ನವದೆಹಲಿ: ದೆಹಲಿಯ ಜವಹಾರ್ ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಇತ್ತೀಚಿಗೆ ನಡೆದ ದೊಂಬಿಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಮಹತ್ವದ ಮಾಹಿತಿಯನ್ನು ನೀಡಿದ್ದಾರೆ. ವಿಶ್ವವಿದ್ಯಾಲಯದ ಆವರಣದೊಳಗೆ ನುಗ್ಗಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದವರು ಎಡಪಂಥೀಯ ವಿದ್ಯಾರ್ಥಿಗಳು ಎಂಬುದನ್ನು ಪೊಲೀಸರು ಹೇಳಿದ್ದಾರೆ.
ಹಲ್ಲೆ ನಡೆಸಿದ 9 ವಿದ್ಯಾರ್ಥಿಗಳ ಹೆಸರನ್ನು ರಿಲೀಸ್ ಮಾಡಲಾಗಿದೆ. ಇದರಲ್ಲಿ ಏಳು ಜನ ಎಡಪಂಥೀಯ ವಿದ್ಯಾರ್ಥಿಗಳು. ಆರೋಪಿಗಳ ಪಟ್ಟಿಯಲ್ಲಿ ಜೆಎನ್ಯು ವಿದ್ಯಾರ್ಥಿ ಸಂಘ (ಜೆಎನ್ಯುಎಸ್ಯು) ಅಧ್ಯಕ್ಷೆ ಆಯಿಷ ಘೋಷ್ ಇದ್ದಾಳೆ. ಒಂಬತ್ತು ವ್ಯಕ್ತಿಗಳಲ್ಲಿ, ಏಳು ಮಂದಿ ಎಡಪಂಥೀಯರಿಗೆ ಸೇರಿದವರಾಗಿದ್ದರೆ, ಉಳಿದ ಇಬ್ಬರು ಬಲಪಂಥೀಯರು ಎಂದು ಪೊಲೀಸರು ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ದೆಹಲಿ ಪೊಲೀಸರ ಎಸ್ಐಟಿ ಮುಖ್ಯಸ್ಥ ಜಾಯ್ ಟಿರ್ಕಿ ಅವರು ಮಾತನಾಡಿ, ಜೆಎನ್ಯುಎಸ್ಯುನ ಎಸ್ಎಫ್ಐ ಮತ್ತು ಎಐಎಸ್ಎ ಸೇರಿದಂತೆ ನಾಲ್ಕು ಸಂಘಟನೆಗಳು ಜನವರಿ 5 ರಂದು ಮತ್ತು ಹಿಂದಿನ ಎರಡು ದಿನಗಳಲ್ಲಿ ನಡೆದ ಹಿಂಸಾಚಾರಕ್ಕೆ ಬಹುತೇಕ ಕಾರಣರಾಗಿದ್ದಾರೆ ಎಂದು ಹೇಳಿದರು.
ಭಾನುವಾರದ ಹಿಂಸಾಚಾರಕ್ಕೂ ಮುಂಚೆಯೇ ‘ಯೂನಿಟಿ ಎಗೇನ್ಸ್ಟ್ ಲೆಫ್ಟ್’ ಎಂಬ ಹೆಸರಿನ ನಿರ್ದಿಷ್ಟ ವಾಟ್ಸಾಪ್ ಗ್ರೂಪ್ ಅನ್ನು ರಚಿಸಲಾಗಿದೆ ಮತ್ತು ಹಿಂಸಾಚಾರದ ಆರೋಪಿಗಳಲ್ಲಿ ಅದರ ನಿರ್ವಾಹಕರು ಒಬ್ಬರು ಎಂದು ಅವರು ಉಲ್ಲೇಖಿಸಿದ್ದಾರೆ.
ಈ ವಿಷಯದಲ್ಲಿ ಪ್ರಸ್ತುತ ತನಿಖೆ ನಡೆಯುತ್ತಿದೆ ಮತ್ತು ಈ ಪ್ರಕರಣದಲ್ಲಿ ಹೆಚ್ಚಿನ ಬೆಳವಣಿಗೆಗಳೊಂದಿಗೆ ಪೊಲೀಸರು ಭವಿಷ್ಯದಲ್ಲಿ ಹೆಚ್ಚಿನ ಪತ್ರಿಕಾಗೋಷ್ಠಿಗಳನ್ನು ನಡೆಸಲಿದ್ದಾರೆ ಎಂದು ಅವರು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.