ನವದೆಹಲಿ: ಕೋರೋನ ವೈರಸ್ ಪೀಡಿತ ಚೀನಾದ ವುಹಾನ್ನಿಂದ 323 ಭಾರತೀಯರು ಮತ್ತು ಏಳು ಮಾಲ್ಡೀವ್ಸ್ ನಾಗರಿಕರನ್ನು ಹೊತ್ತ ಎರಡನೇ ಏರ್ ಇಂಡಿಯಾ ವಿಮಾನ ಭಾನುವಾರ ಬೆಳಿಗ್ಗೆ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ.
ಶನಿವಾರ ಮುಂಜಾನೆ ನಡೆದ ಮೊದಲ ಹಾರಾಟದಲ್ಲಿ 324 ಭಾರತೀಯರನ್ನು ಸ್ಥಳಾಂತರಿಸಲಾಗಿದೆ. ಇವರನ್ನು ಸೈನ್ಯ ಮತ್ತು ಐಟಿಬಿಪಿ ಸ್ಥಾಪಿಸಿದ ಎರಡು ಸಂಪರ್ಕ ತಡೆ ಕೇಂದ್ರದಲ್ಲಿ ಇಡಲಾಗಿದೆ. ಭಾರತಕ್ಕೆ ಬಂದ ಯಾರೊಬ್ಬರಿಗೂ ಕೊರೋನವೈರಸ್ ಇರುವುದು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ಸಷ್ಟಪಡಿಸಿದ್ದಾರೆ.
ವಿದೇಶಾಂಗ ಸಚಿವ ಎಸ್. ಜೈಶಂಕರ್ ಭಾನುವಾರ ಟ್ವೀಟ್ ಮಾಡಿದ್ದು, “7 ಮಾಲ್ಡೀವಿಯನ್ನರು ಸೇರಿದಂತೆ 323 ಭಾರತೀಯರನ್ನು ಹೊತ್ತ ಎರಡನೇ ಏರ್ ಇಂಡಿಯಾ ವಿಮಾನ ಭಾರತಕ್ಕೆ ಬಂದಿಳಿದಿದೆ” ಎಂದಿದ್ದಾರೆ. ಮತ್ತೊಂದು ಟ್ವಿಟ್ ಮಾಡಿರುವ ಅವರು, “ನಮ್ಮ ಜನರ ಯೋಗ ಕ್ಷೇಮವನ್ನು ಬದ್ಧತೆಯೊಂದಿಗೆ ನೋಡಿಕೊಳ್ಳುತ್ತೇವೆ” ಎಂದಿದ್ದಾರೆ.
7 Maldivians brought back with 323 Indians from Wuhan on the second @airindiain flight today. #NeighbourhoodFirst at work again. @ibusolih @MohamedNasheed @abdulla_shahid
— Dr. S. Jaishankar (@DrSJaishankar) February 2, 2020
ತನ್ನ ನಾಗರಿಕರನ್ನು ಕಾಪಾಡಲು ಭಾರತ ಕೈಗೊಳ್ಳುತ್ತಿರುವ ಕಾರ್ಯಕ್ಕೆ ವಿಶ್ವವೇ ಭೇಷ್ ಎನ್ನುತ್ತಿದೆ. ಇನ್ನೊಂದೆಡೆ ಪಾಕಿಸ್ಥಾನ ತನ್ನ ವಿದ್ಯಾರ್ಥಿಗಳನ್ನು ಚೀನಾದಲ್ಲಿಯೇ ಅನಾಥವಾಗಿ ಬಿಟ್ಟಿದೆ. “ಭಾರತವನ್ನು ನೋಡಿಯಾದರೂ ಕಲಿಯಿರಿ, ನಮ್ಮನ್ನು ಇಲ್ಲಿಂದ ವಾಪಾಸ್ ಕರೆಸಿ” ಎಂದು ಪಾಕ್ ವಿದ್ಯಾರ್ಥಿಗಳು ಚೀನಾದಲ್ಲಿ ತಮ್ಮ ಸರ್ಕಾರಕ್ಕೆ ಅಂಗಲಾಚುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.