ಪ್ರತಿ ಚುನಾವಣೆಯಲ್ಲೂ ಬಿಜೆಪಿ ವಿಜಯವನ್ನು ಖಾತ್ರಿಪಡಿಸುವ ಬಿಜೆಪಿಯ ಸ್ಟಾರ್ ಪ್ರಚಾರಕರೆಂದರೆ ಅದು ಮಣಿಶಂಕರ್ ಅಯ್ಯರ್. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಬಗ್ಗೆ ಅಸಹ್ಯಕರ ಹೇಳಿಕೆಗಳನ್ನು ನೀಡುತ್ತಲೇ ಅವರು ಬಿಜೆಪಿಗೆ ಗೆಲ್ಲಲು ಪರೋಕ್ಷವಾಗಿ ಸಹಾಯ ಮಾಡುತ್ತಾರೆ. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕನಾದರೂ, ರಾಹುಲ್ ಮತ್ತು ಸೋನಿಯಾ ಗಾಂಧಿಯವರ ವಿಶ್ವಾಸಾರ್ಹ ವ್ಯಕ್ತಿಯಾದರೂ, ವಿಚಿತ್ರವಾಗಿ ವರ್ತಿಸುವುದು ಅವರ ಹುಟ್ಟು ಗುಣ. ತಾನು ಸಕ್ರಿಯ ಸದಸ್ಯರಾಗಿರುವ ದೇಶದ ಅತ್ಯಂತ ಹಳೆಯ ಪಕ್ಷಕ್ಕೆ ಇವರು ಒಳಿತು ಮಾಡುವುದಕ್ಕಿಂತ ಹಾನಿ ಮಾಡಿದ್ದೇ ಹೆಚ್ಚು. ಇದೀಗ ದೆಹಲಿ ಚುನಾವಣೆಯ ಹಿನ್ನಲೆಯಲ್ಲಿ ಅವರು ಮತ್ತೆ ಮುಂಚೂಣಿಗೆ ಬಂದಿದ್ದಾರೆ.
ರಾಷ್ಟ್ರ ರಾಜಧಾನಿಯ ಶಾಹೀನ್ ಬಾಗ್ನಲ್ಲಿ ಪ್ರತಿಭಟನೆಗಳು ಕಳೆದ ಒಂದು ತಿಂಗಳಿನಿಂದ ನಡೆಯುತ್ತಿವೆ. ಯಾವುದೇ ಪ್ರಮುಖ ರಾಜಕೀಯ ನಾಯಕರು ಈ ಪ್ರತಿಭಟನೆಗಳೊಂದಿಗೆ ತಮ್ಮನ್ನು ತಾವು ತೊಡಗಿಸಿಕೊಂಡಿಲ್ಲವಾದರೂ, ಮಣಿಶಂಕರ್ ಅಯ್ಯರ್ ಬಹುಶಃ ಪ್ರತಿಭಟನೆಯಲ್ಲಿ ತೊಡಗಿಸಿಕೊಂಡ ಮೊದಲಿಗರು. ವಿಶೇಷವೆಂದರೆ, ಶಾಹೀನ್ ಬಾಗ್ನ ಪ್ರತಿಭಟನಾ ಸ್ಥಳಕ್ಕೆ ಆಗಮಿಸುವುದಕ್ಕೂ ಕೇವಲ ಮೂರು ದಿನಗಳ ಮೊದಲು ಅಯ್ಯರ್ ಪಾಕಿಸ್ಥಾನದ ಲಾಹೋರ್ನಲ್ಲಿದ್ದರು. ಪಾಕಿಸ್ಥಾನದಲ್ಲೂ ಈ ಮನುಷ್ಯ ಭಾರತ, ಸಿಎಎ ಮತ್ತು ಇನ್ನೂ ರಾಷ್ಟ್ರವ್ಯಾಪಿ ಜಾರಿಯಾಗದ ಎನ್ಆರ್ಸಿ ಬಗ್ಗೆ ಸಂಪೂರ್ಣ ಸುಳ್ಳುಗಳನ್ನು ಹರಡಿದ್ದಾರೆ.
ಶಾಹೀನ್ ಬಾಗ್ನಲ್ಲಿ ಪ್ರತಿಭಟನಾಕಾರರೊಂದಿಗೆ ಮಾತನಾಡಿದ ಅಯ್ಯರ್ ಹಿಂಸಾಚಾರಕ್ಕೆ ಸ್ಪಷ್ಟ ಕರೆ ನೀಡಿದ್ದು, ಸ್ವತಃ ತ್ಯಾಗಕ್ಕೆ ಸಿದ್ಧ ಎಂದು ಹೇಳಿದ್ದಾರೆ. ಅವರು ಪ್ರಧಾನಿ ಮೋದಿ ಮತ್ತು ಬಿಜೆಪಿಯನ್ನು ದೊಡ್ಡ ಧ್ವನಿಯಲ್ಲಿ ‘ಖಾತಿಲ್’ ಎಂದೂ ಉಲ್ಲೇಖಿಸಿದ್ದಾರೆ. “ಯಾವುದೇ ತ್ಯಾಗಕ್ಕೆ ನಾನು ಸಿದ್ಧ. ಯಾರ ಕೈಗಳು ಬಲಶಾಲಿಯಾಗಿವೆ, ನಮ್ಮದೋ ಅಥವಾ ಆ ಕೊಲೆಗಾರರದ್ದೋ ಎಂದು ನಾವು ನೋಡುತ್ತೇವೆ ”ಎಂದು ಅಯ್ಯರ್ ಹೇಳಿದ್ದಾರೆ.
ಮುಂದಿನ ತಿಂಗಳು ದೆಹಲಿ ಚುನಾವಣೆ ನಡೆಯಲಿದೆ. ಹೀಗಾಗಿ ಪ್ರತಿಪಕ್ಷಗಳು ರಾಷ್ಟ್ರ ರಾಜಧಾನಿಯಲ್ಲಿ ಹಿಂಸಾಚಾರ ಮತ್ತು ಪ್ರತಿಭಟನೆಗಳನ್ನು ಏರ್ಪಡಿಸುವ ತಂತ್ರಗಳಿಗೆ ಮೊರೆ ಹೋಗಿದ್ದಾರೆ. ಇಂತಹ ಕೃತ್ಯಗಳಿಂದ ಬಿಜೆಪಿಯ ಮತದಾರರನ್ನು ತಮ್ಮತ್ತ ಸೆಳೆಯಬಹುದು ಎಂಬ ಭರವಸೆಯಲ್ಲಿ ಅವರಿದ್ದಾರೆ. ಮಣಿಶಂಕರ್ ಅವರ ಹೇಳಿಕೆಗಳು ಕೂಡ ಇದೇ ಅಜೆಂಡಾವನ್ನು ಹೊಂದಿರುತ್ತದೆ. 2014 ರ ಚುನಾವಣೆಗೂ ಮುಂಚಿತವಾಗಿ, ಅಯ್ಯರ್ ಅವರು ಪ್ರಧಾನಿ ಮೋದಿಯವರು ಚುನಾವಣೆಯಲ್ಲಿ ಗೆಲ್ಲುವ ಯಾವುದೇ ಸಾಧ್ಯತೆಯನ್ನು ತಳ್ಳಿಹಾಕಿದ್ದರು ಮತ್ತು ಅವರನ್ನು ಅವಹೇಳನಕಾರಿ ಚಾಯ್ ವಾಲ ಎಂದು ಕರೆದಿದ್ದರು. ನಂತರ, 2017 ರ ಗುಜರಾತ್ ಚುನಾವಣೆಯ ಸಂದರ್ಭದಲ್ಲೂ ಇದೇ ವ್ಯಕ್ತಿ ಪ್ರಧಾನಿಯನ್ನು ನೀಚ ಎಂದು ಉಲ್ಲೇಖಿಸಿದ್ದರು. ಮಣಿಶಂಕರ್ ಅಯ್ಯರ್ ಅವರು ಯಾವ ಯಾವ ಸಂದರ್ಭದಲ್ಲಿ ತಮ್ಮ ಬಾಯಿಯಿಂದ ಕೆಟ್ಟ ಶಬ್ದಗಳನ್ನು ಹರಿಬಿಟ್ಟಿದ್ದರೂ ಅಲ್ಲಲ್ಲಿ ಬಿಜೆಪಿಗೆ ಗೆಲುವಾಗಿದೆ.
ಅಯ್ಯರ್ ಅವರಿಗೆ ಪಾಕಿಸ್ಥಾನದೊಂದಿಗೆ ಸಂಪರ್ಕವಿದೆ, ಅವರು ನಾಲಗೆಯಿಂದ ಕೆಟ್ಟ ಶಬ್ದವನ್ನು ಹರಿಬಿಟ್ಟಿರುವುದು ಇದೇ ಮೊದಲಲ್ಲ. ಈ ಹಿಂದೆ ಭಾರತದಲ್ಲಿ ಬಿಜೆಪಿ ಸರ್ಕಾರವನ್ನು ಉರುಳಿಸಲು ಅಯ್ಯರ್ ಪಾಕಿಸ್ಥಾನದ ಸಹಾಯ ಕೋರಿದ್ದರು ಮತ್ತು ಈಗ ಕೂಡ ಅವರು ಲಾಹೋರ್ಗೆ ಭೇಟಿ ನೀಡಿದ ನಂತರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದಾರೆ. ಅವರು ಮತ್ತು ಅವರ ಪಕ್ಷ ಪಾಕಿಸ್ಥಾನದೊಂದಿಗೆ ಹಂಚಿಕೊಳ್ಳುವ ಸಂಬಂಧದ ಬಗ್ಗೆ ಊಹಿಸುವುದು ಕಷ್ಟವೇನಲ್ಲ.
ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಅಯ್ಯರ್ ಅವರ ಈ ಹೇಳಿಕೆಗಳನ್ನು ಬಿಜೆಪಿ ಪೂರ್ಣವಾಗಿ ಬಳಸಿಕೊಳ್ಳುತ್ತದೆ ಎಂಬುದು ಖಚಿತ. ಹಿಂಸಾಚಾರವನ್ನು ಆಶ್ರಯಿಸಲು ಶಾಹೀನ್ ಬಾಗ್ನಲ್ಲಿರುವ ಉಗ್ರಗಾಮಿಗಳನ್ನು ಬೆಂಬಲಿಸುವವರಿಗೆ ಅಯ್ಯರ್ ನೀಡಿದ ಪ್ರೋತ್ಸಾಹವನ್ನು ನಾವೆಲ್ಲರೂ ಕಣ್ಣು ಬಿಟ್ಟು ನೋಡಬೇಕಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.