ನವದೆಹಲಿ: ದೇಶಕ್ಕೆ ಅಸ್ಥಿರತೆ ಬೇಡ, ಬಲಿಷ್ಠ ಮತ್ತು ದೃಢ ಸರ್ಕಾರ ಈ ದೇಶಕ್ಕೆ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ. ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಅವರಿಗೆ ಪ್ರಧಾನಿ ಸ್ಥಾನದ ಬಗ್ಗೆ ಗೌರವವಿಲ್ಲ ಎಂದಿದ್ದಾರೆ.
ಜಾರ್ಖಾಂಡಿನಲ್ಲಿ ಸಾರ್ವಜನಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, “ದೇಶಕ್ಕೆ ರಿಮೋಟ್ ಕಂಟ್ರೋಲ್ನ ಅಸಮರ್ಥ ಪ್ರಧಾನಿಯ ಅಗತ್ಯವಿಲ್ಲ. ದೇಶಕ್ಕೆ ಬಲಿಷ್ಠ ಮತ್ತು ಧೈರ್ಯಶಾಲಿ ಪ್ರಧಾನಿಯ ಅಗತ್ಯವಿದೆ” ಎಂದರು.
ಅಲ್ಲದೇ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹೆಸರಿನಲ್ಲಿ ಚುನಾವಣೆಯನ್ನು ಎದುರಿಸುವಂತೆ ಅವರು ಕಾಂಗ್ರೆಸ್ ಪಕ್ಷಕ್ಕೆ ಸವಾಲು ಎಸೆದಿದ್ದಾರೆ. “ವಂಶಾಡಳಿತದ ಓರ್ವ ಸದಸ್ಯ ಹಿಂದೆ ಮಾಡಿದ ಕರ್ಮದ ಬಗ್ಗೆ ನಾನು ಇತ್ತೀಚಿಗೆ ನೆನಪು ಮಾಡಿಕೊಟ್ಟಿದ್ದೆ. ಈ ಜನರು ಕಳೆದ ಒಂದು ವರ್ಷಗಳಿಂದ ಪ್ರಧಾನಿಯನ್ನು ಅವಹೇಳನ ಮಾಡುತ್ತಾ ಬಂದಿದ್ದಾರೆ, ಪ್ರಧಾನಿ ಕುಟುಂಬವನ್ನೂ ಅವಹೇಳನ ಮಾಡಿದ್ದಾರೆ. ಸಮಾವೇಶದಲ್ಲಿ ನಾನು ಬೋಫೋರ್ಸ್ ಸ್ಕ್ಯಾಂಡಲ್ ಬಗ್ಗೆ ಜ್ಞಾಪಿಸಿದೆ. ಅದು ಅವರಿಗೆ ತೀವ್ರ ಸ್ವರೂಪದಲ್ಲೇ ಹೊಡೆತ ನೀಡಿದೆ, ಈಗ ನೋವಿನಿಂದ ನರಳುತ್ತಿದ್ದಾರೆ” ಎಂದಿದ್ದಾರೆ.
ಪ್ರಧಾನಿ ಸ್ಥಾನದ ಬಗ್ಗೆ ಅವರಿಗೆ ಗೌರವವಿಲ್ಲ. ನಾನು ಹೇಳಿದ ಸತ್ಯದ ಬಗ್ಗೆ ಅವರು ಕೂಗಾಡುತ್ತಿದ್ದಾರೆ. ಅವರು ಹೆಚ್ಚು ಕೂಗಿದಂತೆ ಹೊಸ ತಲೆಮಾರಿಗೆ ಅವರ ಬಗೆಗಿನ ಹೆಚ್ಚು ಹೆಚ್ಚು ಸತ್ಯ ತಿಳಿಯುತ್ತದೆ. 21ನೇ ಶತಮಾನದಲ್ಲಿರುವವರು ಒಂದು ಕುಟುಂಬ ಹೇಗೆ ದೇಶದ ಸಂಪತ್ತನ್ನು ಲೂಟಿ ಮಾಡಿತು ಎಂಬುದನ್ನು ಹೊಸ ತಲೆಮಾರಿನವರು ತಿಳಿದುಕೊಳ್ಳಲಿ ಎಂದಿದ್ದಾರೆ.
‘ನಾಮ್ದಾರರ ಕುಟುಂಬಕ್ಕೆ ನನ್ನ ಸವಾಲು ಏನೆಂದರೆ, ಮುಂಬರುವ ಎರಡು ಹಂತಗಳ ಚುನಾವಣೆಯನ್ನು, ಬೋಫೋರ್ಸ್ ಆರೋಪಿ ರಾಜೀವ್ ಗಾಂಧಿ ಅವರ ಹೆಸರಿನಲ್ಲಿ ಹೋರಾಡಿ ಎಂದು, ಮತ್ತೆ ನೋಡುವ ಆಟವನ್ನು ಹೇಗೆ ಆಡಲಾಗಿದೆ ಎಂದು” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.