ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ನಾಗರಿಕರ ರಾಷ್ಟ್ರೀಯ ನೋಂದಣಿ (ಎನ್ಆರ್ಸಿ) ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳ ನಡುವೆಯೇ, ಸೋಷಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ವೈರಲ್ ಆಗಿದೆ. ಅದರಲ್ಲಿ ಮುಸ್ಲಿಮರು ಸಿಂಧಿ ಅಂಗಡಿಗಳನ್ನು ಬಹಿಷ್ಕರಿಸಬೇಕು ಎಂದು ಮನವಿ ಮಾಡಲಾಗಿದೆ.
ಸಿಎಎ, ಎನ್ಆರ್ಸಿ ಮತ್ತು ಎನ್ಪಿಆರ್ಗಳಿಗೆ ಸಿಂಧಿಗಳು ಬೆಂಬಲವನ್ನು ನೀಡುತ್ತಿದ್ದಾರೆ. ಹೀಗಾಗಿ ಅವರುಗಳ ಅಂಗಡಿಗಳಿಗೆ ಮುಸ್ಲಿಮರು ಹೋಗಬಾರದು ಎಂದು ಇದರಲ್ಲಿ ಹೇಳಲಾಗಿದೆ
ಪೋಸ್ಟ್ ಪ್ರಕಾರ, ಭೋಪಾಲ್ ಮಸೀದಿಗಳಲ್ಲಿ ಈ ಬಗ್ಗೆ ಕರಪತ್ರಗಳನ್ನು ವಿತರಿಸಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಸಿಂಧಿ ಸಮುದಾಯವು ನಡೆಸುವ ಅಂಗಡಿಗಳ ಸಂಪೂರ್ಣ ಬಹಿಷ್ಕಾರಕ್ಕೆ ಮಸೀದಿಗಳು ಕರೆ ನೀಡಿವೆ ಎಂದು ಹೇಳಲಾಗಿದೆ.
ಈ ಹಿಂದೆ, ಕೇರಳದ ಕುಟ್ಟಿಪುರಂನಲ್ಲಿ ಹಿಂದೂ ಪ್ರಾಬಲ್ಯದ ಪ್ರದೇಶಕ್ಕೆ ಸೇರಿದ ಬಡ ನಿವಾಸಿಗಳಿಗೆ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಯನ್ನು ಬೆಂಬಲಿಸಿದ್ದಕ್ಕಾಗಿ ಕುಡಿಯುವ ನೀರನ್ನು ನಿರಾಕರಿಸಲಾಗಿತ್ತು. ಇದೀಗ ಮತ್ತೊಂದು ರೀತಿಯಲ್ಲಿ ಸಿಎಎ ಬೆಂಬಲಿಗರನ್ನು ದಮನಿಸುವ ಪ್ರಯತ್ನಕ್ಕೆ ಕೈ ಹಾಕಲಾಗಿದೆ.
हम लोग सिर्फ़ सोचते ही रहेगे इन लोगो ने पर्चे भी छपवा दिए है, ये Pamphlet भोपाल की मस्जिदों से बांटे जा रहे है।
इसमे सिंधी समाज के लोगो से कुछ भी नही ख़रीदने की अपील की गयी है।
हिन्दुओ क्या तुम भी इनका आर्थिक बहिष्कार करके इनको मुहतोड़ जवाब दे सकते हो ??? pic.twitter.com/CYIAazEH8C
— Pushpendra Kulshrestha (@Nationalist_Om) February 2, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.