ನವದೆಹಲಿ: ತೈಲ ಆಮದಿನ ವಿಷಯದಲ್ಲಿ ಭಾರತ ತನ್ನ ರಾಷ್ಟ್ರೀಯ ಹಿತದೃಷ್ಟಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತದೆ ಎಂಬುದಾಗಿ ನಾವು ನಂಬಿದ್ದೇವೆ ಮತ್ತು ನಾವು ಭಾರತದ ಇಂಧನ ಸುರಕ್ಷತೆಯ “ರಕ್ಷಕ”ನಾಗಿ ಕಾರ್ಯನಿರ್ವಹಿಸಲು ಸಿದ್ಧರಿದ್ದೇವೆ ಎಂದು ಇರಾನ್ ಮಂಗಳವಾರ ಹೇಳಿದೆ. ಯುಎಸ್ ನಿರ್ಬಂಧದ ಹಿನ್ನಲೆಯಲ್ಲಿ ಅದು ಈ ಮಾತನ್ನು ಹೇಳಿದೆ.
ಭಾರತದಲ್ಲಿನ ಇರಾನ್ನ ರಾಯಭಾರಿ ಅಲಿ ಚೆಗೆನಿ ಅವರು, ನಮ್ಮ ದೇಶವು ಭಾರತಕ್ಕೆ ಕೈಗೆಟುಕುವ ದರದಲ್ಲಿ, ಸಂಪೂರ್ಣ ಲಭ್ಯವಾಗಿ ಮತ್ತು ಸುರಕ್ಷತೆಯ ಇಂಧನವನ್ನು ಭಾರತಕ್ಕೆ ಒದಗಿಸಬಲ್ಲದು ಎಂದು ಅಭಿಪ್ರಾಯಿಸಿದ್ದಾರೆ.
ಅಮೆರಿಕದ ನಿರ್ಬಂಧಗಳಿಂದ ತಪ್ಪಿಸಿಕೊಳ್ಳಲು, ಭಾರತ ಮತ್ತು ಇತರ ದೇಶಗಳೊಂದಿಗೆ ತೈಲ ವ್ಯಾಪಾರಕ್ಕಾಗಿ ವಿನಿಮಯ, ರೂಪಾಯಿ ಮತ್ತು ಯುರೋಪಿಯನ್ ಕಾರ್ಯವಿಧಾನಗಳನ್ನು ಬಳಸುವ ಸಾಧ್ಯತೆಯನ್ನು ಇರಾನಿನ ರಾಯಭಾರಿ ಉಲ್ಲೇಖಿಸಿದ್ದಾರೆ.
“ಭಾರತ ಇರಾನಿನ ಸಾರ್ವಕಾಲೀಕ ಮಿತ್ರ’ ಎಂದು ಚೆಗೆನಿ ಬಣ್ಣಿಸಿದ್ದಾರೆ.
ಇರಾನ್ನಿಂದ ತೈಲ ಆಮದು ಮಾಡಿಕೊಳ್ಳುವುದಕ್ಕೆ ವಿಧಿಸಿರುವ ನಿರ್ಬಂಧಗಳಿಂದ ತಲೆದೋರಿರುವ ಪರಿಸ್ಥಿತಿಯಿಂದ ಭಾರತವನ್ನು ಕಾಪಾಡಲು ಅಮೆರಿಕಾ ಸರ್ವ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಭಾರತಕ್ಕೆ ಭೇಟಿ ನೀಡಿದ್ದ ವೇಳೆ ಭರವಸೆ ನೀಡಿದ್ದರು. ಈ ಹಿನ್ನಲೆಯಲ್ಲಿ ಇರಾನ್ ರಾಯಭಾರಿ ಚೆಗೆನಿ ಅವರ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.