ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಅವರನ್ನು ಫೈನಾನ್ಷಿಯಲ್ ಟೈಮ್ಸ್ (ಎಫ್ಟಿ)ನ ಅಂಗವಾದ ಬ್ಯಾಂಕರ್ ಮ್ಯಾಗಜೀನ್ ಏಷ್ಯಾ-ಪೆಸಿಫಿಕ್ 2020 ರ ‘ಸೆಂಟ್ರಲ್ ಬ್ಯಾಂಕರ್ ಆಫ್ ದಿ ಇಯರ್’ ಏಷ್ಯಾ-ಪೆಸಿಫಿಕ್ ಎಂದು ಹೆಸರಿಸಿದೆ.
ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ಮತ್ತು ಆರ್ಥಿಕತೆಯನ್ನು ಸ್ಥಿರಗೊಳಿಸಲು ಉತ್ತಮವಾಗಿ ಕಾರ್ಯ ನಿರ್ವಹಿಸಿದ ಕೇಂದ್ರ ಬ್ಯಾಂಕರ್ಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
ನ್ಯಾಷನಲ್ ಬ್ಯಾಂಕ್ ಆಫ್ ಸೆರ್ಬಿಯಾದ ಜೋರ್ಗೊವಂಕಾ ತಬಕೋವಿ ಅವರನ್ನು ‘ಗ್ಲೋಬಲ್ ಸೆಂಟ್ರಲ್ ಬ್ಯಾಂಕರ್ ಆಫ್ ದಿ ಇಯರ್’ ಆಗಿ ಆಯ್ಕೆ ಮಾಡಲಾಗಿದೆ. ಜನವರಿ 2 ರಂದು ಬ್ಯಾಂಕರ್ ಮ್ಯಾಗಜೀನ್ ತನ್ನ ಸಂಪಾದಕೀಯದಲ್ಲಿ ಪ್ರಶಸ್ತಿಗಳನ್ನು ಘೋಷಿಸಿದೆ.
ದಾಸ್ ಅವರನ್ನು ಆಯ್ಕೆ ಮಾಡಿರುವ ಬಗ್ಗೆ ಹೇಳಿರುವ ಮ್ಯಾಗಜೀನ್, “ಭಾರತದ ಬ್ಯಾಂಕುಗಳು ಹಲವು ಸಮಸ್ಯೆಗಳನ್ನು ಎದುರಿಸುತ್ತಿವೆ. ಸಾಲಗಳಿಂದ ಹಿಡಿದು ವಂಚನೆಗಳವರೆಗೆ ಸವಾಲುಗಳನ್ನು ಎದುರಿಸುತ್ತಿದೆ. ಪುನರಾವರ್ತಿತ ಆರ್ಥಿಕ ಕುಸಿತದಿಂದಾಗಿ 2019 ರಲ್ಲಿ ಕೇಂದ್ರ ಬ್ಯಾಂಕ್ ಐದು ಬಾರಿ ಬಡ್ಡಿದರಗಳನ್ನು ಕಡಿತಗೊಳಿಸಿದೆ ಮತ್ತು ಅಗತ್ಯವಿದ್ದರೆ ಅವುಗಳನ್ನು ಮತ್ತೆ ಕಡಿತಗೊಳಿಸಲು ಮುಕ್ತವಾಗಿದೆ.
“ಈ ಸವಾಲುಗಳನ್ನು ಎದುರಿಸುತ್ತಿರುವ ಶಕ್ತಿಕಾಂತ ದಾಸ್ ಅವರು ಭಾರತದಲ್ಲಿ ಬ್ಯಾಂಕಿಂಗ್ ಅನ್ನು ನಿರ್ಬಂಧಿತ ವಿಧಾನದ ಮೂಲಕ ಗುಣಮಟ್ಟಕ್ಕೆ ತರಲು ಕ್ರಮ ಕೈಗೊಂಡಿದ್ದಾರೆ” ಎಂದು ಮ್ಯಾಗಜೀನ್ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.