News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಹೂಡಿಕೆ ಮತ್ತು ಸುಲಲಿತ ಉದ್ಯಮಕ್ಕಾಗಿ ಭಾರತಕ್ಕೆ ಬನ್ನಿ : ಬ್ಯಾಂಕಾಕ್‌ನಲ್ಲಿ ಮೋದಿ

ಬ್ಯಾಂಕಾಕ್ : ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಥಾಯ್ಲೆಂಡಿನ ಬ್ಯಾಂಕಾಕ್‌ನಲ್ಲಿ ಭಾರತದ ಪ್ರಮುಖ ಉದ್ಯಮ ಗ್ರೂಪ್‌ನ ಬೆಳ್ಳಿ ಮಹೋತ್ಸವ ಸಮಾರಂಭದಲ್ಲಿ ಭಾಗಿಯಾದರು. ಮೂರು ದಿನಗಳ ಥಾಯ್ಲೆಂಡ್ ಪ್ರವಾಸಕ್ಕಾಗಿ ಪ್ರಧಾನಿ ಮೋದಿ ಅವರು ಶನಿವಾರ ಬ್ಯಾಂಕಾಕ್ ತೆರಳಿದ್ದರು. ಅಲ್ಲಿ 14ನೇ ಈಸ್ಟ್ ಏಷಿಯಾ ಸಮಿತ್­ನಲ್ಲಿ ಭಾಗಿಯಾಗುತ್ತಿದ್ದಾರೆ. ಅಲ್ಲಿ ಚೀನಾ ಅಧ್ಯಕ್ಷ ಸೇರಿದಂತೆ ಹಲವಾರು ಮುಖಂಡರನ್ನು ಭೇಟಿಯಾಗುತ್ತಿದ್ದಾರೆ.

ಉದ್ಯಮ ಗ್ರೂಪ್‌ನ ಬೆಳ್ಳಿ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಮೋದಿ, ಭಾರತದಲ್ಲಿ ನಡೆದಿರುವ ಹಲವಾರು ಸಕಾರಾತ್ಮಕ ಬದಲಾವಣೆಗಳ ಬಗ್ಗೆ ಬೆಳಕು ಚೆಲ್ಲಿದರು. ಭಾರತದ ಪ್ರಸ್ತುತ ಸ್ಥಿತಿ ಅತ್ಯುತ್ತಮವಾದದ್ದು ಎಂದು ಬಣ್ಣಿಸಿದರು. “ಭಾರತದಲ್ಲಿ ಪ್ರಸ್ತುತ ನಡೆಯುತ್ತಿರುವ ಅತ್ಯಂತ ಸಕಾರಾತ್ಮಕ ಬದಲಾವಣೆಗಳ ಬಗ್ಗೆ ನಿಮಗೆ ಚಿತ್ರಣವನ್ನು ನೀಡಲು ನಾನು ಬಯಸುತ್ತಿದ್ದೇನೆ. ಇದು ಭಾರತದ ಅತ್ಯುತ್ತಮ ಸ್ಥಿತಿ ಎಂದು ನಾನು ವಿಶ್ವಾಸದಿಂದ ಹೇಳುತ್ತೇನೆ” ಎಂದಿದ್ದಾರೆ.

ಭಾರತಕ್ಕೆ ಬಂದು ಹೂಡಿಕೆ ಮಾಡುವಂತೆ ಉದ್ಯಮಿಗಳಿಗೆ ಕರೆ ನೀಡಿದ ಅವರು, ಭಾರತೀಯರ ಆತ್ಮೀಯ ಆತಿಥ್ಯವನ್ನು ಅನುಭವಿಸುವಂತೆ ಮನವಿ ಮಾಡಿದರು. “ಸುಲಲಿತ ಉದ್ಯಮ ಮತ್ತು ಹೂಡಿಕೆಗಾಗಿ ಭಾರತಕ್ಕೆ ಬನ್ನಿ. ನಾವಿನ್ಯತೆ ಮತ್ತು ಸ್ಟಾರ್ಟ್ಅಪ್‌ಗಾಗಿ ಭಾರತಕ್ಕೆ ಬನ್ನಿ. ಭಾರತದ ಅತ್ಯುತ್ತಮ ಪ್ರವಾಸಿ ತಾಣಗಳ ಮತ್ತು ಭಾರತೀಯರ ಆತ್ಮೀಯ ಆತಿಥ್ಯದ ಅನುಭವವನ್ನು ಪಡೆಯಿರಿ. ತೆರೆದ ಬಾಹುಗಳಿಂದ ನಿಮ್ಮನ್ನು ಸ್ವೀಕರಿಸಲು ಭಾರತ ಕಾತುರವಾಗಿದೆ” ಎಂದಿದ್ದಾರೆ.

ಭಾರತವು ಅಧಿಕಾರಿಶಾಹಿ ದೋರಣೆಯಲ್ಲಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದೆ ಎಂದಿರುವ ಪ್ರಧಾನಿ ಮೋದಿ, 2013ರ ಬಳಿಕ ಭಾರತವು ಹಲವಾರು ಯಶೋಗಾಥೆಗಳಿಗೆ ಸಾಕ್ಷಿಯಾಗಿದೆ ಎಂದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top