆ.
ಇದಕ್ಕೆ ಉತ್ತರಿಸಿದ ಅಧೀರ್ ರಂಜನ್, ‘ಇದು ಕೇವಲ ಟ್ರೇಲರ್ ಇನ್ನು ಸಾಕಷ್ಟಿದೆ’ ಎಂದಿದ್ದಾರೆ. ಇದಕ್ಕೆ ಉತ್ತರ ನೀಡಿದ ಮೋದಿ, “ನಿಮಗೆ ಗಾಂಧೀಜಿ ಕೇವಲ ಟ್ರೇಲರ್ ಆಗಿರಬಹುದು ಆದರೆ ನಮಗೆ ಅವರು ಪ್ರಾಣ” ಎಂದಿದ್ದಾರೆ.
ಬಳಿಕ ಮಾತನಾಡಿದ ಮೋದಿ, “ರಾಷ್ಟ್ರಪತಿಗಳು ನವ ಭಾರತದ ದೂರದೃಷ್ಟಿಯನ್ನು ನೀಡಿದರು. ಶತಮಾನದ ಮೂರನೇ ದಶಕಕ್ಕೆ ಪ್ರವೇಶಿಸಿದ ಸಂದರ್ಭದಲ್ಲಿ ಅವರು ಭಾಷಣ ಮಾಡಿದ್ದಾರೆ. ಅವರ ಮಾತುಗಳು ಭರವಸೆಯ ಸ್ಪೂರ್ತಿ ನೀಡಿದೆ ಮತ್ತು ಭವಿಷ್ಯದಲ್ಲಿ ಭಾರತವನ್ನು ಮುಂದಕ್ಕೆ ತೆಗೆದುಕೊಂಡು ಹೋಗಲು ದಾರಿದೀಪವನ್ನು ಒದಗಿಸಿದೆ” ಎಂದಿದ್ದಾರೆ.
1984 ರ ದೆಹಲಿಯ ಸಿಖ್ ವಿರೋಧಿ ಗಲಭೆಗಳು ಕಾಂಗ್ರೆಸ್ ಪಕ್ಷಕ್ಕೆ ನೆನಪಿಲ್ಲವೇ, ಅವರು ಅಲ್ಪಸಂಖ್ಯಾತರಾಗಿರಲಿಲ್ಲವೇ? ಎಂದು ಅಲ್ಪಸಂಖ್ಯಾತರ ಹೆಸರಿನಲ್ಲಿ ತಮ್ಮ ರಾಜಕೀಯ ಬೇಳೆಯನ್ನು ಬೇಯಿಸುವ ಕಾಂಗ್ರೆಸ್ ಅನ್ನು ನಾನು ಕೇಳಲು ಬಯಸುತ್ತೇನೆ ಎಂದಿದ್ದಾರೆ.
ಸಂವಿಧಾನವನ್ನು ಉಳಿಸುವ ಬಗ್ಗೆ ಕಾಂಗ್ರೆಸ್ ಪಕ್ಷ ದಿನಕ್ಕೆ 100 ಬಾರಿ ಹೇಳಬೇಕು, ಅದುವೇ ಅವರ ಮಂತ್ರವಾಗಿರಬೇಕು, ಸಂವಿಧಾನದೊಂದಿಗೆ ಯಾವಾಗ ಏನಾಯಿತು ಎಂದು ಎಲ್ಲರಿಗೂ ಗೊತ್ತಿದೆ, ಅದರ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಂಡಿದ್ದರೆ ಆ ತರ ಏನೂ ಆಗುತ್ತಿರಲಿಲ್ಲ. ಆದ್ದರಿಂದ ನೀವು ಪ್ರತಿ ಬಾರಿ ಸಂವಿಧಾನವನ್ನು ಉಳಿಸುವ ಬಗ್ಗೆ ಮಾತನಾಡುವಾಗ, ಕೆಲವು ವಿಷಯಗಳು ನಿಮ್ಮ ತಪ್ಪುಗಳನ್ನು ನೀವು ಅರಿತುಕೊಳ್ಳುವಂತೆ ಮಾಡುತ್ತವೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.