ನವದೆಹಲಿ: 2019 ರ ಬಹುನಿರೀಕ್ಷಿತ ‘ಮೋಹನ್ ಬಗಾನ್ ರತ್ನ’ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ. ಎರಡು ಬಾರಿ ಒಲಿಂಪಿಕ್ ಚಿನ್ನದ ಪದಕ ಗೆದ್ದ ಹಾಕಿ ಪಟು ಕೇಶವ್ ದತ್ತ ಮತ್ತು ಭಾರತದ ಮಾಜಿ ಫುಟ್ಬಾಲ್ ಕ್ಯಾಪ್ಟನ್ ಪ್ರಸೂನ್ ಬ್ಯಾನರ್ಜಿ ಅವರು ಪ್ರಶಸ್ತಿಗೆ ಬಾಜನರಾಗಿದ್ದಾರೆ. ಜುಲೈ 29 ರಂದು ನಡೆಯುವ ವಾರ್ಷಿಕ ದಿನಾಚರಣೆಯಲ್ಲಿ ಈ ಪ್ರಶಸ್ತಿಯನ್ನು ಪ್ರದಾನಿಸಲಾಗುತ್ತದೆ.
2019 ರ ಐಸಿಸಿ ಕ್ರಿಕೆಟ್ ವಿಶ್ವಕಪ್ನಲ್ಲಿ ಭಾರತದ ಹ್ಯಾಟ್ರಿಕ್ ಹೀರೋ ವೇಗಿ ಮೊಹಮ್ಮದ್ ಶಮಿ ಅವರನ್ನು ಮೋಹನ್ ಬಗಾನ್ ಸನ್ಮಾನಿಸಲಿದೆ. ಅಶೋಕ್ ಚಟರ್ಜಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಲಾಗುತ್ತಿದೆ. ಅಲ್ಲದೇ, ಸೌರವ್ ಗಂಗೂಲಿ, ಚುನಿ ಗೋಸ್ವಾಮಿ, ಡಾ. ವೆಸ್ ಪೇಸ್, ಪ್ರಸೇನ್ಜಿತ್ ಚಟರ್ಜಿ ಮತ್ತು ದೇಬ್ ಶಂಕರ್ ಹಾಲ್ಡರ್ ಅವರಿಗೆ ಲೈಫ್ ಮೆಂಬರ್ಶಿಪ್ ನೀಡಲಿದೆ.
94 ವರ್ಷದ ದತ್ತ ಅವರು, ಭಾರತದ ಅತ್ಯಂತ ಹಿರಿಯ ಹಾಕಿಪಟು ಎನಿಸಿಕೊಂಡಿದ್ದಾರೆ. 1948ರಲ್ಲಿ ಲಂಡನ್ ಗೇಮ್ಸ್ ಮೂಲಕ ಅವರು ಹಾಕಿಗೆ ಪಾದಾರ್ಪಣೆ ಮಾಡಿದರು. ಇಲ್ಲಿ ಭಾರತ ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ ಹಾಕಿಯಲ್ಲಿ ಚಿನ್ನದ ಪದಕ ಗೆದ್ದುಕೊಂಡಿತು. 1952 ರಲ್ಲಿ ಇವರು ಎರಡನೇ ಒಲಿಂಪಿಕ್ ಬಂಗಾರ ಗೆದ್ದರು. ಪ್ರಸೂನ್ ಚ್ಯಾಟರ್ಜಿಯವರೂ ಫುಟ್ಬಾಲ್ ಕ್ಯಾಪ್ಟನ್ ಆಗಿ ಸಾಕಷ್ಟು ಸಾಧನೆಯನ್ನು ಮಾಡಿದ್ದಾರೆ.
ಮೋಹನ್ ಬಗಾನ್ ಅಥ್ಲೆಟಿಕ್ ಕ್ಲಬ್ ಭಾರತದ ಪಶ್ಚಿಮ ಬಂಗಾಳ ಮೂಲದ ವೃತ್ತಿಪರ ಫುಟ್ಬಾಲ್ ಕ್ಲಬ್ ಆಗಿದೆ. ಕ್ಲಬ್ ಅನ್ನು ಆಗಸ್ಟ್ 15, 1889 ರಂದು ಭೂಪೇಂದ್ರ ನಾಥ್ ಬೋಸ್ ಸ್ಥಾಪಿಸಿದರು. ಇದು ಭಾರತದ ಅತ್ಯಂತ ಹಳೆಯ ಅಸೋಸಿಯೇಶನ್ ಫುಟ್ಬಾಲ್ ಕ್ಲಬ್ ಮತ್ತು ಏಷ್ಯಾದ ಅತ್ಯಂತ ಹಳೆಯ ಕ್ಲಬ್ಗಳಲ್ಲಿ ಒಂದಾಗಿದೆ. ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (ಎಐಎಫ್ಎಫ್)ನ ಪರವಾನಗಿ ಅಡಿಯಲ್ಲಿ ಕ್ಲಬ್ ಐ-ಲೀಗ್ನಲ್ಲಿ ಆಡುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.