ನವದೆಹಲಿ: ಭಾರತದ ಪ್ರಜಾಪ್ರಭುತ್ವದ ಶಕ್ತಿಕೇಂದ್ರ ಸಂಸತ್ತಿನ ಮೇಲೆ ಪಾಕಿಸ್ಥಾನ ಮೂಲದ ಉಗ್ರರು ದಾಳಿ ನಡೆಸಿ ಇಂದಿಗೆ 18 ವರ್ಷಗಳು ಸಂದಿವೆ. 2001ರಲ್ಲಿ ಸಂಸತ್ತಿನ ಮೇಲೆ ದಾಳಿ ನಡೆದಿತ್ತು.
ಸಂಸತ್ತಿನ ಮೇಲೆ ನಡೆದ ದಾಳಿಯನ್ನು ಸ್ಮರಿಸಿ ಟ್ವೀಟ್ ಮಾಡಿರುವ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು, “ಈ ಶ್ರೇಷ್ಠ ದೇಶ 2001ರಲ್ಲಿ ನಡೆದ ಸಂಸತ್ತಿನ ಮೇಲಿನ ದಾಳಿಯಲ್ಲಿ ಅಸಾಧಾರಣ ಶೌರ್ಯ ಮತ್ತು ಸಾಹಸ ಮೆರೆದು ಸಂಸತ್ತನ್ನು ಸಂರಕ್ಷಣೆ ಮಾಡಿದ ವೀರರ ಬಲಿದಾನವನ್ನು ಸ್ಮರಿಸುತ್ತದೆ. ಎಲ್ಲಾ ವಿಧದ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಲು ಮತ್ತು ದೇಶವನ್ನು ರಕ್ಷಣೆ ಮಾಡಲು ನಾವು ಕಟಿ ಬದ್ಧರಾಗಿದ್ದೇವೆ” ಎಂದಿದ್ದಾರೆ.
A grateful nation salutes the exemplary valour and courage of the martyrs who sacrificed their lives while defending the Parliament from terrorists on this day in 2001. We remain firm in our resolve to defeat and eliminate terrorism in all its forms and manifestations.
— President of India (@rashtrapatibhvn) December 13, 2019
ದಾಳಿಯಲ್ಲಿ ಹುತಾತ್ಮರಾದ ಅವರನ್ನು ಸ್ಮರಿಸಿ ಸಂಸತ್ತಿನ ಅನೇಕ ಸದಸ್ಯರುಗಳು ಟ್ವೀಟ್ ಮಾಡಿದ್ದಾರೆ. ಹರ್ದೀಪ್ ಸಿಂಗಪುರಿ ಅವರು ಟ್ವೀಟ್ ಮಾಡಿ, “2001ರಲ್ಲಿ ನಡೆದ ಅಮಾನುಷ ದಾಳಿಯಲ್ಲಿ ಸಂಸತ್ತನ್ನು ರಕ್ಷಣೆ ಮಾಡುವ ಸಲುವಾಗಿ ಬಲಿದಾನ ಮಾಡಿದ ವೀರರನ್ನು ಸ್ಮರಿಸುತ್ತಿರುವ ದೇಶದೊಂದಿಗೆ ನಾನೂ ಸೇರಿಕೊಳ್ಳುತ್ತೇನೆ. ನವಭಾರತ ಎಂದೆಂದಿಗೂ ಅವರ ನಿಸ್ವಾರ್ಥ ಮತ್ತು ಶೌರ್ಯಕ್ಕೆ ಚಿರಋಣಿಯಾಗಿರುತ್ತದೆ” ಎಂದಿದ್ದಾರೆ.
ಸಂಸತ್ತಿನ ಮೇಲೆ ನಡೆದ ದಾಳಿಯಲ್ಲಿ ಸುಮಾರು 14 ಮಂದಿ ಭದ್ರತಾ ಪಡೆಗಳ ಸಿಬ್ಬಂದಿಗಳು ಮತ್ತು ನಾಗರಿಕ ಪ್ರಾಣ ತೆತ್ತಿದ್ದಾರೆ. ಒಟ್ಟು 40 ನಿಮಿಷಗಳ ಕಾಲ ದಾಳಿ ಮತ್ತು ದಾಳಿ ವಿರುದ್ಧದ ಕಾರ್ಯಾಚರಣೆಗಳು ನಡೆದಿದ್ದವು. ಈ ವೇಳೆ ಸಂಸತ್ತಿನ ಒಳಗೆ 100 ಸದಸ್ಯರುಗಳು ಹಾಜರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.