ಮೈಸೂರು: ಮೈಸೂರಿನಿಂದ ಸುಮಾರು 20 ಕಿ.ಮೀ. ದೂರದಲ್ಲಿರುವ ಅರಸನಕೆರೆಯ ಜಮೀನೊಂದರಲ್ಲಿ 15 ಅಡಿ ಆಳದಲ್ಲಿ ಏಕಶಿಲೆಯ ಕಲ್ಲಿನಿಂದ ಕೆತ್ತಿದ ಶತಮಾನಗಳಷ್ಟು ಹಳೆಯದಾದ ನಂದಿ ಪ್ರತಿಮೆಗಳು ಪತ್ತೆಯಾಗಿವೆ.
ಸ್ಥಳೀಯರು, ವಿಶೇಷವಾಗಿ ಹಳ್ಳಿಯ ಹಿರಿಯರಿಗೆ ನಂದಿ ವಿಗ್ರಹಗಳು ಇರುವ ಬಗ್ಗೆ ಮೊದಲೇ ತಿಳಿದಿತ್ತು. ಸುಮಾರು ನಲವತ್ತೈದು ವರ್ಷಗಳ ಹಿಂದಿಯೇ ಈ ವಿಗ್ರಹಗಳ ಕುರುಹು ಪತ್ತೆಯಾಗಿತ್ತು. ನಂದಿಯ ತಲೆ ಭಾಗ ಮಾತ್ರ ಪತ್ತೆಯಾಗಿತ್ತು. ಈಗ ಸಂಪೂರ್ಣ ವಿಗ್ರಹಗಳ ಉತ್ಖನನ ಕಾರ್ಯ ನಡೆದಿದೆ. ಗ್ರಾಮಸ್ಥರು ಸ್ವಯಂ ಪ್ರೇರಿತವಾಗಿ ಮಣ್ಣಿನಲ್ಲಿ ಹುದುಗಿದ್ದ ನಂದಿ ವಿಗ್ರಹಗಳನ್ನು ಮೇಲಕ್ಕೆ ತಂದಿದ್ದಾರೆ. ಮೂರರಿಂದ ನಾಲ್ಕು ದಿನಗಳ ಕಾಲ ಭೂಮಿ ಅಗೆಯುವ ಕಾರ್ಯ ನಡೆದಿದೆ.
ಪ್ರತಿಮೆಗಳು 16 ಅಥವಾ 17 ನೇ ಶತಮಾನಕ್ಕೆ ಸೇರಿದವು, ಇದು ವಿಜಯನಗರ ಸಾಮ್ರಾಜ್ಯದ ನಂತರದ ಕಾಲಕ್ಕೆ ಸೇರಿದೆ ಎಂದು ಪುರಾತತ್ವಶಾಸ್ತ್ರಜ್ಞ ಎಂ.ಎಲ್ ಗೌಡ ಹೇಳಿದ್ದಾರೆ. ಈ ವಿಗ್ರಹಗಳು ನಯವಾದ ಕಲ್ಲಿನಿಂದ ಕೆತ್ತಿದ ಶಿಲ್ಪಗಳಾಗಿವೆ ಎಂದಿದ್ದಾರೆ.
ಪ್ರತಿಮೆಗಳನ್ನು ಒಂದೇ ಬಂಡೆಯಿಂದ ಕೆತ್ತಲಾಗಿದೆ. ಪ್ರತಿಮೆಗಳು ಅಪೂರ್ಣವಾಗಿವೆ. ಒಂದು ವಿಗ್ರಹ ಶೇ.60% ಪೂರ್ಣಗೊಂಡಂತೆ ಕಂಡುಬಂದರೆ, ಇನ್ನೊಂದು ಶೇ. 85ರಷ್ಟು ಪೂರ್ಣಗೊಂಡಂತೆ ಕಂಡುಬರುತ್ತಿದೆ ಎಂದು ಗೌಡ ಅವರು ಹೇಳಿದ್ದಾರೆ. ಪ್ರತಿಮೆಗಳ ಗಾತ್ರವೂ ಒಂದೇ ಆಗಿಲ್ಲ. ದೊಡ್ಡದಾದ ವಿಗ್ರವು ಸುಮಾರು 15 ಅಡಿ ಉದ್ದ ಮತ್ತು 12 ಅಡಿ ಎತ್ತರವಿದ್ದರೆ, ಚಿಕ್ಕದಾದ ವಿಗ್ರಹ ಹೆಚ್ಚು ಸಾಂದ್ರವಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಮೈಸೂರು ಮಹಾರಾಜ ಚಾಮರಾಜ ಒಡೆಯರ್ ಅವರು ಕೂಡ ಈ ನಂದಿಯನ್ನು ಮೇಲೆ ತೆಗೆಸಲು ಪ್ರಯತ್ನಿಸಿದ್ದರು. ಆದರೆ ಆಗ ಮಳೆ ಬಂದ ಕಾರಣ ಹೂಳು ತೆಗೆದಿದ್ದ ಜಾಗದಲ್ಲಿ ನೀರು ತುಂಬಿಕೊಂಡು ಮಹಾರಾಜರ ಪ್ರಯತ್ನವೂ ವಿಫಲವಾಗಿತ್ತು, ಮತ್ತೆ ಅವರು ಆ ಪ್ರಯತ್ನವನ್ನು ಮಾಡಲು ಹಿಂಜರಿದರು ಎಂದು ಈ ಗ್ರಾಮದ ಅನೇಕ ಹಿರಿಯರು ಹೇಳುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.