ಅಕ್ರಮ ವಲಸೆಯ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕೈಗೊಂಡಿರುವ ದಿಟ್ಟ ಕ್ರಮಗಳು ಇದೀಗ ಫಲ ನೀಡಲು ಆರಂಭಿಸುತ್ತಿದೆ. ಬಾಂಗ್ಲಾದೇಶದ ಸುದ್ದಿ ಮಾಧ್ಯಮಗಳ ಪ್ರಕಾರ, ಭಾರತದಿಂದ ಆಗಮಿಸುತ್ತಿದ್ದ ಸುಮಾರು 200 ಮಂದಿಯನ್ನು ನೆರೆಯ ಪಶ್ಚಿಮಬಂಗಾಳದ ಗಡಿಯಲ್ಲಿ ಬಂಧಿಸಲಾಗಿದೆ. ಬೆಂಗಳೂರಿನಲ್ಲಿ ಅಕ್ರಮವಾಗಿ ನಡೆಸುತ್ತಿದ್ದ ಜನರು ಬಾಂಗ್ಲಾದೇಶಕ್ಕೆ ತೆರಳುತ್ತಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ಇನ್ನು ಮುಂದೆ ತಮಗೆ ಭಾರತದ ನೆಲದಲ್ಲಿ ಉಳಿಗಾಲವಿಲ್ಲ ಎಂಬುದನ್ನು ಅಕ್ರಮ ವಲಸಿಗರು ಅರಿತುಕೊಂಡಿದ್ದಾರೆ ಎಂಬುದಕ್ಕೆ ಇದುವೇ ಸಾಕ್ಷಿ.
ಇತ್ತೀಚಿಗಷ್ಟೇ ಬೆಂಗಳೂರು ಪೊಲೀಸರು ಅಕ್ರಮ ಬಾಂಗ್ಲಾದೇಶಿ ವಲಸಿಗರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಲು ಆರಂಭಿಸಿದ್ದಾರೆ. ಅಕ್ರಮ ವಲಸಿಗರ 2 ಶಿಬಿರಗಳ ಮೇಲೆ ದಾಳಿಯನ್ನು ನಡೆಸಲಾಗಿದೆ ಮತ್ತು 60 ಮಂದಿಯನ್ನು ಬಂಧಿಸಲಾಗಿದೆ. ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರು ಅಕ್ರಮ ವಲಸಿಗರಿಗೆ ಆಶ್ರಯ ಮತ್ತು ಉದ್ಯೋಗವನ್ನು ನೀಡುವವರ ವಿರುದ್ಧ ಎಚ್ಚರಿಕೆಯನ್ನು ರವಾನಿಸಿದ್ದಾರೆ. ವರದಿಗಳ ಪ್ರಕಾರ, ಹಲವು ಮಂದಿ ಅಕ್ರಮ ಬಾಂಗ್ಲಾದೇಶಿ ವಲಸಿಗರು ಪೊಲೀಸರ ಕ್ರಮದ ಬಳಿಕ ಬೆಂಗಳೂರು ನಗರವನ್ನು ತೊರೆದಿದ್ದಾರೆ. ಕಳೆದ ಶನಿವಾರ ಬೆಂಗಳೂರಿನಿಂದ ಸುಮಾರು 55 ಬಾಂಗ್ಲಾದೇಶಿ ಅಕ್ರಮ ವಲಸಿಗರನ್ನು ಕೋಲ್ಕತ್ತಾದ ಅವರ ರೈಲ್ವೆ ನಿಲ್ದಾಣಕ್ಕೆ ಗಡಿಪಾರಿಗಾಗಿ ಕರೆತರಲಾಗಿದೆ. ಅಕ್ರಮ ವಲಸಿಗರ ಗಡಿಪಾರು ಉಸ್ತುವಾರಿಯನ್ನು ನೋಡಿಕೊಳ್ಳುತ್ತಿರುವ ಬೆಂಗಳೂರು ಉಪಪೊಲೀಸ್ ಆಯುಕ್ತ ಎಸ್. ಡಿ. ಶರಣಪ್ಪ ಅವರು, “30 ಮಂದಿ ಪೊಲೀಸರು ಅಕ್ರಮ ವಲಸಿಗರನ್ನು ಸುಪರ್ದಿಗೆ ತೆಗೆದುಕೊಂಡಿದ್ದಾರೆ. ನಾವು ಪಶ್ಚಿಮ ಬಂಗಾಳ ಪೊಲೀಸರು, ಗಡಿ ಭದ್ರತಾ ಪಡೆ ಜೊತೆಗೆ ಮಾತುಕತೆಯನ್ನೂ ನಡೆಸುತ್ತಿದ್ದೇವೆ. ನಾವು ಈಗಾಗಲೇ ಕರ್ನಾಟಕ ಗೃಹ ಇಲಾಖೆ ಮತ್ತು ಕೇಂದ್ರ ಗೃಹ ಇಲಾಖೆಯ ಸಹಯೋಗದೊಂದಿಗೆ ಕಾರ್ಯನಿರ್ವಹಿಸುತ್ತಿದ್ದೇವೆ” ಎಂದಿದ್ದಾರೆ.
“ಗೃಹ ಇಲಾಖೆಯು ಈತ ಭಾರತೀಯನಲ್ಲ ಎಂದು ಖಚಿತ ಪಡಿಸಿದ ಬಳಿಕ ನಾವು ಗಡಿಪಾರಿಗೆ ನೋಟಿಸ್ ಜಾರಿಗೊಳಿಸುತ್ತೇವೆ” ಎಂದು ಅವರು ಹೇಳಿದ್ದಾರೆ. ಅಲ್ಲದೆ, ಬೆಂಗಳೂರು ಪೊಲೀಸರು ಕಠಿಣ ಕ್ರಮವನ್ನು ಜರಗಿಸಲು ಪ್ರಾರಂಭಿಸಿದ ಬಳಿಕ ನಗರದಲ್ಲಿ ಬೀಡುಬಿಟ್ಟಿದ್ದ ಅರ್ಧದಷ್ಟು ಅಕ್ರಮ ವಲಸಿಗರು ನಗರವನ್ನು ತೊರೆದಿದ್ದಾರೆ. ಎಷ್ಟು ಮಂದಿ ನಗರವನ್ನು ತೊರೆದಿರಬಹುದು ಎಂಬ ಬಗ್ಗೆ ನಮಗೆ ಸ್ಪಷ್ಟತೆ ಇಲ್ಲ ಎಂದಿದ್ದಾರೆ.
ಬಾಂಗ್ಲಾದೇಶದ ಪತ್ರಿಕೆ ಢಾಕಾ ಟ್ರಿಬ್ಯೂನ್ ಪ್ರಕಾರ, ಬಾರ್ಡರ್ ಗಾರ್ಡ್ ಬಾಂಗ್ಲಾದೇಶ್ ಪಡೆ ಗಡಿಯಲ್ಲಿ ಭಾರತದಿಂದ ಬಂದ ಸುಮಾರು 200 ಮಂದಿಯನ್ನು ಬಂಧನಕ್ಕೊಳಪಡಿಸಿದೆ. ಜೆನೈದಾದಲ್ಲಿನ ಮೊಹೇಶ್ಪುರ್ ಮೂಲಕ ಇವರು ಬಾಂಗ್ಲವನ್ನು ಪ್ರವೇಶಿಸಿ ದ್ದಾರೆ ಎನ್ನಲಾಗಿದೆ. ಬಾಂಗ್ಲಾದೇಶದ ಇನ್ನೊಂದು ಇಂಗ್ಲಿಷ್ ಪತ್ರಿಕೆ ಸುಮಾರು 329 ಬಂದಿ ಭಾರತದಿಂದ ಬಾಂಗ್ಲಾದೇಶಕ್ಕೆ ಬಂದಿದ್ದು ಅವರನ್ನು ಬಾರ್ಡರ್ ಗಾರ್ಡ್ಸ್ ಬಾಂಗ್ಲಾದೇಶ್ ಬೆಟಾಲಿಯನ್ ಬಂಧನಗಳ ಪಡಿಸಿದೆ. ಅಲ್ಲದೆ ಬಂಧಿತರೆಲ್ಲರೂ ಬಾಂಗ್ಲಾದೇಶದ ಮೂಲದವರು ಎನ್ನುವುದನ್ನು ಅದು ಖಚಿತಪಡಿಸಿದೆ.
ಈ ಬೆಳವಣಿಗೆಯು ಮೋದಿ ಸರಕಾರ ಅಕ್ರಮ ವಲಸೆಯೇ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿರುವುದು ದ್ಯೋತಕವಾಗಿದೆ. ಈಗಾಗಲೇ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ದೇಶವ್ಯಾಪಿಯಾಗಿ ರಾಷ್ಟ್ರೀಯ ಪೌರತ್ವ ನೋಂದಣಿ ಯನ್ನು ಅನುಷ್ಠಾನಕ್ಕೆ ತರುವುದಾಗಿ ಘೋಷಣೆ ಮಾಡಿದ್ದಾರೆ. ಇದರಿಂದ ದೇಶವ್ಯಾಪಿಯಾಗಿ ನೆಲೆಸಿರುವ ಅಕ್ರಮ ವಲಸಿಗರ ನಿಜ ಬಣ್ಣ ಬಯಲಾಗಲಿದೆ. ಈಗಾಗಲೇ ಅಸ್ಸಾಮ್ ರಾಜ್ಯದಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ ಯನ್ನು ಅನುಷ್ಠಾನಕ್ಕೆ ತರಲಾಗಿದೆ. ಶೀಘ್ರದಲ್ಲೇ ಇದು ದೇಶವ್ಯಾಪಿಯಾಗಿ ಅನುಷ್ಠಾನಗೊಳ್ಳಲಿದೆ.
ಬಿಜೆಪಿ ಪಕ್ಷವು ಹಿಂದಿನಿಂದಲೂ ಅಕ್ರಮ ವಲಸೆಯನ್ನು ತೀವ್ರವಾಗಿ ವಿರೋಧಿಸುತ್ತಾ ಬಂದಿದೆ. ಅದರಲ್ಲೂ ಕೇಂದ್ರ ಗೃಹಸಚಿವರಾಗಿ ಅಮಿತ್ ಶಾ ಅವರು ನೇಮಕವಾದ ಬಳಿಕ ಬಿಜೆಪಿಯ ನಿಲುವು ಇನ್ನಷ್ಟು ಗಟ್ಟಿಗೊಂಡಿದೆ. ಅವರು ಅಕ್ರಮ ವಲಸೆಯೇ ವಿರುದ್ಧ ಕಠಿಣವಾದ ನಿಲುವನ್ನು ತಳೆದಿದ್ದಾರೆ. ಆಡಳಿತರೂಢ ಕೇಂದ್ರ ಸರಕಾರ ಅಕ್ರಮ ವಲಸಿಗರನ್ನು ಎಂದೆಂದಿಗೂ ಸಹಿಸಿಕೊಳ್ಳುವುದಿಲ್ಲ ಎಂಬುದನ್ನು ಅವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಭಯಬೀತ ಗೊಂಡಿರುವ ಅಕ್ರಮ ವಲಸಿಗರು ದೇಶವನ್ನು ತೊರೆಯುವ ಕಾರ್ಯವನ್ನು ಮಾಡುತ್ತಿದ್ದಾರೆ. ಇದು ನರೇಂದ್ರ ಮೋದಿ ಸರಕಾರದ ಕಠಿಣ ನಿಲುವಿಗೆ ಸಿಕ್ಕ ಜಯ ಎಂದೇ ಪರಿಗಣಿಸಲ್ಪಟ್ಟಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.