ನವದೆಹಲಿ: ಕೇರಳದಲ್ಲಿ ಈಗ ಕೊರೋನವೈರಸ್ನ ಮೂರನೇ ಪ್ರಕರಣ ವರದಿ ಆಗಿದೆ. ಕೇರಳ ಆರೋಗ್ಯ ಸಚಿವೆ ಕೆ. ಕೆ. ಶೈಲಜಾ ಅವರು ಭಾರತದಲ್ಲಿ ಮೂರನೇ ಕರೋನವೈರಸ್ ಪ್ರಕರಣವನ್ನು ದೃಢಪಡಿಸಿದ್ದಾರೆ. ಕೇರಳದ ಕಾಸರಗೋಡಿನಲ್ಲಿ ರೋಗಿಯೊಬ್ಬರು ವೈರಸ್ಸಿಗೆ ತುತ್ತಾಗಿರುವುದು ಪರೀಕ್ಷೆಯಿಂದ ದೃಢಪಟ್ಟಿದೆ.
ಕೊರೋನವೈರಸ್ ಮೂರನೆಯ ಪ್ರಕರಣದಲ್ಲೂ ಚೀನಾದಿಂದ ಕೇರಳಕ್ಕೆ ಆಗಮಿಸಿದ ವಿದ್ಯಾರ್ಥಿಯಲ್ಲಿ ವೈರಸ್ ಪತ್ತೆಯಾಗಿದೆ. ಉಳಿದ ಇಬ್ಬರು ಕೂಡ ಚೀನಾದಿಂದ ವಾಪಾಸ್ಸಾಗಿದ್ದವರಾಗಿದ್ದಾರೆ.
“ರೋಗಿಯು ಕಾಸರಗೋಡಿನ ಕಾಞ್ಂಗಾಡ್ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ರೋಗಿಯ ಸ್ಥಿತಿ ಸ್ಥಿರವಾಗಿದೆ. ರೋಗಿಯು ಚೀನಾದ ವುಹಾನ್ ನಿಂದ ಮರಳಿದ್ದರು” ಎಂದು ಶೈಲಾಜಾ ಹೇಳಿದ್ದಾರೆ.
ಕರೋನವೈರಸ್ನ ಎಲ್ಲಾ ಮೂರು ಪ್ರಕರಣಗಳು ಕೇರಳದಲ್ಲಿ ವರದಿಯಾಗಿವೆ, ಅಲ್ಲಿನ ಸರ್ಕಾರವು ಸುಮಾರು 2,000 ಜನರನ್ನು ವಿವಿಧ ಆಸ್ಪತ್ರೆಗಳು, ಇತರ ಸೌಲಭ್ಯ ಕೇಂದ್ರಗಳಲ್ಲಿ ನಿಗಾ ಘಟಕದಲ್ಲಿ ಇಟ್ಟಿದೆ.
ಮೊದಲ ಪ್ರಕರಣವು ತ್ರಿಶೂರ್ನಲ್ಲಿ ಪತ್ತೆಯಾಗಿದೆ, ಎರಡನೇ ಪ್ರಕರಣ ಅಲಫುಝಾದಲ್ಲಿ ಪತ್ತೆಯಾಗಿದೆ. ಮೂರನೇ ಪ್ರಕರಣ ಕಾಸರಗೋಡಿನಲ್ಲಿ ಪತ್ತೆಯಾಗಿದೆ.
ದೇಶದ ಇತರ ಯಾವುದೇ ಭಾಗದಲ್ಲೂ ವೈರಸ್ ಪತ್ತೆಯಾಗಿಲ್ಲ. ಚೀನಾದಿಂದ ಬಂದಿರುವ ವಿದ್ಯಾರ್ಥಿಗಳೆಲ್ಲರನ್ನೂ ಅಬ್ಸರ್ವೇಶನ್ನಿನಲ್ಲಿ ಇಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.