News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸಂವಿಧಾನವನ್ನು ನಾವು ಪವಿತ್ರಗ್ರಂಥವೆಂದು ಪರಿಗಣಿಸಿದ್ದೇವೆ: ಮೋದಿ

 

ನವದೆಹಲಿ: ಸಂವಿಧಾನ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಅವರು, ಸಂವಿಧಾನವನ್ನು ನಾವು ಎಲ್ಲದಕ್ಕಿಂತಲೂ ಹೆಚ್ಚು ಪವಿತ್ರ ಗ್ರಂಥ ಎಂದು ಪರಿಗಣಿಸಿದ್ದೇವೆ ಎಂದಿದ್ದಾರೆ.

“ಸಂವಿಧಾನ ಭಾರತ ಮತ್ತು ಭಾರತೀಯರ ಘನತೆ ಮತ್ತು ಏಕತೆಗಾಗಿ ದೃಢವಾಗಿ ನಿಂತಿದೆ. ನಾವು ಸಂವಿಧಾನವನ್ನು ಹೆಚ್ಚು ಪವಿತ್ರವಾದ ಗ್ರಂಥ ಎಂದು ಪರಿಗಣಿಸಿದ್ದೇವೆ” ಎಂದಿದ್ದಾರೆ.

ಭಾರತದ ಪ್ರಜಾಪ್ರಭುತ್ವದ ಮೇಲಿನ ನಂಬಿಕೆಯನ್ನು ಕುಗ್ಗಿಸಲು ಬಿಡದ 130 ಕೋಟಿ ಜನತೆಗೆ ನನ್ನ ನಮನಗಳು ಎಂದಿರುವ ಮೋದಿ, ಸಂವಿಧಾನವನ್ನು ನಾವು ಪವಿತ್ರಗ್ರಂಥ ಮತ್ತು ಮಾರ್ಗದರ್ಶಿ ಬೆಳಕು ಎಂದು ಪರಿಗಣಿಸಿದ್ದೇವೆ ಎಂದಿದ್ದಾರೆ.

“ಭಾರತದ ಸಂವಿಧಾನದ ಸ್ಫೂರ್ತಿಯು ವೃದ್ಧಿಯಾಗುತ್ತಿದೆ ಮತ್ತು ಸದೃಢವಾಗಿದೆ ಎನ್ನುವುದು ನನಗೆ ಸಂತೋಷವನ್ನು ತಂದಿದೆ. ಸಂವಿಧಾನವನ್ನು ಯಾರಾದರೂ ಅಲುಗಾಡಿಸಲು ಪ್ರಯತ್ನಿಸಿದಾಗಲೂ, ಭಾರತೀಯರು ಒಗ್ಗಟ್ಟಾಗಿ ಅದನ್ನು ವಿಫಲಗೊಳಿಸಿದ್ದಾರೆ. ಸಂವಿಧಾನ ಎಂದಿಗೂ ತಲೆಬಾಗಲು ಒಪ್ಪಿಕೊಂಡಿಲ್ಲ” ಎಂದಿದ್ದಾರೆ.

ಭಾರತದ ಸಂವಿಧಾನ ಶಿಲ್ಪಿ ಡಾಕ್ಟರ್ ಬಿ. ಆರ್. ಅಂಬೇಡ್ಕರ್ ಅವರನ್ನು ಸ್ಮರಿಸಿದ ಮೋದಿ, ಇಂದು ಅಂಬೇಡ್ಕರ್ ಬದುಕಿದ್ದರೆ ನಿಜಕ್ಕೂ ಅತೀವ ಸಂತೋಷ ಪಡುತ್ತಿದ್ದರು ಎಂದಿದ್ದಾರೆ.

1950ರ ಜನವರಿ 26ರಂದು ಸಂವಿಧಾನವನ್ನು ಅನುಷ್ಠಾನಗೊಳಿಸಿದ ಬಳಿಕ ಭಾರತದ ಪ್ರಜಾಪ್ರಭುತ್ವವು ಬಲಿಷ್ಠ ಗೊಂಡಿದೆ ಮತ್ತು ಸಬಲೀಕರಣಗೊಳ್ಳುತ್ತಾ ಬಂದಿದೆ ಎಂದಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top