ನವದೆಹಲಿ: ಚೀನಾದಲ್ಲಿ ಕೊರೊನಾವೈರಸ್ ಉಂಟುಮಾಡಿರುವ ಭೀತಿಯ ನಡುವೆಯೇ, ಏರ್ ಇಂಡಿಯಾ ವಿಮಾನ ಚೀನಾದ ವುಹಾನ್ ನಗರದಲ್ಲಿದ್ದ ಭಾರತೀಯರ ರಕ್ಷಣೆಗೆ ಧಾವಿಸಿದೆ. 324 ಭಾರತೀಯರನ್ನು ಹೊತ್ತ ಏರ್ ಫ್ಲೈಟ್ನ ಜಂಬೊ ಬಿ 747 ವಿಮಾನವು ಶನಿವಾರ ಬೆಳಿಗ್ಗೆ ವುಹಾನ್ನಿಂದ ಹೊರಟು ಬೆಳಿಗ್ಗೆ 7:30 ರ ಸುಮಾರಿಗೆ ದೆಹಲಿಗೆ ಬಂದಿಳಿದಿದೆ. ರಾಮ್ ಮನೋಹರ್ ಲೋಹಿಯಾ (ಆರ್ಎಂಎಲ್) ಆಸ್ಪತ್ರೆಯ ಐವರು ವೈದ್ಯರು ಮತ್ತು ಒಬ್ಬ ಅರೆ ವೈದ್ಯಕೀಯ ಸಿಬ್ಬಂದಿ ವಿಮಾನದಲ್ಲಿದ್ದರು ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ.
ಮುನ್ನೆಚ್ಚರಿಕೆ ಕ್ರಮವಾಗಿ ಭಾರತಕ್ಕೆ ಹಿಂತಿರುಗುತ್ತಿರುವ ಭಾರತೀಯ ಪ್ರಜೆಗಳನ್ನು ಎರಡು ವಾರಗಳ ಕಾಲ ವಿಶೇಷವಾಗಿ ರಚಿಸಲಾದ ಸಂಪರ್ಕ ತಡೆ ಕೇಂದ್ರಗಳಲ್ಲಿ ಇರಿಸಲಾಗುವುದು ಎಂದು ವರದಿಗಳು ಹೇಳುತ್ತಿವೆ. ಮಾನೇಸರ್ ಮತ್ತು ಚವಾಲ್ ಶಿಬಿರದಲ್ಲಿ ಸರ್ಕಾರ ಸಾಕಷ್ಟು ಕ್ಯಾರೆಂಟೈನ್ ಕೇಂದ್ರಗಳನ್ನು ಮಾಡಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
“ರಾಷ್ಟ್ರೀಯ ವಿಮಾನಯಾನ ಮತ್ತೊಮ್ಮೆ ರಕ್ಷಣೆಗೆ ಧಾವಿಸಿದೆ. ಈ ಬಾರಿ ಕರೋನವೈರಸ್ ಹರಡುತ್ತಿರುವ ಸ್ಥಳವಾದ ವುಹಾನ್ನಿಂದ ಭಾರತೀಯರನ್ನು ರಕ್ಷಿಸಲು ಮುಂದಾಗಿದೆ. ದೆಹಲಿ ಮತ್ತು ವುಹಾನ್ ನಡುವೆ ಜಂಬೊ 747 ಕಾರ್ಯಾಚರಣೆ ನಡೆಸುವ ಮೂಲಕ ಈ ಮಿಷನ್ ಪ್ರಾರಂಭವಾಗುತ್ತದೆ” ಎಂದು ಎಐಆರ್ ಇಂಡಿಯಾ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಶ್ವನಿ ಲೋಹನ್ ಜನವರಿ 31 ರಂದು ಟ್ವೀಟ್ನಲ್ಲಿ ಹೇಳಿದ್ದರು.
ಆರೋಗ್ಯ ಸಚಿವಾಲಯದ ವಿಶೇಷ ಕಾರ್ಯದರ್ಶಿ ಸಂಜೀವ ಕುಮಾರ್ ಮಾತನಾಡಿ, “ಏರ್ ಇಂಡಿಯಾದ ವಿಮಾನದಲ್ಲಿ ವೈದ್ಯರು, ಸಾರ್ವಜನಿಕ ಆರೋಗ್ಯ ತಜ್ಞರ ತಂಡವನ್ನು ಕಳುಹಿಸಲಾಗಿದೆ. ಭಾರತಕ್ಕೆ ಬರುವ ಪ್ರಯಾಣಿಕರನ್ನು ಮಾನೆಸರ್ (ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳು ನಿರ್ವಹಿಸುತ್ತಿದೆ) ಮತ್ತು ಚಾವ್ಲಾ ಕ್ಯಾಂಪ್ (ಐಟಿಬಿಪಿ ನಿರ್ವಹಿಸುತ್ತದೆ) ನಲ್ಲಿ ಸ್ಥಾಪಿಸಲಾದ ಎರಡು ಸಂಪರ್ಕ ತಡೆ ಕೇಂದ್ರಗಳಲ್ಲಿ 14 ದಿನಗಳವರೆಗೆ ಇಡಲಾಗುತ್ತದೆ. ಸುಮಾರು 80 ಪುರುಷ ಪ್ರಯಾಣಿಕರನ್ನು ಮಾನೇಸರ್ ಕ್ಯಾಂಪ್ಗೆ ಕಳುಹಿಸಲು ಉದ್ದೇಶಿಸಲಾಗಿದೆ ಮತ್ತು ಮಹಿಳೆಯರನ್ನು ಐಟಿಬಿಪಿ ಶಿಬಿರದಲ್ಲಿ ಇರಿಸಲಾಗುತ್ತದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.