ಹಾಸನ: ಆಮಿಷಕ್ಕೊಳಗಾಗಿ ಕ್ರೈಸ್ಥ ಧರ್ಮಕ್ಕೆ ಮತಾಂತರಗೊಂಡ ಸುಮಾರು 9 ಕುಟುಂಗಳು ಮರಳಿ ಹಿಂದೂ ಧರ್ಮವನ್ನು ಸ್ವೀಕರಿಸಿದ ಸನ್ನಿವೇಶ ಹಾಸನ ಜಿಲ್ಲೆಯ ಅರಸೀಕರೆ ತಾಲೂಕಿನ ಬನ್ನಿಮರದ ಹಟ್ಟಿ ಗ್ರಾಮದಲ್ಲಿ ನಡೆದಿದೆ. ಋಷಿ ಕುಮಾರ ಸ್ವಾಮೀಜಿ ಅವರು ಈ ಕುಟುಂಬಗಳನ್ನು ಮರಳಿ ಹಿಂದೂ ಧರ್ಮಕ್ಕೆ ಬರುವಂತೆ ಮಾಡಿದ್ದಾರೆ.
ರಾಜು ಫಾಸ್ಟರ್ ಎಂಬ ವ್ಯಕ್ತಿ ಗ್ರಾಮಸ್ಥರ ತಲೆ ಕೆಡಿಸಿ ಮತಾಂತರ ನಡೆಸುತ್ತಿದ್ದಾನೆ ಎನ್ನಲಾಗಿದೆ. ಈತ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ಬಳಿಕ ಕುಗ್ರಾಮಗಳಲ್ಲಿನ ಹಿಂದೂಗಳನ್ನು ಬಲವಂತವಾಗಿ ಮತಾಂತರ ಮಾಡುತ್ತಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಈಗ ಗ್ರಾಮಸ್ಥರು ಈತನ ವಿರುದ್ಧ ತಿರುಗಿ ಬಿದ್ದಿದ್ದಾರೆ.
ಬನ್ನಿಮರದ ಹಟ್ಟಿ ಗ್ರಾಮದಲ್ಲಿ ಸುಮಾರು 50 ಕುಟುಂಬಗಳಿದ್ದು, ಇವರೆಲ್ಲರೂ ಬಡವರೇ ಆಗಿದ್ದಾರೆ. ಇವರಿಗೆ ಆಮಿಷ ತೋರಿಸಿ ಸುಮಾರು 9 ಕುಟುಂಬಗಳನ್ನ ಮತಾಂತರ ಮಡಲಾಗಿದೆ ಎನ್ನಲಾಗಿದೆ. ಮತಾಂತರಗೊಂಡವರು ತಮ್ಮ ತಂದೆ ತಾಯಿಯನ್ನೂ ಮತಾಂತರ ಆಗುವಂತೆ ಬಲವಂತ ಮಾಡುತ್ತಿದ್ದರು ಮತ್ತು ಒಪ್ಪದಿದ್ದರೆ ಮನೆಯಿಂದ ಹೊರ ಹಾಕಿದ್ದರು ಎಂಬ ಆರೋಪಗಳೂ ಇವೆ. ಕೆಲವರು ತಮ್ಮ ಮನೆಯಲ್ಲಿದ್ದ ಹಿಂದೂ ದೇವರ ಫೋಟೋಗಳನ್ನೂ ಗೆ ಬಿಸಾಡಿದ್ದಾರೆ ಎನ್ನಲಾಗಿದೆ.
ಈ ನಡುವೆ ಗ್ರಾಮದಲ್ಲಿ ನಿರ್ಮಾಣವಾಗಿರುವ ಚರ್ಚ್ಗೆ ಕರೆದೊಯ್ದು ಇವರುಗಳಿಗೆ ಅಲ್ಲಿನ ತೀರ್ಥ ಕುಡಿಸಿ ಮತಾಂತರ ಮಾಡಲಾಗಿದೆ. ಹೀಗೆ ಮತಾಂತರವಾದ ಬಳಿಕ ಗ್ರಾಮದಲ್ಲಿ ಸಾವು ನೋವು ಹೆಚ್ಚಾಗಿದೆ ಎಂಬ ಆತಂಕವೂ ಗ್ರಾಮಸ್ಥರಿಗೆ ಕಾಡತೊಡಗಿದೆ.
ಋಷಿಕುಮಾರ ಸ್ವಾಮೀಜಿ ಮತ್ತು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಗ್ರಾಮದ ಎಲ್ಲಾ ಮನೆಗಳಿಗೆ ಭೇಟಿ ನೀಡಿ, ಮಾತನಾಡಿಸಿ ಹಿಂದೂ ಧರ್ಮದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. 9 ಕುಟುಂಬಗಳು ಈಗ ಶಿವ ಮಂತ್ರವನ್ನು ಪಠಿಸಿ ಮರಳಿ ಹಿಂದೂ ಧರ್ಮವನ್ನು ಸ್ವೀಕರಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.