ನವದೆಹಲಿ: ಕಾರ್ಗಿಲ್ನಿಂದ ಕೊಹಿಮಾಗೆ ಯಾತ್ರೆ ನಡೆಸಿದ 25 ವಾಯು ಯೋಧರ ತಂಡವನ್ನು ವಾಯುಪಡೆ ನಿಲ್ದಾಣದಲ್ಲಿ ಸೋಮವಾರ ಏರ್ ಚೀಫ್ ಮಾರ್ಷಲ್ ಆರ್ಕೆಎಸ್ ಭದೌರಿಯಾ ಸನ್ಮಾನಿಸಿದರು.
ಕೆ 2 ಕೆ ಅಲ್ಟ್ರಾ ಮ್ಯಾರಥಾನ್-ಗ್ಲೋರಿ ರನ್ ಎಂದು ಹೆಸರಿಸಲಾದ ಈ ಯಾತ್ರೆಯನ್ನು ಸೆಪ್ಟೆಂಬರ್ 21 ರಂದು ಡ್ರಾಸ್ನಲ್ಲಿರುವ ಕಾರ್ಗಿಲ್ ಯುದ್ಧ ಸ್ಮಾರಕದಿಂದ ಆರಂಭಿಸಲಾಯಿತು.
ಅಧಿಕೃತ ಹೇಳಿಕೆಯ ಪ್ರಕಾರ, ವಾಯು ಯೋಧರು 4500 ಕಿ.ಮೀ ಕ್ರಮಿಸುವ ಮೂಲಕ ‘ವಿಜಯ ದೀಪ’ವನ್ನು ಹೊತ್ತು ಸಾಗಿಸಿದರು, 45 ದಿನಗಳವರೆಗೆ ದಿನಕ್ಕೆ ಸರಾಸರಿ 100 ಕಿ.ಮೀಯಂತೆ ಅವರು ಪರ್ವತಗಳು ಮತ್ತು ಬಯಲು ಪ್ರದೇಶಗಳು, ನಗರಗಳು ಮತ್ತು ಅರಣ್ಯಗಳನ್ನು ಹಾದುಹೋದರು. ಯಾತ್ರೆಯು ನವೆಂಬರ್ 6 ರಂದು ಕೊಹಿಮಾದಲ್ಲಿ ಮುಕ್ತಾಯಗೊಂಡಿತು.
ವಾಯು ಯೋಧರು ವಯಸ್ಸು ಮತ್ತು ಲಿಂಗದ ಮಾನಸಿಕ ಅಡೆತಡೆಗಳನ್ನು ಮುರಿದು ಮುಂದೆ ಸಾಗಿದರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈ ಯಾತ್ರೆಯ ವೇಳೆ ವಾಯು ಯೋಧರು ಪಾದಚಾರಿಗಳ ಸುರಕ್ಷತೆ ಮತ್ತು ‘ಫಿಟ್ ಇಂಡಿಯಾ’ ಆಂದೋಲನದ ಬಗ್ಗೆ ಜಾಗೃತಿ ಮೂಡಿಸಿದರು.
ನವದೆಹಲಿಯ ವಾಯುಪಡೆ ನಿಲ್ದಾಣನಲ್ಲಿ ಗ್ಲೋರಿ ರನ್ ವಾರಿಯರ್ಸ್ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು. ನಮ್ಮ ಹುತಾತ್ಮರನ್ನು ಸ್ಮರಿಸುವ ಮತ್ತು ವಾಯುಸೇನೆಯ ವೈಭವದೊಂದಿಗೆ ಆಗಸವನ್ನು ಸ್ಪರ್ಶಿಸುವ ಧ್ಯೇಯಕ್ಕೆ ಬದ್ಧವಾಗಿ ಜೀವಿಸುವ ಉದ್ದೇಶವನ್ನು ಇದು ಒಳಗೊಂಡಿತ್ತು ಎಂದು ಹೇಳಿಕೆ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.