ಕೋಲ್ಕತ್ತಾ: ಮೊಹಮ್ಮದ್ ಅಲಿ ಜಿನ್ನಾ ಜಾತ್ಯಾತೀತ ನಾಯಕನೇ ಆಗಿದ್ದ, ಆದರೆ ಕಾಂಗ್ರೆಸ್ ಆಡಳಿತದಲ್ಲಿ ಇದ್ದ ಕೆಲವು ಕೋಮುವಾದಿ ನಾಯಕರ ಕಾರಣದಿಂದಾಗಿ ಭಾರತ ಮತ್ತು ಪಾಕಿಸ್ಥಾನ ವಿಭಜನೆಯಾಯಿತು ಎಂದು ಪಶ್ಚಿಮಬಂಗಾಳದ ಬಿಜೆಪಿ ಉಪಾಧ್ಯಕ್ಷ ಚಂದ್ರ ಕುಮಾರ್ ಬೋಸ್ ಹೇಳಿದ್ದಾರೆ.
ಜನವರಿ 23 ಅನ್ನು ‘ದೇಶಭಕ್ತ ದಿನ’ ಎಂದು ಘೋಷಿಸುವಂತೆ ಬೇಡಿಕೆಯಿಟ್ಟು ನಡೆಸಲಾದ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸೆಂಟ್ರಲ್ ಕೋಲ್ಕತ್ತಾದ ಹಜ್ರಾದಿಂದ ನೇತಾಜೀ ಭವನದವರೆಗೆ ಸಮಾವೇಶ ಜರಗಿತು.
“ಜಿನ್ನಾ ಅವರು ಜಾತ್ಯತೀತ ನಾಯಕರಾಗಿದ್ದರು ಮತ್ತು ಅವರು ಎಂದಿಗೂ ವಿಭಜನೆಯನ್ನು ಬಯಸಿರಲಿಲ್ಲ. ಅವರನ್ನು ಕಾಂಗ್ರೆಸ್ ಬಲವಂತವಾಗಿ ದೂರವಿಟ್ಟಿತು. ಹೀಗಾಗಿ ಭಾರತದಲ್ಲಿ ಅಧಿಕಾರವನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಅರಿತುಕೊಂಡರು, ಅದಕ್ಕಾಗಿಯೇ 1940 ರಲ್ಲಿ ಲಾಹೋರ್ ಸಮ್ಮೇಳನದಲ್ಲಿ ಅವರು ಪಾಕಿಸ್ಥಾನ ವಿಷಯವನ್ನು ಎತ್ತಿದರು. ಆದರೆ ಅದಕ್ಕೂ ಮೊದಲು, ಅವರು ಪಾಕಿಸ್ಥಾನದ ಪರವಾಗಿರಲಿಲ್ಲ” ಎಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಮರಿ ಮೊಮ್ಮಗ ಸಿ. ಕೆ. ಬೋಸ್ ಹೇಳಿದ್ದಾರೆ.
“ಕಾಂಗ್ರೆಸ್ ಆಡಳಿತದ ಕೋಮುವಾದಿ ನಾಯಕರ ಕಾರಣದಿಂದಾಗಿ ಭಾರತ ವಿಭಜನೆಯಾಯಿತು. ಸರ್ದಾರ್ ಪಟೇಲ್, ಪಂಡಿತ್ ಜವಾಹರಲಾಲ್ ನೆಹರು ಮತ್ತು ಮಹಾತ್ಮ ಗಾಂಧಿ ಕೂಡ ವಿಭಜನೆಯನ್ನು ಇಷ್ಟವಿಲ್ಲದೆ ಒಪ್ಪಿಕೊಂಡ. 1955 ರವರೆಗೆ ಪಾಕಿಸ್ಥಾನ ಜಾತ್ಯತೀತ ರಾಷ್ಟ್ರವಾಗಿತ್ತು. ದುರದೃಷ್ಟವಶಾತ್, ಜಿನ್ನಾ ನಿಧನರಾದ ನಂತರ ಪಾಕಿಸ್ಥಾನವು ಇಸ್ಲಾಮಿಕ್ ರಾಷ್ಟ್ರವಾಯಿತು. ಆದರೆ ಭಾರತ ಜಾತ್ಯತೀತ ರಾಷ್ಟ್ರವಾಗಿ ಉಳಿದಿದೆ ಮತ್ತು ಜಾತ್ಯಾತೀತತೆ ಭಾರತದ ಚೇತನವಾಗಿದೆ “ಎಂದಿದ್ದಾರೆ.
‘ಜೈ ಹಿಂದ್’ ಎಂಬುದು ಆಜಾದ್ ಹಿಂದ್ ಸರ್ಕಾರ ಮತ್ತು ಆಜಾದ್ ಹಿಂದ್ ಫೌಜ್ನಲ್ಲಿ ಬಳಸಲ್ಪಟ್ಟ ಘೋಷಣೆಯಾಗಿದೆ ಎಂದು ಬೋಸ್ ಹೇಳಿದ್ದಾರೆ. “ಇದು ಎಲ್ಲಾ ಧರ್ಮಗಳು, ಎಲ್ಲಾ ಸಮುದಾಯಗಳು, ಎಲ್ಲಾ ಜಾತಿ ಮತ್ತು ಧರ್ಮವನ್ನು ಮೀರಿದೆ. ಆದ್ದರಿಂದ ಎಲ್ಲಾ ರಾಜಕೀಯ ಪಕ್ಷಗಳು ‘ಜೈ ಹಿಂದ್’ ಅನ್ನು ಬಳಸಬೇಕು. ಇದು ಯಾವುದೇ ತೊಂದರೆ ಅಥವಾ ಯಾವುದೇ ಸಮಸ್ಯೆಯನ್ನು ಉಂಟುಮಾಡುವುದಿಲ್ಲ” ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.