ವಿಧಿಶ: ಮಧ್ಯಪ್ರದೇಶದ ವಿಧಿಶದಲ್ಲಿ ಚುನಾವಣಾ ಪ್ರಚಾರ ಕಾರ್ಯ ನಡೆಸಿದ ಬಿಜೆಪಿ ನಾಯಕಿ ಉಮಾ ಭಾರತಿ ಅವರು, ಕಾಂಗ್ರೆಸ್ ಪಕ್ಷ ಮತ್ತು ಗಾಂಧಿ ಕುಟುಂಬದ ವಿರುದ್ಧ ತೀವ್ರ ಸ್ವರೂಪದ ವಾಗ್ದಾಳಿಯನ್ನು ನಡೆಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯ ಉಪನಾಮ ಫಿರೋಜ್ ಗಾಂಧಿಯಿಂದ ಬಂದದ್ದೇ ಹೊರತು, ಮಹಾತ್ಮ ಗಾಂಧಿಯಿಂದಲ್ಲ ಎಂದಿದ್ದಾರೆ.
”ದಿಗ್ವಿಜಯ್ ಸಿಂಗ್ ಅವರು, ತಮ್ಮನ್ನು ತಾವು ರಾಜ ಎಂದು ಕರೆದುಕೊಳ್ಳುತ್ತಾರೆ, ಆದರೆ ಸೋನಿಯಾ ಗಾಂಧಿಯವರ ಮನೆ ಮುಂದೆ ಕ್ಯೂನಲ್ಲಿ ಕೈ ಕಟ್ಟಿ ನಿಲ್ಲುತ್ತಾರೆ. ನಾರ ದತ್ತ ತಿವಾರಿಯವರು ಸಂಜಯ್ ಗಾಂಧಿಯ ಚಪ್ಪಲಿಯನ್ನು ಹಿಡಿಯುತ್ತಿದ್ದರು. ದೊಡ್ಡ ದೊಡ್ಡ ನಾಯಕರು ಇಂಧಿರಾ ಗಾಂಧಿ ಮುಂದೆ ತಲೆ ಬಗ್ಗಿಸಿ ನಿಲ್ಲುತ್ತಿದ್ದರು. ಇದುವೇ ಆ ಕುಟುಂಬದ ವಿಶೇಷತೆಯಾಗಿದೆ” ಎಂದಿದ್ದಾರೆ.
‘ಈ ಕುಟುಂಬದೊಂದಿಗೆ ಸೇರಿರುವ ಉಪನಾಮ ಗಾಂಧಿ, ಮಹಾತ್ಮ ಗಾಂಧಿ ಅವರಿಂದ ಬಂದಿರುವುದಲ್ಲ, ಅದು ಫಿರೋಝ್ ಗಾಂಧಿಯಿಂದ ಬಂದಿರುವುದು. ನೆಹರೂ ಅವರಿಗೆ ಫಿರೋಝ್ ಗಾಂಧಿಯನ್ನು ನೋಡಿದರೆ ಆಗುತ್ತಿರಲಿಲ್ಲ, ಹೀಗಾಗಿ ಆ ಕುಟುಂಬಕ್ಕೆ ಅವರ ಉಪನಾಮ ಇಟ್ಟುಕೊಳ್ಳುವ ಅರ್ಹತೆ ಇಲ್ಲ. ಆದರೆ ಹೆಚ್ಚು ಗೌರವ ಸಿಗುತ್ತದೆ ಎಂಬ ಕಾರಣಕ್ಕೆ ಹಾಗೆ ಮಾಡಿದ್ದಾರೆ. ಮಹಾತ್ಮ ಗಾಂಧಿಯ ಹೆಜ್ಜೆಯನ್ನು ಅನುಸರಿಸುತ್ತಿರುವವರು ಮೋದಿ ಮಾತ್ರ” ಎಂದಿದ್ದಾರೆ.
ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂಬ ಆರೋಪವನ್ನು ತಳ್ಳಿ ಹಾಕಿದ ಅವರು, ”ಅವರು ಬಿಜೆಪಿ ನಮ್ಮನ್ನು ಅಸ್ಥಿರಗೊಳಿಸುತ್ತಿದೆ ಎನ್ನುತ್ತಾರೆ, ಆದರೆ ಬೇಗ ಪತನವಾಗುವುದು ಅವರ ಜಾತಕದಲ್ಲೇ ಬರೆದಂತಿದೆ. ನಾವು ವಿರೋಧ ಪಕ್ಷದಲ್ಲೂ ಕುಳಿತು ಮಿಂಚುವ ಜನರು. ಸರ್ಕಾರದಲ್ಲಿದ್ದೇವೆಯೇ ಅಥವಾ ವಿರೋಧ ಪಕ್ಷದಲ್ಲಿದ್ದೇವೆ ಎಂಬುದರ ಬಗ್ಗೆ ನಮಗೆ ಗಮನವಿಲ್ಲ, ಎಲ್ಲಿದ್ದರೂ ನಾವು ಜನರಿಗಾಗಿ ಕಾರ್ಯನಿರ್ವಹಿಸುತ್ತೇವೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.