ನವದೆಹಲಿ: ಸುಮಾರು 200 ಪಾಕಿಸ್ಥಾನಿ ಹಿಂದೂಗಳು ಅಟ್ಟಾರಿ-ವಾಘಾ ಗಡಿಯ ಮೂಲಕ ಭಾರತಕ್ಕೆ ಆಗಮಿಸಿದ್ದಾರೆ ಎಂದು ಸುದ್ದಿ ಮೂಲಗಳು ವರದಿ ಮಾಡಿವೆ. ಪಾಕಿಸ್ಥಾನದಲ್ಲಿ ಅಸುರಕ್ಷತೆ ಇರುವುದರಿಂದ ನಾವು ಪಾಕಿಸ್ಥಾನಕ್ಕೆ ಮರಳಲು ಇಷ್ಟಪಡುತ್ತಿಲ್ಲ ಎಂದು ಅವರು ಹೇಳಿದ್ದಾರೆ.
ವರದಿಯ ಪ್ರಕಾರ, ಈ ಹಿಂದೂಗಳು ವಿಸಿಟರ್ ವೀಸಾದ ಮೂಲಕ ಭಾರತಕ್ಕೆ ಬಂದಿದ್ದಾರೆ. ಗಡಿಯಲ್ಲಿನ ಅಧಿಕಾರಿಗಳು ಹಲವಾರು ಪಾಕಿಸ್ಥಾನಿ ಪ್ರಯಾಣಿಕರು ಹಿಂತಿರುಗಲು ಇಷ್ಟಪಡುವುದಿಲ್ಲ ಎಂಬ ಬಲವಾದ ಸೂಚನೆಗಳನ್ನು ನೀಡಿದ್ದಾರೆ ಎಂದು ಹೇಳಿದ್ದಾರೆ.
ವರದಿಯ ಪ್ರಕಾರ, ಪಾಕಿಸ್ಥಾನದ ಹಿಂದೂಗಳು ವಿಸಿಟರ್ ವೀಸಾದಲ್ಲಿ ಭಾರತವನ್ನು ಪ್ರವೇಶಿಸಿದ್ದಾರೆ ಅವರಲ್ಲಿ ಕೆಲವರು ಧಾರ್ಮಿಕ ಕಿರುಕುಳದಿಂದಾಗಿ ಪಾಕಿಸ್ಥಾನದಲ್ಲಿ ಅಸುರಕ್ಷಿತ ಭಾವನೆ ಹೊಂದಿದ್ದಾರೆ ಮತ್ತು ಸಿಎಎ ಜಾರಿಗೆ ಬಂದ ನಂತರ ಭಾರತೀಯ ಪೌರತ್ವ ಪಡೆಯುವ ಆಶಯ ಹೊಂದಿದ್ದಾರೆಂದು ಹೇಳಲಾಗಿದೆ.
ನಾಯಕ ಮತ್ತು ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿಯ ಅಧ್ಯಕ್ಷ ಮಂಜಿಂದರ್ ಸಿಂಗ್ ಸಿರ್ಸಾ ಅವರು ನಾಲ್ಕು ಕುಟುಂಬಗಳನ್ನು ಗಡಿಯಲ್ಲಿ ಸ್ವೀಕರಿಸಿದ್ದಾರೆ. ಧಾರ್ಮಿಕ ಕಿರುಕುಳದಿಂದಾಗಿ ಪಾಕಿಸ್ಥಾನವನ್ನು ತೊರೆದು ಅವರು ಭಾರತಕ್ಕೆ ಬಂದಿದ್ದಾರೆ ಎಂದಿದ್ದಾರೆ.
ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಅವರಿಗೆ ಭಾರತೀಯ ಪೌರತ್ವ ನೀಡುವಂತೆ ವಿನಂತಿಸುವುದಾಗಿ ಹೇಳಿದರು.
ಟ್ವೀಟ್ ಮಾಡಿರುವ ಸಿರ್ಸಾ, “4 ಹಿಂದೂ-ಸಿಖ್ ಕುಟುಂಬಗಳು ತಮ್ಮ ಜೀವ ಮತ್ತು ಧಾರ್ಮಿಕ ನಂಬಿಕೆಯನ್ನು ಉಳಿಸಲು ಪಾಕಿಸ್ಥಾನದಿಂದ ಪಲಾಯನ ಮಾಡಿವೆ” ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.