News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಆರ್‌ಎಸ್ಎಸ್ ಇಡೀ ಸಮಾಜದ ಬದಲಾವಣೆಯನ್ನು ಬಯಸುತ್ತದೆ : ಭಾಗವತ್

ಭುವನೇಶ್ವರ : ಆರ್‌ಎಸ್ಎಸ್ ಯಾರ ಮೇಲೆಯೂ ದ್ವೇಷದ ಭಾವವನ್ನು ಇಟ್ಟುಕೊಂಡಿಲ್ಲ ಎಂದು ಪ್ರತಿಪಾದಿಸಿರುವ ಸರಸಂಘಚಾಲಕ ಮೋಹನ್ ಭಾಗವತ್ ಅವರು, ಕೇವಲ ಹಿಂದೂ ಸಮಾಜದ ಮಾತ್ರವಲ್ಲ, ಇಡೀ ಸಮಾಜದ ಬದಲಾವಣೆಯನ್ನು ಆರ್‌ಎಸ್‌ಎಸ್ ಬಯಸುತ್ತದೆ ಎಂದಿದ್ದಾರೆ.

ಅಖಿಲ ಭಾರತೀಯ ಕಾರ್ಯಕಾರಿ ಮಂಡಳಿ ಸಭೆಗೂ ಮುಂಚಿತವಾಗಿ ಪ್ರಬುದ್ಧರ ಸಭೆಯನ್ನುದ್ದೇಶಿಸಿ ಮಾತನಾಡಿದ ಭಾಗವತ್, ಸಮಾಜವನ್ನು ಒಂದಾಗಿ ಸಂಘಟಿತಗೊಳಿಸುವ ಅವಶ್ಯಕತೆ ಇದೆ ಮತ್ತು ಎಲ್ಲಾ ವರ್ಗಗಳು ಒಟ್ಟುಗೂಡಿ ಸಾಗಬೇಕಾಗಿದೆ. ಈ ನಿಟ್ಟಿನಲ್ಲಿ ಆರ್‌ಎಸ್‌ಎಸ್ ಕಾರ್ಯನಿರ್ವಹಿಸುತ್ತಿದೆ ಎಂದಿದ್ದಾರೆ.

“ನಮಗೆ ಯಾರ ಬಗ್ಗೆಯೂ ದ್ವೇಷವಿಲ್ಲ. ಬದಲಾವಣೆಯನ್ನು ತರಬಲ್ಲಂತಹ ಅತ್ಯುತ್ತಮ ಸಮಾಜವನ್ನು ನಿರ್ಮಾಣ ಮಾಡಲು ನಾವು ಒಗ್ಗಟ್ಟಾಗಿ ಕಾರ್ಯನಿರ್ವಹಿಸಬೇಕು ಮತ್ತು ದೇಶವನ್ನು ಒಂದಾಗಿ ಅಭಿವೃದ್ಧಿಪಡಿಸಬೇಕು” ಎಂದಿದ್ದಾರೆ.

ಭಾರತದ ವೈವಿಧ್ಯತೆಯನ್ನು ಕೊಂಡಾಡಿದ ಅವರು, ಇಡೀ ದೇಶ ಒಂದು ಕೊಂಡಿಯೊಂದಿಗೆ ಬೆಸೆದುಕೊಂಡಿದೆ ಎಂದಿದ್ದಾರೆ.

“ವಿವಿಧ, ಭಾಷೆ, ಭೂ ಪ್ರದೇಶಗಳನ್ನು ಹೊಂದಿದ್ದರು ಭಾರತದ ಜನರು ತಮ್ಮನ್ನು ಒಂದು ಎಂದು ಪರಿಗಣಿಸಿದ್ದಾರೆ. ಈ ಒಗ್ಗಟ್ಟಿನ ವಿಭಿನ್ನ ಭಾವದಿಂದಲೇ ಮುಸ್ಲಿಂ, ಪಾರ್ಸಿ ಹೀಗೆ ವಿವಿಧ ಧರ್ಮಗಳಿಗೆ ಸೇರಿದ ಜನರು ಭಾರತದಲ್ಲಿ ಸುರಕ್ಷಿತ ಭಾವನೆಯಿಂದ ಜೀವನ ನಡೆಸುತ್ತಿದ್ದಾರೆ. ಪಾರ್ಸಿಗಳು ಭಾರತದಲ್ಲಿ ಸಂರಕ್ಷಿಸಲ್ಪಟ್ಟಿದ್ದಾರೆ ಮತ್ತು ಮುಸ್ಲಿಮರು ಕೂಡ ಅತ್ಯಂತ ಸಂತೋಷದಿಂದ ಇದ್ದಾರೆ”ಎಂದಿದ್ದಾರೆ.

ಸಮಾಜದಲ್ಲಿ ಬದಲಾವಣೆಯನ್ನು ತರುವುದು ಅತ್ಯಗತ್ಯ, ಇದರಿಂದ ಸಮಾಜದ ಅದೃಷ್ಟ ಬದಲಾಗುತ್ತದೆ ಎಂದು ಭಾಗವತ್ ಪ್ರತಿಪಾದಿಸಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top