ಪಕ್ಕದ ಅಂಧ್ರದ ಗಡಿಗೆ ಹೊಂದಿಕೊಂಡಿರುವ ಗ್ರಾಮ ಪಾವಗಡ ತಾಲೂಕಿನ ವೆಂಕಟಮ್ಮನಹಳ್ಳಿ. ಈ ಗ್ರಾಮವನ್ನು ತೆಲುಗುವಿನಲ್ಲಿ ಎಗುವಪಲ್ಲಿ ಅನ್ನುತ್ತಾರೆ. 400 ಮನೆಗಳು, 1500 ಜನಸಂಖ್ಯೆಯನ್ನು ಇದು ಹೊಂದಿದೆ. ಕಮ್ಮಾ, ಮಾದಿಗ, ಬೋವಿ, ಉಪ್ಪಾರ ಜಾತಿಯವರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ಇದ್ದಾರೆ. ಪಕ್ಕದಲ್ಲೇ ಕೊತ್ತಗೆರೆ ಗ್ರಾಮ ಇದೆ. ಕೊತ್ತಗೆರೆ ಅಂಧ್ರದಲ್ಲಿದೆ. ಇತಿಹಾಸ ಪ್ರಸಿದ್ಧ ಪೆರಿಟಾಲ ಶ್ರೀರಾಮಯ್ಯ, ಮುತ್ತಾಲಯ್ಯ, ಪೆರಿಟಾಲ ರವಿ ಇತ್ಯಾದಿ ನಕ್ಸಲ್ ನಾಯಕರೆಲ್ಲ ಕೊತ್ತಗೆರೆ ಗ್ರಾಮದವರು. ಹಾಗಾಗಿಯೇ ಕರ್ನಾಟಕ ಸರ್ಕಾರ ವೆಂಕಟಮ್ಮನಹಳ್ಳಿಗೆ ಪೋಲಿಸ್ out post ಕೊಟ್ಟಿತ್ತು. ಊರಿನ ಸರಕಾರಿ ಶಾಲೆಯ ಆವರಣದಲ್ಲೆ ಪೋಲಿಸರು ಬೀಡು ಬಿಟ್ಟು ಗಡಿ ಕಾಯುತ್ತಿದ್ದರು.
ಇಂತಹದೊಂದು ಊರಿದೆ ಎಂದು ಜಗತ್ತಿಗೆ ಗೊತ್ತಾದದ್ದೇ 2005 ರ ಫೆಬ್ರವರಿಯಲ್ಲಿ.
ಶೃಂಗೇರಿ ಸುತ್ತಲಿನ ದಟ್ಟ ಕಾಡಿನಲ್ಲಿ ಸಶಸ್ತ್ರ ಸೈನ್ಯ ಕಟ್ಟಿಕೊಂಡು ತಿರುಗಾಡುತ್ತಿದ್ದ ನಕ್ಸಲ್ ನಾಯಕ ‘ ಪ್ರೇಮ್ ‘ ಎಂದೆ ಗುರುತಿಸಿಕೊಂಡಿದ್ದ ಸಾಕೇತ್ ರಾಜನ್. ಅವತ್ತು ಬೆಳಗಿನ ಜಾವ ನಡೆದ ಪೋಲಿಸ್ ಎನ್ಕೌಂಟರ್ನಲ್ಲಿ ಸಾಕೇತ್ ರಾಜನ್ ಸತ್ತುಬಿದ್ದಿದ್ದ. ಎರಡು ದಿನದ ತರುವಾಯ ಸಾಕೇತ್ ರಾಜನ್ ಹೆಣವನ್ನು ಬೆಂಗಳೂರಿನ ಬೋರಿಂಗ್ ಆಸ್ಪತ್ರೆಗೆ ತರಲಾಯಿತು. ಒಳಗೊಳಗೆ ಸಾಕೇತ್ ರಾಜನನ್ನು ಬೆಂಬಲಿಸುತ್ತಿದ್ದ ಸುಮಾರು 50 ಜನ ಬೋರಿಂಗ್ ಆಸ್ಪತ್ರೆಗೆ ಬಂದಿದ್ದರು. ಅಂಧ್ರದಿಂದ ನಕ್ಸಲ್ ದೊರೆ ಗದ್ದರ್ ಕೂಡ ಬಂದಿದ್ದ. ಪೋಸ್ಟ್ಮಾರ್ಟಮ್ ನಂತರ ಹೆಣ ತಮಗೆ ಕೊಡಬೇಕೆಂಬುದು ಇವರ ಬೇಡಿಕೆಯಾಗಿತ್ತು. ಹಾಗೇನಾದರು ಸರ್ಕಾರ ಹೆಣ ಕೊಟ್ಟಿದ್ದರೆ ಕೊತ್ತಗೆರೆಯಲ್ಲಿರುವ ಸ್ಮಾರಕಗಳಂತೆ ಸಾಕೇತ್ ರಾಜನ್ಗೂ ಸ್ಮಾರಕ ಮೇಲೆಳುತ್ತಿತ್ತು. ಸರ್ಕಾರ ಹೆಣ ಕೊಡುವುದಿರಲಿ ಹೆಣ ನೋಡಲೂ ಅವಕಾಶ ಕೊಡಲಿಲ್ಲ. ಆಗ ಅಲ್ಲಿಯೇ ಆಕ್ರೋಶದ ಭಾಷಣ ಮಾಡಿದ ಗದ್ದರ್ 48 ತಾಸಿನಲ್ಲಿ ಪ್ರತಿಕಾರ ತೀರಿಸಿಕೊಳ್ಳುವುದಾಗಿ ಘೋಷಿಸಿದರು.
ಎರಡೆ ದಿನದಲ್ಲಿ ಮಧ್ಯರಾತ್ರಿ ಹತ್ತಾರು ವ್ಯಾನು, ಲಾರಿ, ಟಾಟಾಸುಮೊಗಳಲ್ಲಿ 200ಕ್ಕೂ ಹೆಚ್ಚು ಅಂಧ್ರ ಮೂಲದ ನಕ್ಸಲರ ಗುಂಪು ವೆಂಕಟಮ್ಮನಹಳ್ಳಿಯ ಪೋಲಿಸ್ out post ಮೇಲೆ ದಾಳಿ ಮಾಡಿತು. 7 ಪೋಲಿಸರು, ಒಬ್ಬ ಅಡುಗೆ ಸಹಾಯಕ ರಕ್ತದ ಮಡುವಿನಲ್ಲಿ ಪ್ರಾಣ ಬಿಟ್ಟರು.
ಈ ಘಟನೆಯ ಬಗ್ಗೆ ಇವತ್ತು ಶೃಂಗೇರಿ ಸಾಹಿತ್ಯ ಸಮ್ಮೇಳನದ ಬಗ್ಗೆ ವಕಾಲತ್ತು ವಹಿಸಿರುವ ಯಾರಾದರೂ ಅವತ್ತು ಬಾಯಿಬಿಟ್ಟಿದ್ದರೆ ? ಗದ್ದರ್ಗೆ ಕೆಲ ವರ್ಷಗಳ ಹಿಂದೆ ಬಸವ ಪ್ರಶಸ್ತಿ ಕೊಟ್ಟಿದ್ದ ಚಿತ್ರದುರ್ಗದ ಪ್ರಗತಿಪರ ಶರಣರು ವೆಂಕಟ್ಟಮ್ಮನಹಳ್ಳಿ ಹತ್ಯಾಕಾಂಡದಿಂದ ತಲೆ ತಗ್ಗಿಸಬೇಕಾಯಿತು. ಮಂಗಳೂರಿನ ಗೋಲಿಬಾರ್ ಬಗ್ಗೆ ಸತ್ಯಶೋಧನೆ ಮಾಡಲು ಹೆಣಗುತ್ತಿರುವ ಪಿಯುಸಿಎಲ್ ವೆಂಕಟಮ್ಮನಹಳ್ಳಿಗೆ ಬರಲಿಲ್ಲ, ಹಿರಿಯ ಪತ್ರಕರ್ತ ಸುಗತ ರಾಜು ನೇತೃತ್ವದ ಜನತಾ ಅದಾಲತ್ ತಂಡ ವೆಂಕಟಮ್ಮನಹಳ್ಳಿಗೆ ಬರಲಿಲ್ಲ. ಅಹಿಂಸೆಯ ವಕ್ತಾರ ಗಾಂಧೀಜಿ ವಾರಸುದಾರರುರೆಂದು ಬಿಂಬಿಸಿಕೊಳ್ಳಲು ಹೆಣಗುತ್ತಿರುವರ್ಯಾರು ವೆಂಕಟಮ್ಮನಹಳ್ಳಿಗೆ ಬರಲಿಲ್ಲ.
ಸಾಕೇತ್ ರಾಜನ್ ತಂಡದ ಇರುವಿಕೆಯ ಬಗ್ಗೆ ಪೋಲಿಸರಿಗೆ ಮಾಹಿತಿ ಕೊಟ್ಟ ಆರೋಪದಲ್ಲಿ ಆದಿವಾಸಿ ಮುಖಂಡ ಶೇಷಪ್ಪ ಗೌಡ್ಲು ನಕ್ಸಲರ ಗುಂಡಿಗೆ ಆಹುತಿಯಾದ.
ಅವತ್ತು ಶೃಂಗೇರಿಯಲ್ಲಿ ಶಾರದೆಯೇ ಇಲ್ಲ ಅಲ್ಲಿರೋದು ಲಕ್ಷ್ಮಿ ಎಂದೆಲ್ಲ ಹೇಳುತ್ತಿದ್ದವರು ಇವತ್ತು ಅದೇ ಲಕ್ಷ್ಮಿ ಪ್ರಸಾದ ಮೇಯಲು ಸಜ್ಜಾಗುತ್ತಿದ್ದಾರೆ.
ಸಾಹಿತ್ಯದ ಹೆಸರಿನಲ್ಲಿ ನಡೆಯುವ ರಾಜಕಾರಣದ ದುರಂತವಿದು. ಹೌದು ನಾವು ನಕ್ಸಲ್ ಬೆಂಬಲಿಗರು, ಗದ್ದರ್ ಬೆಂಬಲಿಗರು, ಹಿಂಸಾಚಾರದ ಬೆಂಬಲಿಗರು ಎಂದು ಬಹಿರಂಗವಾಗಿ ಹೇಳಿಕೊಳ್ಳಬಹುದಲ್ಲ … ? ಏನು ಸಂಕೋಚ ? ಇವರ ದಯನೀಯ ಸ್ಥಿತಿ ನೋಡಿ ಸಾಕೇತ್ ರಾಜನ್ ಆತ್ಮ ಹೊರನಾಡಿನ ಕಾಡಿನಲ್ಲಿ ಮರುಗುತ್ತಿರಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.