ನವದೆಹಲಿ: ಲೋಕಸಭೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಅಂಗೀಕಾರಗೊಂಡು ಹಿನ್ನೆಲೆಯಲ್ಲಿ, ಪಾಕಿಸ್ಥಾನದಲ್ಲಿ ತೀವ್ರ ಸ್ವರೂಪದ ದೌರ್ಜನ್ಯವನ್ನು ಅನುಭವಿಸಿ ಭಾರತಕ್ಕೆ ಬಂದು ಆಶ್ರಯ ಕಂಡುಕೊಂಡಿರುವ ಹಿಂದೂಗಳು ದೆಹಲಿಯ ಮಂಜು ಕಾ ತಿಲಾ ಪ್ರದೇಶದಲ್ಲಿ ಸಂಭ್ರಮಾಚರಣೆಯನ್ನು ನಡೆಸಿದರು.
ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ವಿವಿಧ ಸಂಗೀತಗಳಿಗೆ, ವಾದ್ಯಗಳಿಗೆ ನೃತ್ಯ ಮಾಡುತ್ತಾ ಸಂಭ್ರಮಾಚರಣೆ ನಡೆಸುತ್ತಿರುವ ದೃಶ್ಯ ಇಂದು ಈ ಪ್ರದೇಶದಲ್ಲಿ ಕಂಡುಬಂದಿದೆ.
ಭಾರತದ ನಾಗರಿಕರಾಗುವ ಕಾಲ ಅವರಿಗೆ ಸನ್ನಿಹಿತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅವರು ತ್ರಿವರ್ಣ ಧ್ವಜವನ್ನು ಹಿಡಿದು ಕುಣಿದು ಕುಪ್ಪಳ್ಳಿಸುತ್ತಿದ್ದಾರೆ.
ಲೋಕಸಭೆಯಲ್ಲಿ ಅಂಗೀಕಾರಗೊಂಡಿರುವ ಪೌರತ್ವ ತಿದ್ದುಪಡಿ ಮಸೂದೆ ನಾಳೆ 2:00 ಗಂಟೆಗೆ ರಾಜ್ಯಸಭೆ ಮುಂದೆ ಮಂಡನೆಗೊಳ್ಳಲಿದೆ.
#WATCH Delhi: Hindu refugees from Pakistan living in Majnu-ka-Tila area celebrate passage of #CitizenshipAmendmentBill2019 in Lok Sabha. pic.twitter.com/eeCE7SmfGH
— ANI (@ANI) December 10, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.