News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ದೇಶದ ಮೊದಲ ಸೇನಾ ಮಹಾ ಪ್ರಧಾನ ದಂಡನಾಯಕ

ನವದೆಹಲಿ : ಭಾರತದ ಮೊದಲ ಸೇನಾ ಮಹಾಪ್ರಧಾನ ದಂಡನಾಯಕನಾಗಿ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದರ ಬಗ್ಗೆ ಅಧಿಕೃತ ಪ್ರಕಟಣೆ ಇನ್ನಷ್ಟೇ ಹೊರಬೀಳಬೇಕಿದೆ.

ಜನರಲ್ ರಾವತ್ ಸೇನೆಯಿಂದ ನಿವೃತ್ತರಾಗಲಿರುವ ಒಂದು ದಿನಗಳ ಮುಂಚೆ ಈ ಆಯ್ಕೆಯನ್ನು ಮಾಡಲಾಗಿದೆ. ಸೇನಾ ಮುಖ್ಯಸ್ಥರಾಗಿ ಪೂರ್ಣ ಮೂರು ವರ್ಷಗಳ ಅವಧಿ ಪೂರೈಸಿರುವ ಅವರು ನಾಳೆ ನಿವೃತ್ತರಾಗಲಿದ್ದಾರೆ. ಬಳಿಕ ಅವರು ಸೇನೆಯ ಮಹಾಪ್ರಧಾನ ದಂಡನಾಯಕನಾಗಿ ಸೇವೆಯನ್ನು ಸಲ್ಲಿಸಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಕೇಂದ್ರ ಸಚಿವ ಸಂಪುಟ ಡಿಸೆಂಬರ್ 24 ರಂದು ಸಿಡಿಎಸ್ ಹುದ್ದೆ ಮತ್ತು ಅದರ ಚಾರ್ಟರ್ ಮತ್ತು ಕರ್ತವ್ಯಗಳನ್ನು ಅನುಮೋದಿಸಿತು.

ತ್ರಿವಳಿ ಸೇವೆಗಳ ವಿಷಯದಲ್ಲಿ ಸಿಡಿಎಸ್ ರಕ್ಷಣಾ ಸಚಿವರ ಪ್ರಧಾನ ಮಿಲಿಟರಿ ಸಲಹೆಗಾರರಾಗಿ ಕಾರ್ಯನಿರ್ವಹಿಸಲಿದ್ದಾರೆ. ಮೂವರು ಸೇವಾ ಮುಖ್ಯಸ್ಥರು ತಮ್ಮ ಸೇನೆಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ರಕ್ಷಣಾ ಸಚಿವರಿಗೆ ಸಲಹೆ ನೀಡುವುದನ್ನು ಮುಂದುವರಿಸುತ್ತಾರೆ.

ಗಮನಾರ್ಹವೆಂದರೆ, ಅವರ ನಿವೃತ್ತಿಗೆ ಎರಡು ದಿನಗಳ ಮೊದಲು, ರಕ್ಷಣಾ ಸಚಿವಾಲಯವು 1954 ರ ಸೇನಾ ನಿಯಮಗಳಲ್ಲಿ ಸೇವಾ ನಿಯಮಗಳು ಮತ್ತು ಅಧಿಕಾರಾವಧಿಯನ್ನು ತಿದ್ದುಪಡಿ ಮಾಡಿತು. ರಾವತ್ ಅವರನ್ನು ಭಾರತದ ಮೊದಲ ಸೇನಾ ಮಹಾ ಪ್ರಧಾನ ದಂಡನಾಯಕನನ್ನು ನೇಮಿಸುವುದು ಸರ್ಕಾರದ ಉದ್ದೇಶವಾಗಿತ್ತು.

ಡಿಸೆಂಬರ್ 28 ರ ಅಧಿಸೂಚನೆಯಲ್ಲಿ, ಸೇನೆಯ ಮಹಾ ಪ್ರಧಾನ ದಂಡನಾಯಕ(ಸಿಡಿಎಸ್) ಅಥವಾ ತ್ರಿ-ಸೇವಾ ಮುಖ್ಯಸ್ಥರು 65 ವರ್ಷ ವಯಸ್ಸಿನವರೆಗೆ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ ಎಂದು ಸಚಿವಾಲಯ ಹೇಳಿದೆ.

ಜನರಲ್ ಬಿಪಿನ್ ರಾವತ್ ಅವರು ಡಿಸೆಂಬರ್ 31 ರಂದು ಸೇನಾ ಮುಖ್ಯಸ್ಥರಾಗಿ ನಿವೃತ್ತರಾಗುತ್ತಿದ್ದಾರೆ.

ಅಸ್ತಿತ್ವದಲ್ಲಿರುವ ನಿಯಮಗಳ ಪ್ರಕಾರ, ಮೂವರು ಸೇವಾ ಮುಖ್ಯಸ್ಥರು 62 ವರ್ಷ ವಯಸ್ಸಿನವರೆಗೆ ಅಥವಾ ಮೂರು ವರ್ಷಗಳವರೆಗೆ ಸೇವೆ ಸಲ್ಲಿಸಬಹುದು.

2019 ರ ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ ತಮ್ಮ ಸರ್ಕಾರವು ಉನ್ನತ ಮಿಲಿಟರಿ ಹುದ್ದೆಯನ್ನು ಸ್ಥಾಪಿಸುವುದಾಗಿ ಘೋಷಿಸಿತ್ತು ಮತ್ತು ನೇಮಕಗೊಂಡ ಸಲಹೆಗಾರ ಮಿಲಿಟರಿಗೆ ಸಂಬಂಧಿಸಿದ ಎಲ್ಲ ವಿಷಯಗಳ ಬಗ್ಗೆ ಸರ್ಕಾರಕ್ಕೆ ಸಲಹೆಗಳನ್ನು ನೀಡುತ್ತಾರೆ ಎಂದಿದ್ದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top