ಸಾಲಿಗ್ರಾಮ : ಕರ್ನಾಟಕದ ಸಾಲಿಗ್ರಾಮದಲ್ಲಿ ಸ್ವಾಮಿ ವಿವೇಕಾನಂದರ ಅತಿ ಎತ್ತರದ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿದೆ. ಪ್ರಕೃತಿ ಚಿಕಿತ್ಸೆ ಮತ್ತು ಡಿವೈನ್ ಪಾರ್ಕ್ ಪ್ರತಿಷ್ಠಾನದ ಯೋಗ ಆಸ್ಪತ್ರೆಯ ಆವರಣದಲ್ಲಿ ಈ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದೆ. ಫೆಬ್ರವರಿ 1 ರಂದು ಅನಾವರಣಗೊಂಡ ಈ ಪ್ರತಿಮೆಯು 35 ಅಡಿ ಎತ್ತರ ಇದೆ, ಇದು ಕನ್ಯಾಕುಮಾರಿಯಲ್ಲಿರುವ ಪ್ರತಿಮೆಯನ್ನು ಹೋಲುತ್ತದೆ. ಆದರೆ ಅದಕ್ಕಿಂತಲೂ ಎತ್ತರವಾಗಿದೆ.
ಜಿಗಣಿಯ ಸ್ವಾಮಿ ವಿವೇಕಾನಂದ ಯೋಗ ವಿಶ್ವವಿದ್ಯಾಲಯದ ಕುಲಪತಿ ಎಚ್. ಆರ್. ನಾಗೇಂದ್ರ ಅವರು ಈ ಪ್ರತಿಮೆಯನ್ನು ಅನಾವರಣಗೊಳಿಸಿದರು.
ಯೋಜನೆಯ ಭಾಗವಾಗಿ, ಆವರಣದಲ್ಲಿ ‘ಯೋಗಬನ’ ಕೂಡ ನಿರ್ಮಾಣವಾಗಿದೆ. ಈ ಪ್ರತಿಮೆಯು ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ ಮತ್ತು ‘ಯೋಗಬನ’ ಪ್ರವಾಸಿಗರಿಗೆ ಮತ್ತು ಭಕ್ತರಿಗೆ ಸ್ವಾಮಿ ವಿವೇಕಾನಂದರ ತತ್ವಶಾಸ್ತ್ರ ಮತ್ತು ಅವರ ಬೋಧನೆಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಅವಕಾಶವನ್ನು ಒದಗಿಸಲಿದೆ. ಡಿವೈನ್ ಪಾರ್ಕ್ ಮಾನ್ಯತೆಗಾಗಿ ಗಿನ್ನೆಸ್ ರೆಕಾರ್ಡ್ಸ್ ಅನ್ನು ಕೂಡ ಸಂಪರ್ಕಿಸಿದೆ.
ಈ ಪ್ರತಿಮೆಯು ಸ್ವಾಮಿ ವಿವೇಕಾನಂದರ ‘ಆತ್ಮದ ಸಂಭಾವ್ಯ ದೈವತ್ವ’ ಪರಿಕಲ್ಪನೆಯನ್ನು ಪ್ರತಿನಿಧಿಸುತ್ತದೆ ಮತ್ತು ಧರ್ಮಶಾಸ್ತ್ರದ ಹೊಸ ಮತ್ತು ಉತ್ತೇಜಕ ಪರಿಕಲ್ಪನೆಯನ್ನು ನೀಡುತ್ತದೆ ಎಂದು ಡಿವೈನ್ ಪಾರ್ಕ್ ಮುಖ್ಯಸ್ಥ ಡಾ. ಚಂದ್ರಶೇಖರ್ ಉಡುಪ ಹೇಳಿದ್ದಾರೆ. ಪ್ರತಿಮೆಯ ನೋಟವು ನೋಡುಗರಿಗೆ ಶುದ್ಧತೆ, ತಾಳ್ಮೆ ಮತ್ತು ಪರಿಶ್ರಮದ ಅನುಭೂತಿಯನ್ನು ನೀಡುತ್ತದೆ. ಇದು ಹಸಿರು ಮತ್ತು ಫಲವತ್ತಾದ ಕೃಷಿ ಭೂಮಿಯ ಮಧ್ಯದಲ್ಲಿದೆ. ಪ್ರಶಾಂತತೆಯ ಜೊತೆಗೆ, ಪ್ರತಿಮೆಯು ಶಾಂತ, ಸುರಕ್ಷತೆಯ ಭಾವವನ್ನು ಪ್ರತಿಬಿಂಬಿಸುತ್ತದೆ.
ಈ ಪ್ರತಿಮೆಯನ್ನು ಖ್ಯಾತ ಶಿಲ್ಪಿ ಶ್ರೀಧರ್ ಮೂರ್ತಿ ಮತ್ತು ಅವರ ತಂಡ ಕೆತ್ತಿದೆ. ಮುರುಡೇಶ್ವರದಲ್ಲಿರುವ ಅತಿ ಎತ್ತರದ ಶಿವನ ಪ್ರತಿಮೆಯನ್ನು ಮತ್ತು ಗದಗದಲ್ಲಿರುವ 111 ಅಡಿ ಎತ್ತರದ ಬಸವಣ್ಣ ಪ್ರತಿಮೆಯನ್ನು ಕೆತ್ತಿದ್ದು ಕೂಡ ಇದೇ ತಂಡ. ವಿವೇಕಾನಂದರ ಪ್ರತಿಮೆಯನ್ನು ಪೂರ್ಣಗೊಳಿಸಲು ಸುಮಾರು ಆರು ತಿಂಗಳ ಕಾಲ ಸುಮಾರು 40 ಕುಶಲಕರ್ಮಿಗಳು ಕೆಲಸ ಮಾಡಿದ್ದಾರೆ ಎಂದು ಡಿವೈನ್ ಪಾರ್ಕ್ ಅಧಿಕಾರಿಗಳು ಹೇಳುತ್ತಾರೆ. ಪ್ರತಿಮೆಯನ್ನು ಚಿತ್ರಿಸಲು ಲೋಹದ ಮಿಶ್ರಣವನ್ನು ಬಳಸಲಾಗಿದ್ದು, ಅದು ಭಾರೀ ಮಳೆ, ಗಾಳಿಯಿಂದ ಪ್ರತಿಮೆಯನ್ನು ರಕ್ಷಿಸಲಿದೆ ಎಂದು ಮಾಹಿತಿ ನೀಡಿದ್ದಾರೆ.
Unveiling World’s Tallest Statue of Swami Vivekananda in Sarvah Kshema Hospital & Research Foundation, a division of Divinepark- Saligrama, Udupi district. Karnataka 😊🙏 pic.twitter.com/KzxUtU1Oxe
— Pronam Bharat (@BharatPronam) February 3, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.