ಲಕ್ನೋ : ಭಾರತದ ಪ್ರಾಚೀನ ನಗರ ಅಯೋಧ್ಯೆಯನ್ನು ಸ್ಮಾರ್ಟ್ ಸಿಟಿಯಾಗಿ ರೂಪಿಸಲು ಉತ್ತರಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರ ಮಾಸ್ಟರ್ ಪ್ಲ್ಯಾನ್ ಅನ್ನು ಹಾಕಿಕೊಂಡಿದೆ. 2019ರ ನವೆಂಬರ್ ತಿಂಗಳಿನಲ್ಲಿ ಸರ್ಕಾರವು ಅಯೋಧ್ಯಾ ಮತ್ತು ಗೋರಖಪುರ್ ಸೇರಿದಂತೆ ಒಟ್ಟು 7 ನಗರಪಾಲಿಕೆಗಳನ್ನು ಸ್ಮಾರ್ಟ್ ಸಿಟಿಯಡಿ ಅಭಿವೃದ್ಧಿಪಡಿಸುವುದಕ್ಕೆ ಅನುಮೋದನೆಯನ್ನು ನೀಡಿತ್ತು.
ಸ್ಮಾರ್ಟ್ ಸಿಟಿ ಯೋಜನೆಯಡಿ ಪ್ರತಿ ನಗರಪಾಲಿಕೆಗಳಿಗೆ ರೂ. 50 ಕೋಟಿ ಅನ್ನು ಒದಗಿಸಲು ಅದು ಸಮ್ಮತಿಸಿತು. ಅಯೋಧ್ಯಾ ಮತ್ತು ಗೋರಖಪುರವನ್ನು ಹೊರತುಪಡಿಸಿ, ಉಳಿದ 5 ನಗರಪಾಲಿಕೆಗಳೆಂದರೆ-ಮೀರತ್, ಘಾಜಿಯಾಬಾದ್, ಫಿರೋಜಬಾದ್, ಮಹುರಾ-ವೃಂದಾವನ್ ಮತ್ತು ಶಹಜಹಾನ್ಪುರ. ಯೋಜನೆಯ ಭಾಗವಾಗಿ, ಉತ್ತರಪ್ರದೇಶ ಸರ್ಕಾರವು ಮಾಸ್ಟರ್ ಪ್ಲ್ಯಾನ್ ಅನ್ನು ರೂಪಿಸುತ್ತಿದ್ದು, ಪ್ರಮುಖ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಿದೆ. 2031ರ ವೇಳೆಗೆ ಅಯೋಧ್ಯಾದಲ್ಲಿನ ಕಾಮಗಾರಿಗಳು ಸಂಪೂರ್ಣಗೊಳ್ಳುವ ನಿರೀಕ್ಷೆ ಇದೆ.
ಬಾಬ್ರಿ ಮಸೀದಿ ಮತ್ತು ರಾಮ ಜನ್ಮಭೂಮಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮಹತ್ವದ ತೀರ್ಪನ್ನು ನೀಡಿ, ಅಯೋಧ್ಯಾದಲ್ಲಿ ರಾಮ ಮಂದಿರವನ್ನು ಸ್ಥಾಪನೆ ಮಾಡುವುದಕ್ಕೆ ಸಮ್ಮತಿಯನ್ನು ನೀಡಿತ್ತು. ಪ್ರಸ್ತುತ ಅಲ್ಲಿ ಮಂದಿರ ನಿರ್ಮಾಣಕ್ಕೆ ಬೇಕಾದ ತಯಾರಿಗಳು ನಡೆಯುತ್ತಿದೆ. ಅಲ್ಲದೇ, ಶ್ರೀರಾಮನ 151 ಅಡಿ ಎತ್ತರದ ಭವ್ಯ ಪ್ರತಿಮೆಯೂ ಅಲ್ಲಿ ತಲೆ ಎತ್ತಲಿದೆ.
ಅಯೋಧ್ಯಾದಲ್ಲಿ ಅತ್ಯಾಧುನಿಕ ಮೂಲಸೌಕರ್ಯಗಳನ್ನು ಸ್ಥಾಪನೆ ಮಾಡಲು, ಪ್ರವಾಸೋದ್ಯಮ ಮತ್ತು ಸಂಪರ್ಕವನ್ನು ಉತ್ತೇಜಿಸಲು ‘ಅಯೋಧ್ಯಾ ಪಿಲಿಗ್ರಿಮೇಜ್ ಡೆವಲಪ್ಮೆಂಟ್ ಕೌನ್ಸಿಲ್’ ಅನ್ನು ಸ್ಥಾಪನೆ ಮಾಡಲಿದ್ದೇವೆ ಎಂದು ಅಯೋಧ್ಯೆಯ ಮೇಯರ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.