News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಅಡಕೆ ಮಾರಾಟ ಮಾಡಿದ ಹಣ ಕಳವು : ಆರೋಪಿ ಬಂಧನ

ಕಾರ್ಕಳ : ರಸ್ತೆ ಬದಿ ನಿಲ್ಲಿಸಿದ್ದ ಪಿಕಪ್ ವಾಹನದ ಡ್ಯಾಶ್ ಬೋರ್ಡ್‌ನಿಂದ 2 ಲಕ್ಷ ರೂ. ಹಣವನ್ನು ಕಳವುಗೈದ ಸಾಗರ ನಿವಾಸಿ ಪ್ರವೀಣ್ ಎಂ.ಕೆ(25) ಆರೋಪಿ ಯನ್ನು ನಗರ ಠಾಣೆಯ ಪೊಲೀಸರು ಬಂಸಿದ್ದಾರೆ.

19KV-CCB

ಕಳೆದ ಫೆ.10ರಂದು ಅಡಕೆ ವ್ಯಾಪಾರಿ ಅಬ್ದುಲ್ ಸಮದ್ 16 ಕ್ವಿಂಟಾಲ್ ಅಡಕೆಯನ್ನು ಸಾಗರದಿಂದ ಮಂಗಳೂರು ಪರಂಗಿಪೇಟೆಯ ಅಡಕೆ ಅಂಗಡಿಗೆ ಮಾರಾಟ ಮಾಡಿದ್ದ. ಅದರಿಂದ ಬಂದ 2 ಲಕ್ಷ ರೂ. ಹಣವನ್ನು ಬಾಡಿಗೆಗೆ ಗೊತ್ತುಮಾಡಿದ ಪಿಕಪ್ ವಾಹನದ ಡ್ಯಾಶ್ ಬೋರ್ಡಿನಲ್ಲಿಟ್ಟು ಊರಿಗೆ ವಾಪಾಸ್ಸಾಗಿದ್ದ. ಕಾರ್ಕಳ ಮಾರ್ಗವಾಗಿ ಸಾಗರಕ್ಕೆ ತೆರಳುತ್ತಿದ್ದ ವೇಳೆ ಮರ್ಣೆ ಗ್ರಾಮದ ಎಣ್ಣೆಹೊಳೆಯ ಬಳಿ ಪಿಕಫ್ ವಾಹನವನ್ನು ನಿಲ್ಲಿಸುವಂತೆ ಸೂಚಿಸಿ ಮೂತ್ರ ವಿಸರ್ಜನೆಗೆ ಇಳಿದಿದ್ದ.

ಆದರೆ ವಾಪಾಸು ಬಂದು ವಾಹನ ಹತ್ತಿ ನೋಡಿದಾಗ ಡ್ಯಾಸ್ ಬೋರ್ಡ್‌ನಲ್ಲಿದ್ದ ಹಣ ನಾಪತ್ತೆಯಾಗಿತ್ತು. ಈ ಸಂದರ್ಭ ವಾಹನದಲ್ಲಿದ್ದ ಚಾಲಕ ಸಲೀಂ ಮತ್ತು ಅಜೀಂ ಕಳವು ಮಾಡಿರಬಹುದು ಎಂದು ಶಂಕಿಸಿ ಕಾರ್ಕಳ ನಗರ ಠಾಣೆಯಲ್ಲಿ ದೂರು ನೀಡಲಾಗಿತ್ತು. ಪ್ರಕರಣವನ್ನು ಕೈಗೆತ್ತಿಕೊಂಡ ಪೊಲೀಸರು ಈ ಹಿಂದೆ ವಾಹನದಲ್ಲಿ ಕ್ಲೀನರ್ ಆಗಿದ್ದ ಪ್ರವೀಣ್ ಎಂಬಾತನನ್ನು ಸಂಶಯದ ಮೇಲೆ ಬಂಧಿಸಿ ವಿಚಾರಣೆ ನಡೆಸಿದಾಗ ಆತ ತಪ್ಪೊಪ್ಪಿಕೊಂಡಿದ್ದಾನೆ. ಫೆ.10ರಂದು ಆರೋಪಿಯು ನಕಲಿ ಕೀ ಬಳಸಿ ಹಣ ಕದ್ದು ಪರಾರಿಯಾಗಿದ್ದ. ಆ ಸಂದರ್ಭ ತನ್ನ ಜತೆಯಲ್ಲಿದ್ದವರ ಮೇಲೆ ಸಂಶಯದಿಂದ ಕಾಣುವಂತಾಯಿತು.

ಉಡುಪಿ ಜಿಲ್ಲಾ ಎಸ್.ಪಿ.ಅಣ್ಣಾಮಲೈ ಆದೇಶದಂತೆ ಹೆಚ್ಚುವರಿ ಎಸ್.ಪಿ.ಸಂತೋಷ್ ಕುಮಾರ್ ಮಾರ್ಗದರ್ಶನದಲ್ಲಿ ಕಾರ್ಕಳ ಡಿವೈಎಸ್‌ಪಿ ವಿನಯ ಎಸ್.ನಾಯಕ್ ನಿರ್ದೇಶನದಂತೆ ಕಾರ್ಕಳ ವೃತ್ತ ನಿರೀಕ್ಷಕ ಜಿ.ಎಂ.ನಾಯ್ಕರ್, ಸಿಬ್ಬಂದಿ ಎಚ್.ಸಿ.ರಾಜೇಶ್ ಪಿ., ಏಕನಾಥ್, ಪಿ.ಸಿ.ಸಂಜಯ್, ಅರುಣ್ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಸಿ ಕಳವು ಮಾಡಿದ್ದ ಹಣವನ್ನು ವಶಪಡಿಸಿಕೊಂಡಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top