ನವದೆಹಲಿ: ಬರೋಬ್ಬರಿ 30 ವರ್ಷಗಳ ಬಳಿಕ ಜಮ್ಮು ಕಾಶ್ಮೀರದ ತಮ್ಮ ಮನೆಗೆ 70 ವರ್ಷದ ಕಾಶ್ಮೀರಿ ಪಂಡಿತರೊಬ್ಬರು ವಾಪಾಸ್ ಆಗಿದ್ದಾರೆ. ಅವರ ಆಗಮನ ನಿಜಕ್ಕೂ ಅವಿಸ್ಮರಣೀಯ ಘಟನೆಯಾಗಿತ್ತು.
ರೋಶನ್ ಲಾಲ್ ಮಾವ ಅವರು, ಶ್ರೀನಗರದಲ್ಲಿನ ಝೈನ ಕಡಲ್ ಸಮೀಪದಲ್ಲಿನ ತಮ್ಮ ಪೂರ್ವಜರ ಮನೆಗೆ ಬುಧವಾರ ವಾಪಾಸ್ ಆಗಿದ್ದಾರೆ.
ಮಾವಾ ಅವರು, ಇತರ ಕಾಶ್ಮೀರಿ ಪಂಡಿತರಂತೆ 1990ರಲ್ಲಿ ಕಣಿವೆ ರಾಜ್ಯದಲ್ಲಿ ದೊಂಬಿಗಳು ನಡೆದ ಬಳಿಕ ಕಾಶ್ಮೀರದಿಂದ ವಲಸೆ ಹೋಗಿದ್ದರು. 1990ರ ಅಕ್ಟೋಬರ್ 13ರಂದು ಅವರಿಗೆ ಗಾಯಗಳೂ ಆಗಿದ್ದವು, ಅಪರಿಚಿತ ವ್ಯಕ್ತಿಯೊಬ್ಬ ಅವರ ಅಂಗಡಿಯ ಮೇಲೆ ಗುಂಡು ಹಾರಿಸಿದ ಪರಿಣಾಮವಾಗಿ ಅವರಿಗೆ ಗಾಯವಾಗಿ ಆಸ್ಪತ್ರೆ ಸೇರಿಕೊಂಡಿದ್ದರು. ಬಳಿಕ ಅವರು ನವದೆಹಲಿಗೆ ಸ್ಥಳಾಂತರಗೊಂಡು ಅಲ್ಲಿ ವ್ಯಾಪಾರವನ್ನು ಆರಂಭಿಸಿದ್ದರು.
ಇದೀಗ 30 ವರ್ಷಗಳ ಬಳಿಕ ಅವರು ತಮ್ಮ ಮನೆಗೆ ವಾಪಾಸ್ಸಾಗಿದ್ದಾರೆ. ಇಲ್ಲೇ ಉಳಿದ ಬದುಕನ್ನು ಕಳೆಯುವ ನಿರ್ಧಾರವನ್ನು ಮಾಡಿದ್ದಾರೆ. ತಮ್ಮ ಅಂಗಡಿಯನ್ನೂ ಅಲ್ಲಿ ಪುನರಾರಂಭಿಸಿದ್ದಾರೆ. ಮಸಾಲೆ ಪದಾರ್ಥಗಳ ಉದ್ದಿಮೆಯನ್ನೂ ಆರಂಭಿಸಿದ್ದಾರೆ.
ಕಾಶ್ಮೀರದಿಂದ ಪಲಾಯನ ಮಾಡಿರುವ ಇತರ ಕಾಶ್ಮೀರಿ ಪಂಡಿತರಿಗೂ ಅವರು ವಾಪಾಸ್ ಬರುವಂತೆ ಮನವಿಯನ್ನು ಮಾಡಿಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.