ನವದೆಹಲಿ: ಕಾಶ್ಮೀರದ ಕುಮಾರಜೀವ ಯಾತ್ರೆಯ ಮೂಲಕ ಗಂಗಾಜಲವು ಕಾಶಿಯನ್ನು ಕಶ್ಗರ್ನೊಂದಿಗೆ ಸಂಪರ್ಕಿಸಿತು ಮತ್ತು ಭಾರತ ಹಾಗೂ ಚೀನಾವನ್ನು ಬೆಸೆಯುವ ಪ್ರಾಚೀನ ಜ್ಞಾನಭಂಡಾರದ ರೇಖೆಗಳನ್ನು ಮರು ಪತ್ತೆ ಮಾಡಲಿದೆ.
ಕುಮಾರಜೀವ ಯಾತ್ರೆಯ ರುವಾರಿ ತರುಣ್ ವಿಜಯ್ ಅವರು, 4 ನೇ ಶತಮಾನದ ಬೌದ್ಧ ಸನ್ಯಾಸಿಯಾದ ಕುಮಾರ ಜೀವ ಅವರ ಚೀನಾ ಪ್ರಯಾಣವನ್ನು ಮರುಸೃಷ್ಟಿಸಿದರು. ಭಾರತೀಯ ಸನ್ಯಾಸಿಗಳ ವಿದ್ವತ್ಪೂರ್ಣ ಚರ್ಚೆಗಳು ಮತ್ತು ಧರ್ಮಗ್ರಂಥಗಳ ಅಧ್ಯಯನದಿಂದಾಗಿ ಕ್ಸಿನ್ಜಿಯಾಂಗ್ನ ಕಶ್ಗರ್ ಅನ್ನು ಮಧ್ಯ ಏಷ್ಯಾದ ಕಾಶಿ ಎಂದು ಕರೆಯಲಾಗುತ್ತಿತ್ತು, ಮತ್ತು ಇದನ್ನು ಇನ್ನೂ ಕಾಶಿ ಎಂದು ಕರೆಯಲಾಗುತ್ತದೆ. ಈ ಬಗ್ಗೆ ಹೇಳಿದರೆ ಹಲವರು ಆಶ್ಚರ್ಯ ಪಡುತ್ತಾರೆ ಎಂದು ತರುಣ್ ಹೇಳುತ್ತಾರೆ.
ಇಲ್ಲಿಯವರೆಗೂ, ಕಶ್ಗರ್ ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ, ನಗರ ಬಸ್ ನಿಲ್ದಾಣವನ್ನು ‘ಕಾಶಿ’ ಎಂದು ಹೆಸರಿಸಲಾಗಿದೆ ಎಂದು ಕುಮಾರಜೀವ ಅವರ ‘ಸಮಾಧಿ’ ಇರುವ ಕ್ಸಿಯಾನ್ಗೆ ಪ್ರಯಾಣಿಸುವ ಸಂದರ್ಭದಲ್ಲಿ ವಿಜಯ್ ಹೇಳಿದರು.
ಎಂಟು ವರ್ಷಗಳ ಹಿಂದೆ ಚೀನಾದ ಕಾಶಿ (ಹೊರಗಿನ ಪ್ರಪಂಚಕ್ಕೆ ಕಶ್ಗರ್ ಎಂದು ಕರೆಯಲ್ಪಡುವ) ಗೆ ಭೇಟಿ ನೀಡಲು ಅನುಮತಿ ಪಡೆದ ಅಪರೂಪದ ಲೇಖಕರಲ್ಲಿ ವಿಜಯ್ ಒಬ್ಬರು, ಆಗ ಬೀಜಿಂಗ್ನಲ್ಲಿ ಭಾರತೀಯ ರಾಯಭಾರಿಯಾಗಿದ್ದ ನಿರುಪಮಾ ರಾವ್ ಅವರ ಸಹಾಯದಿಂದ ಅವರು ಈ ಕಾರ್ಯವನ್ನು ಮಾಡಿದರು.
ಖ್ಯಾತ ಸನ್ಯಾಸಿ ಕುಮಾರಜೀವ ಅವರಿಗೆ ಗೌರವವನ್ನು ಸಲ್ಲಿಸುವ ಸಲುವಾಗಿ ಗಂಗಾಜಲವನ್ನು ತಂದು ಅದನ್ನು ಕುಮಾರ ಜೀವ ದೇಗುಲಕ್ಕೆ ಸಮರ್ಪಣೆ ಮಾಡುವ ಚಿಂತನೆಯನ್ನು ತರುಣ್ ವಿಜಯ್ ಮಾಡಿದರು. ಈ ಮೂಲಕ ಭಾರತದ ಕಾಶಿ ಅಂದಿಗೆ ಚೀನಾದ ಕಾಶಿಯನ್ನು ಬೆಸೆಯುವ ಚಿಂತನೆ ಅವರದ್ದು. ಬೆಂಗಳೂರಿನ ಯುವ ಸಂಸದ ತೇಜಸ್ವಿ ಸೂರ್ಯ ಅವರು ಕೂಡ ಐತಿಹಾಸಿಕ ಕುಮಾರಜೀವ ಯಾತ್ರೆಯ ಭಾಗವಾಗಿದ್ದಾರೆ. ಇದೇ ಮೊದಲ ಬಾರಿಗೆ ಗಂಗಾಜಲವನ್ನು ಮತ್ತು ಸಾರಾನಾಥದ ಮಣ್ಣನ್ನು ತಾಮ್ರದ ಕಲಶದಲ್ಲಿರಿಸಿ ಪವಿತ್ರ ಕೆಂಪು ಬಟ್ಟೆಯಲ್ಲಿ ಸುತ್ತಿ ಕುಮಾರಜೀವ ಬೌದ್ಧ ದೇಗುಲಕ್ಕೆ ಕೊಂಡೊಯ್ಯದರು. ಲಕ್ಷಾಂತರ ಭಕ್ತರು ಇದರಲ್ಲಿ ಭಾಗಿಯಾದರು.
ನವೆಂಬರ್ 17ರಂದು ಬೀಜಿಂಗ್ನಲ್ಲಿ ನಡೆದ ಕುಮಾರ ಜೀವ ಸೆಮಿನಾರ್ನಲ್ಲಿ ತೇಜಸ್ವಿ ಸೂರ್ಯ ಮತ್ತು ತರುಣ್ ವಿಜಯ್ ಅವರು ಭಾಗಿಯಾದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.