ಬೆಳ್ತಂಗಡಿ : ರಾಜ್ಯ ಸರಕಾರದ ವ್ಯವಸ್ಥೆಗಳು ಒಂದೆಡೆ ರೈತರನ್ನು ಆತ್ಮಹತ್ಯೆಗೆ ದೂಡುತ್ತಿದ್ದರೆ ಇನ್ನೊಂದೆಡೆ ಬೆಳ್ತಂಗಡಿ ತಾಲೂಕಿನಲ್ಲಿ ರೈತನನ್ನು ಕ್ರಿಮಿನಲ್ ಆಗಿ ಬಿಂಬಿಸುವ ಹೇಯಕೃತ್ಯ ನಡೆಯುತ್ತಿದೆ. ಇದನ್ನು ಜಿಲ್ಲಾ ಮತ್ತು ತಾಲೂಕು ಬಿಜೆಪಿ ಘಟಕ ತೀವ್ರವಾಗಿ ಖಂಡಿಸುತ್ತದೆಯಲ್ಲದೆ ಈ ಬಗ್ಗೆ ಸಾರ್ವಜನಿಕ ಹೋರಾಟದ ಹೆಜ್ಜೆಯನ್ನೂ ಇಡಲಿದ್ದೇವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಪ್ರತಾಪ್ಸಿಂಹ ನಾಯಕ್ ಎಚ್ಚರಿಸಿದ್ದಾರೆ.
ಅವರು ಮಂಗಳವಾರ ಇಲ್ಲಿನ ವಾರ್ತಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಹತ್ಯಡ್ಕ ಗ್ರಾಮದ ನೆಕ್ಕಿಲು ಎಂಬಲ್ಲಿ ಅಲ್ಲಿನ ರೈತನ ಮೇಲೆ ಸರಕಾರಿ ಅಧಿಕಾರಿಗಳು ನಡೆಸಿದ ದೌರ್ಜನ್ಯದ ಘಟನೆಗೆ ಸಂಬಂಧಪಟ್ಟಂತೆ ಸತ್ಯಾಸತ್ಯತೆಯನ್ನು ಬಿಚ್ಚಿಟ್ಟರಲ್ಲದೆ ಆಡಳಿತಕ್ಕೆ ಎಚ್ಚರಿಕೆಯನ್ನು ನೀಡಿದರು.
ನೆಕ್ಕಿಲು ಮನೆಯ ಕೇಶವ ರಾವ್ ಅವರು ದಶಕಗಳಿಂದ ತನ್ನ ಪಟ್ಟಾ ಸ್ಥಳಕ್ಕೆ ಹೊಂದಿಕೊಂಡ ಕುಮ್ಕಿಯಲ್ಲಿ ಕೃಷಿ ಮಾಡಿಕೊಂಡು ಬರುತ್ತಿದ್ದಾರೆ ಮತ್ತು ಅದು ಅವರ ಸ್ವಾಧೀನದಲ್ಲೂ ಇದೆ. ಅಲ್ಲಿ ಅವರು ಮಾಡಿರುವ ರಬ್ಬರ್ ಕೃಷಿಯು ಫಲ ನೀಡುವ ಹಂತದಲ್ಲಿದೆ. ಕುಮ್ಕಿ ಹಕ್ಕನ್ನು ವಿರಹಿತವನ್ನಾಗಿ ಮಾಡಲುಡಿಸಿ ಹಂತದಲ್ಲಿ ಹಲವಾರು ಕ್ರಮ, ಕಾನೂನು ಇದೆ. ಆದರೆ ಇದನ್ಯಾವುದನ್ನೂ ಅಧಿಕಾರಿಗಳು ಪಾಲಿಸದೆ, ಕುಮ್ಕಿದಾರನಿಗೆ ನೋಟಿಸ್ನ್ನೂ ನೀಡದೆ, ಅಳತೆ ಮಾಡದೆಕೇವಲ ಟೇಬಲ್ ವರ್ಕ್ ಮಾತ್ರ ಮಾಡಿ, ಏಕಾಏಕಿ ಬಂದು ಸ್ಮಶಾನಕ್ಕೋಸ್ಕರ ಸ್ವಾಧೀನ ಪಡಿಸಿಕೊಳ್ಳಲು ಯತ್ನಿಸಿರುವುದು ರೈತನಿಗೆ ಮಾಡಿದ ಅನ್ಯಾಯವಾಗಿದೆ. ಓರ್ವ ಕಾನೂನು ಪಾಲಿಸುವ ರೈತ ಜಾಗಕ್ಕೋಸ್ಕರ ಏನೆಲ್ಲಾ ಮಾಡಬಹುದು ಅದನ್ನುಕಾನೂನು ರೀತ್ಯಾಮಾಡಿದ್ದಾರೆ. ಅದಲ್ಲದೆತನ್ನ ಮನೆಯ ಮತ್ತು ಎಸ್.ಸಿ.ಕಾಲೋನಿ ಸನಿಹ ಸ್ಮಶಾನ ನಿರ್ಮಿಸುವ ಬದಲು ಹತ್ತಿರದಲ್ಲೇ ಇರುವ ಸರಕಾರಿ ಜಾಗವನ್ನೂ ಅವರು ತೋರಿಸಿದ್ದಾರೆ. ಅಕ್ರಮ ಸಕ್ರಮಕ್ಕೆ ಅರ್ಜಿಯೂ ಹಾಕಿದ್ದರು. ಇದೆಲ್ಲವೂ ಎಸಿ ಮತ್ತು ಡಿಸಿ ಅವರ ಗಮನಕ್ಕೆ ಬಂದಿದ್ದರೂ ಈ ಬಗ್ಗೆ ಎಸಿ ಕೋರ್ಟಿನಲ್ಲಿ ಎರಡು ಅಪೀಲ್ ಇದ್ದರೂ ರೈತನಿಗೆ ಫೋರ ಅನ್ಯಾಯವಾಗಿದೆ ಎಂದರು.
ಪ್ರಸ್ತುತ ರೈತ ಆರ್ಟಿಐ ಕಾರ್ಯಕರ್ತರಾಗಿದ್ದು ಅರಸಿನಮಕ್ಕಿ ಗ್ರಾ.ಪಂ.ದ ಅನೇಕ ಅವ್ಯವಹಾರಗಳನ್ನು ಬಯಲಿಗೆಳೆದಿದ್ದರು. ಲೋಕಾಯುಕ್ತಕ್ಕೂ ದೂರು ನೀಡಿದ್ದರು.ಅದು ಈಗ ತನಿಖೆಯ ಹಂತದಲ್ಲಿದೆ. ಹೀಗಾಗಿ ಸ್ವಾಧೀನತೆಯ ಪ್ರಕರಣರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ನಡೆದಿದೆ. ಎಂಜಲು ಕಾಸಿಗೋಸ್ಕರ ಅಧಿಕಾರಿಗಳು ಏನನ್ನು ಬೇಕಾದರೂ ಮಾಡಿಯಾರು ಎಂಬುದನ್ನು ಇದು ತೋರಿಸಿಕೊಟ್ಟಿದೆ. ಅನ್ಯಾಯ ಆಗಿರುವುದು ಇಲ್ಲಿನ ತಹಸೀಲ್ದಾರರ ಗಮನಕ್ಕೆ ಬಂದಿದ್ದರೂ ಅವರೂ ಸುಮ್ಮನಿದ್ದಾರೆ. ಅಲ್ಲದೆ ಪೋಲಿಸರು ಈ ಘಟನೆಗೆ ಸಂಬಂಧಪಡ ದಎಪ್ಪತ್ತರ ಹರೆಯದ ರೈತನ ತಾಯಿಯ ಮೇಲೆ ದೈಹಿಕ ಹಿಂಸೆ ನೀಡಿ ದೌರ್ಜನ್ಯ ನಡೆಸಿದ್ದಾರೆ . ಸುಳ್ಳು ಕೇಸು ದಾಖಲಿಸಿ ರೈತನನ್ನು ಕ್ರಿಮಿನಲ್ ಆಗಿ ಬಿಂಬಿಸುವುದಕ್ಕೆ ಪೋಲಿಸರು ಹೊರಟಿದ್ದಾರೆ. ಈ ಅನ್ಯಾಯದ ವಿರುದ್ದ ಶಾಸಕರೂದನಿ ಎತ್ತಬೇಕುಎಂದು ಪಕ್ಷಆಗ್ರಹಿಸುತ್ತದೆಯಲ್ಲದೆ ಈ ಬಗ್ಗೆ ಸರಿಯಾದ ತನಿಖೆ ಆಗುವಂತೆ ನೀವೇನು ಕ್ರಮಕೈಗೊಳ್ಳುತ್ತೀರಿ ಎಂಬುದನ್ನು ತಿಳಿಸಬೇಕು. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಮತ್ತು ಅಧಿಕಾರಿಯ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತಾಗಬೇಕು ಎಂದರು.
ಅರಸಿನಮಕ್ಕಿ ಎಂಬುದು ಕೆಲವು ಸ್ಥಾಪಿತ ಹಿತಾಸಕ್ತಿಗಳಿಂದಾಗಿ ಗೂಂಡಾ ರಾಜ್ಯವಾಗಿದೆ. ಮರಗಳನ್ನು ಕದಿಯುವ, ವಿರೋಧಿಸಲು ಬಂದವರನ್ನು ಹೆದರಿಸುವಕಾರ್ಯ ನಿರಂತರವಾಗಿ ನಡೆಯುತ್ತಾ ಬಂದಿದೆ. ಸುಳ್ಳು ಕೇಸು ಹಾಕಿ ಯಾರನ್ನೂ ಬಗ್ಗಿಸಲು ಸಾಧ್ಯವಿಲ್ಲ ಎಂದು ಪಕ್ಷ ಎಚ್ಚರಿಸುತ್ತದೆಯಲ್ಲದೆ ನೆಕ್ಕಿಲು ಮನೆಯ ರೈತನಿಗೆ ನ್ಯಾಯ ಸಿಗುವವರೆಗೂ ಸಾರ್ವಜನಿಕ ಹೋರಾಟ ಮಾಡಲು ಪಕ್ಷ ತಯಾರಿ ನಡೆಸುತ್ತಿದೆ ಎಂದರು.
ಗೋಷ್ಠಿಯಲ್ಲಿ ಮಾಜಿ ಶಾಸಕ ಪ್ರಭಾಕರ ಬಂಗೇರ, ಜಿ.ಪಂ.ಸದಸ್ಯರಾದ ಕೊರಗಪ್ಪ ನಾಯ್ಕ, ಧನಲಕ್ಷ್ಮೀ, ಯುವ ಮೊರ್ಚಾ ಜಿಲ್ಲಾಧ್ಯಕ್ಷ ರಂಜನ್ಗೌಡ, ಎಸ್.ಸಿ.ಮೋರ್ಚಾ ಅಧ್ಯಕ್ಷ ರಾಘವಕಲ್ಮಂಜ, ಹಿಂದುಳಿದ ವರ್ಗಅಧ್ಯಕ್ಷ ಸದಾನಂದ ಉಂಗಿಲಬೈಲು, ಬಿಜೆಪಿ ಮಂಡಲಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಕಾರ್ಯದರ್ಶಿ ಸೀತಾರಾಮ ಬಿ.ಎಸ್. ಇದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.