News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ತುರ್ತು ಪರಿಸ್ಥಿತಿಯ ಜನಸಂಘದ ಹಿರಿಯರ ಪಾದಪೂಜೆ ಮಾಡಿ ಸನ್ಮಾನ

ಬಿಜೆಪಿ ಮುಖಂಡ ಶ್ರೀ ಶೈಲೇಶ ಅಪ್ಟೆ ಅವರ ನೇತೃತ್ವದಲ್ಲಿ ಅಂದಿನ ಕರಾಳ ತುರ್ತು ಪರಿಸ್ಥಿತಿಯಲ್ಲಿ ಯಾವ ಜನ ಬೆಂಬಲವಿಲ್ಲದೇ, ಧನ ಬೆಂಬಲವಿಲ್ಲದೇ ಸರ್ವಾಧಿಕಾರಿಣಿಯ ಕ್ರೌರ್ಯದಿಂದ ದೈಹಿಕವಾಗಿ, ಆರ್ಥಿಕವಾಗಿ ನಲುಗಿ ಹೋದರು ಅಂದಿನ ಜನಸಂಘದ ಮಹಾನ್ ತ್ಯಾಗಿಗಳು..

ಇಂದಿನಂತೆ ಸಾಮಾಜಿಕ ಜಾಲತಾಣದಂತಹ ಅನುಕೂಲತೆಗಳಿಲ್ಲದ ಆ ಸನ್ನಿವೇಶದಲ್ಲಿ ಅವರು ಪಟ್ಟಪಾಡು ವರ್ಣಿಸಲಸದಳ..

ಇಂದೇನಾದರೂ ಈ ಬಿಜೆಪಿ ಹೆಮ್ಮರವಾಗಿ ಬೆಳೆದಿದ್ದರೆ ಅದಕ್ಕೆ ಅಂದಿನ ಜನಸಂಘದ ನಿಸ್ವಾರ್ಥ ದೇಶಪ್ರೇಮಿಗಳ ಅಪೂರ್ವ ತ್ಯಾಗವಲ್ಲದೇ ಬೇರೇನಿಲ್ಲ..

ಆ ನಿಟ್ಟಿನಲ್ಲಿ ಅಮಿತ್ ಷಾ ಅವರ ಆದೇಶದಂತೆ ಸಂಘಟನಾ ಪರ್ವವದ ಯೋಜನೆಯನ್ನು ಅನಂತ ಸವಾಯಿ, ಕಾಂತಿಲಾಲ ಕೋಠಾರಿ, ದಿಲಿಪ ಶೀಂದೆ, ಚಂದ್ರಪ್ಪಾ ಚಲವಾದಿ, ಶ್ರಿಕಾಂತ ಕುಲಕರ್ಣಿ ಮುಂತಾದ ಹಿರಿಯ ಜನಸಂಘದ ತ್ಯಾಗಿಗಳಿಗೆ ಅರ್ಪಿಸಬೇಕಾದ ಒಂದು ಗೌರವಾರ್ಪಣೆಯನ್ನು ಅವರ ಪಾದಪೂಜೆ ಮಾಡುವುದರೊಂದಿಗೆ ವಿಶೇಷವಾಗಿ ಆಚರಿಸಿದೆವು.

ಈ ಕಾಯರ್ಕ್ರಮಕ್ಕೆ ಮುಖಂಡರಾದ ಜಿವಪ್ಪಾ ಮಾಳಿ, ಪ್ರವಿಣ ಕಲ್ಯಾಣಿ, ವಿಠ್ಠಲ ಹೋಳೆಪ್ಪಗೋಳ, ಭೋಸಲೆ ವಕೀಲರು, ಮಂಜು ಭೋವಿ, ಸಿಧ್ಧಾರ್ಥ ಶೀಂದೆ, ಶಂಕರ ರಾಂಬಳ್ಳಿ, ದಿಪಕ ಕದಮ, ಪ್ರದಿಪ ಶಿಂಗಾರಿ, ಅನಿಲ ಬಾಗೆಮನಿ, ಹಾಗು ಪ್ರಕಾಶ ಅರಕೆರಿ ಅವರು ಭಾಗವಹಿಸಿದ್ದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top