ನವದೆಹಲಿ: ಪಾಕಿಸ್ಥಾನದಿಂದ ಬಂದ ಹಿಂದೂ ನಿರಾಶ್ರಿತರ ಸಮಸ್ಯೆಗಳನ್ನು ತಗ್ಗಿಸುವ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನವನ್ನು ಆರಂಭಿಸಿದ್ದಾರೆ ಖ್ಯಾತ ರಾಜಕೀಯ ವಿಮರ್ಶಕ ಮತ್ತು ವಿಜ್ಞಾನಿ ಆನಂದ್ ರಂಗನಾಥನ್.
ಹಿಂದೂ ನಿರಾಶ್ರಿತರ ಸಬಲೀಕರಣಕ್ಕಾಗಿ ಭಾರತ ಸರಕಾರವು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿರುವಂತೆ ಆನಂದ್ ರಂಗನಾಥನ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಈ ಅಭಿಯಾನವನ್ನು ಆರಂಭಿಸಿದ್ದಾರೆ. ಹಿಂದೂ ನಿರಾಶ್ರಿತರ ಸಮಸ್ಯೆಗಳನ್ನು ಕಡಿಮೆ ಮಾಡಿ ಅವರಿಗೆ ಸಹಾಯವನ್ನು ಮಾಡುವ ನಿಟ್ಟಿನಲ್ಲಿ ಕೊಡುಗೆಗಳನ್ನು ನೀಡುವಂತೆ ಅವರು ಜನರಲ್ಲಿ ಮನವಿಯನ್ನು ಮಾಡಿಕೊಂಡಿದ್ದಾರೆ.
Just donated for this noble cause (Transaction ID: 890) at @humanaidint. Link: https://t.co/4VAmZeoM2l
The Hindu refugees from Pakistan are facing terrible hardships, not to mention government apathy. Every little helps.
Let’s welcome them home. Their home. #CAB2019 pic.twitter.com/aKPjMh3EA4
— Anand Ranganathan (@ARanganathan72) December 10, 2019
ಪಾಕಿಸ್ಥಾನ ಹಿಂದೂ ನಿರಾಶ್ರಿತರಿಗಾಗಿ ಫಂಡ್ ರೈಸ್ ಮಾಡುವ ಅಭಿಯಾನ ಇದಾಗಿದೆ. ಈ ಬಗೆಗಿನ ಲಿಂಕ್ ಅನ್ನು ಆನಂದ್ ರಂಗನಾಥ್ ಅವರು ಹಂಚಿಕೊಂಡಿದ್ದು, ಇದನ್ನು ಹ್ಯುಮ್ಯಾನಿಟೇರಿಯನ್ ಏಡ್ ಇಂಟರ್ನ್ಯಾಷನಲ್ ಆಯೋಜನೆ ಮಾಡುತ್ತಿದೆ.
ಭಾರತದಲ್ಲಿ ನೆಲೆಸಿರುವ ಪಾಕಿಸ್ಥಾನ ಮೂಲದ ಹಿಂದೂ ನಿರಾಶ್ರಿತರು ಸುರಕ್ಷಿತವಾಗಿದ್ದಾರೆ ಮತ್ತು ಯಾವುದೇ ತರನಾದ ಧಾರ್ಮಿಕ ದೌರ್ಜನ್ಯಗಳನ್ನು ಅವರು ಇಲ್ಲಿ ಅನುಭವಿಸುತ್ತಿಲ್ಲ. ಆದರೆ ಬಡತನದಂತಹ ಸಮಸ್ಯೆಗಳು ಅವರನ್ನು ತೀವ್ರವಾಗಿ ಬಾಧಿಸುತ್ತಿದೆ. ಅವರ ಜೀವನಮಟ್ಟ ತೀರಾ ಕೆಳ ಹಂತದಲ್ಲಿದೆ. ಸಮರ್ಪಕ ನೈರ್ಮಲ್ಯ ಮತ್ತು ಶುದ್ಧ ಕುಡಿಯುವ ನೀರಿನಿಂದ ಅವರು ವಂಚಿತರಾಗಿದ್ದಾರೆ. ಹೀಗಾಗಿ ಅವರ ಜೀವನಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಈ ಅಭಿಯಾನವು ಮಹತ್ವದ ಹೆಜ್ಜೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.