ಮುಂಬಯಿ: ಜನಪ್ರಿಯ ಕಾಮಿಡಿ ಶೋ ’ಕಾಮಿಡಿ ನೈಟ್ಸ್ ವಿಥ್ ಕಪಿಲ್’ನ ಕಪಿಲ್ ಶರ್ಮಾ ಮತ್ತು ತಂಡ ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಎನಿಮಲ್ಸ್ (ಪೇಟಾ) ಅಭಿಯಾನದಲ್ಲಿ ಭಾಗವಹಿಸಲಿದೆ. ಪ್ರಾಣಿಗಳ ದತ್ತು ಪಡೆಯಲು ಕರೆ ನೀಡುವುದು ಈ ಅಭಿಯಾನದ ಮುಖ್ಯ ಗುರಿ.
ಛಾಯಾಗ್ರಾಹಕ ಗೌರವ್ ಸಾವನ್ ಛಾಯಾಗ್ರಹಣದಲ್ಲಿ ಅಭಿಯಾನವನ್ನು ಚಿತ್ರೀಕರಣ ಮಾಡಲಾಗಿದೆ, ಕಪಿಲ್ ಅವರು ದತ್ತು ತೆಗೆದುಕೊಂಡ ನಾಯಿ ಝಂಜೀರ್ ಅನ್ನು ಅಭಿಯಾನದ ದೃಶ್ಯದಲ್ಲಿ ತೋರಿಸಲಾಗಿದೆ.
ಅಪಾಯದಲ್ಲಿದ್ದ ನಾಯಿಯನ್ನು ಕಪಿಲ್ ಮತ್ತು ಅವರ ತಂಡದವರಾದ ಸುಮೋನಾ ಚಕ್ರವರ್ತಿ, ಅಲಿ ಅಸಗರ್, ಅನಿಲ್ ಗ್ರೋವರ್ ಮತ್ತು ಕಿಕು ಶಾರ್ದಾ ಅವರು ಸೇರಿ ರಕ್ಷಿಸಿದ್ದರು, ಅದಕ್ಕೆ ಝಂಜೀರ್ ಎಂದು ಹೆಸರಿಡಲಾಗಿತ್ತು.
ಜನರು ಪ್ರಾಣಿಗಳ ಮೇಲೆ ಕಲ್ಲೆಸೆಯುತ್ತಾರೆ, ಕಿರುಕುಳ ನೀಡುತ್ತಾರೆ. ಅವುಗಳು ಗಾಯಗೊಂಡು ರೋಗಗಳಿಗೆ ತುತ್ತಾಗುತ್ತವೆ. ಆದರೆ ಅವುಗಳ ಸಹಾಯಕ್ಕೆ ಯಾರೂ ಬರುವುದಿಲ್ಲ. ಹೀಗಾಗಿ ಅಭಿಯಾನಕ್ಕೆ ಕೈಜೋಡಿಸಿದ್ದೇವೆ ಎಂದು ಅಲಿ ಹೇಳುತ್ತಾರೆ.
ಇಬ್ಬರು ಸಹ ನಟರ ನಡುವೆ ’ಜಗಳ’ ನಡೆದಾಗ ಮುನಿಸುಗೊಂಡ ಝಂಜೀರ್ ಈಗ ನಮ್ಮ ಪರಿವಾರದ ಒಂದು ಭಾಗವಾಗಿದೆ ಎಂದು ಕಪಿಲ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.