News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ABVP ವತಿಯಿಂದ ‘ಅಯೋಧ್ಯೆ ಹೋರಾಟದ ಹಾದಿ’ ಕುರಿತು ಅಧ್ಯಯನ ವೃತ್ತ

ಮಂಗಳೂರು : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ನಗರದ ವತಿಯಿಂದ ಅಯೋಧ್ಯೆ ಹೋರಾಟದ ಹಾದಿ ವಿಷಯದ ಕುರಿತು ಕಾಲೇಜು ವಿದ್ಯಾರ್ಥಿಗಳಿಗೆ ಅಧ್ಯಯನ ವೃತ್ತವನ್ನು ಆಯೋಜಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಮುಖ್ಯ ವಕ್ತಾರರಾಗಿ ಡಾ|ಪಿ. ಅನಂತಕೃಷ್ಣ ಭಟ್ ಅವರು ಮಾತನಾಡಿ ಅಯೋಧ್ಯೆ ಕುರಿತಾದ ಪೌರಾಣಿಕ ಕಥೆಯಿಂದ ಹಿಡಿದು ಸುಪ್ರೀಂಕೋರ್ಟ್ ತೀರ್ಪಿನವರೆಗೆ ಎಲ್ಲಾ ರೀತಿಯ ಮಾಹಿತಿಯನ್ನು ಅವರು ನೀಡಿದರು. ರಾಮನಿಂದ ರಾಮಲಲ್ಲ ಕತೆ ಜನ್ಮ ಭೂಮಿ ಮಸ್ಜಿದ್ ಬಾಬ್ರಿ ಮಸೀದಿಯಾದ ಕಥೆ ಕರಸೇವಕರು ಅಯೋಧ್ಯೆಗೆ ನಡೆದುಬಂದ ಹಾದಿಯನ್ನು ನೆನೆಯುತ್ತಾ ಹಲವಾರು ರೀತಿಯ ಮಾಹಿತಿಗಳನ್ನು ನೀಡಿದರು.

ಈ ಸಂದರ್ಭದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ರಾಷ್ಟ್ರೀಯ ಅಧಿವೇಶನದ ಬಿತ್ತಿ ಪತ್ರಗಳ ಬಿಡುಗಡೆಯನ್ನು ಮಾಡಲಾಯಿತು.

ಈ ಸಂದರ್ಭದಲ್ಲಿ ಮಂಗಳೂರು ಮಹಾನಗರದ ಕಾರ್ಯದರ್ಶಿಯಾದ ಮಣಿಕಂಠ ಕಳಸ, ನಗರ ಸಂಘಟನಾ ಕಾರ್ಯದರ್ಶಿ ವೀರೇಶ್ ಅಜ್ಜಣ್ಣರವರು ಸಹಕಾರ್ಯದರ್ಶಿ ಅಕ್ಷಯ್ ಕಾಮಾಜೆ ಶ್ರೇಯಸ್ ನಿಶಾನ್ ಆಳ್ವ ಯುನಿವರ್ಸಿ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸಂಪತ್, ಜಿಲ್ಲಾ ಸಂಚಾಲಕರಾದ ಸಂದೇಶ್ , ವಿದ್ಯಾರ್ಥಿನಿ ಪ್ರಮುಖ್ ಸಹನಾ ರಾವ್, ಶೀತಲ್ ಕುಮಾರ್, ಅಕ್ಷಯ್ ಚರಣ್, ಸಂಜನ್, ಸುಶಾನ, ಅಶ್ವಿನಿ ಮತ್ತಿತರರು ಉಪಸ್ಥಿತರಿದ್ದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top