ನವದೆಹಲಿ: ತನ್ನ ತಾಯ್ನೆಲದಿಂದಲೇ ಒತ್ತಾಯಪೂರ್ವಕವಾಗಿ ಹೊರದೂಡಲ್ಪಟ್ಟ ಕಾಶ್ಮೀರಿ ಪಂಡಿತರು ಮೊದಲ ಬಾರಿಗೆ ಚುನಾವಣಾ ಕಣಕ್ಕಿಳಿದು ನ್ಯಾಯಕ್ಕಾಗಿ ಹೋರಾಡುವ ಉತ್ಸಾಹದಲ್ಲಿದ್ದಾರೆ. ‘ಕಾಶ್ಮೀರಿ ಪಂಡಿತ್ ಪೊಲಿಟಿಕಲ್ ಆ್ಯಕ್ಷನ್ ಕಮಿಟಿ’ ಎಂಬ ರಾಜಕೀಯ ಪಕ್ಷವನ್ನು ಕಟ್ಟಿ, ಮುಂಬರುವ ಜಮ್ಮು ಕಾಶ್ಮೀರ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ.
ಸುಪ್ರೀಂಕೋರ್ಟ್ನ ಹಿರಿಯ ವಕೀಲ ಅಶೋಕ್ ಭನ್ ಅವರು ಪಕ್ಷದ ನೇತೃತ್ವವನ್ನು ವಹಿಸಿದ್ದು, ಕಾಶ್ಮೀರಿ ಪಂಡಿತರ ವಾಪಾಸ್ಸಾತಿ, ಪುನರ್ವಸತಿ ಮತ್ತು ನ್ಯಾಯದ ಗುರಿಯನ್ನು ಇಟ್ಟುಕೊಂಡು ಇದನ್ನು ರಚನೆ ಮಾಡಲಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿದೆ.
ಕಾಶ್ಮೀರದಿಂದ ಹೊರದೂಡಲ್ಪಟ್ಟ 29 ವರ್ಷಗಳ ಬಳಿಕ ಕಾಶ್ಮೀರಿ ಪಂಡಿತರು ಇದೇ ಮೊದಲ ಬಾರಿಗೆ ತಮ್ಮದೇ ಆದ ರಾಜಕೀಯ ಪಕ್ಷವೊಂದನ್ನು ಕಟ್ಟುತ್ತಿದ್ದಾರೆ, ದೇಶದಾದ್ಯಂತ ಸದಸ್ಯತ್ವ ಅಭಿಯಾನವನ್ನೂ ಈಗಾಗಲೇ ಆರಂಭಿಸಿದ್ದಾರೆ.
”ಜಮ್ಮು ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿದ್ದೇವೆ. ಮೈತ್ರಿಗೂ ನಾವು ಮುಕ್ತರಾಗಿದ್ದೇವೆ. ಹೆಚ್ಚಿನ ಪಕ್ಷಗಳು ಅಮಾನವೀಯವಾಗಿ ವರ್ತಿಸುತ್ತಿವೆ. ಜನರಿಗೆ ಏನೇನೋ ಆಸೆ ತೋರಿಸಿ ಪುಸಲಾಯಿಸುತ್ತಿದ್ದಾರೆ, ಅದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ನಾವು ಕೂಡ ಮನುಷ್ಯರು, ಘನತೆಯೊಂದಿಗೆ ಬದುಕಲು ಬಯಸುತ್ತೇವೆ” ಎಂದು ಕಾಶ್ಮೀರಿ ಪಂಡಿತ್ ಪೊಲಿಟಿಕಲ್ ಆ್ಯಕ್ಷನ್ ಕಮಿಟಿಯ ಉಪಾಧ್ಯಕ್ಷ ಸತೀಶ್ ಮಹಲ್ದಾರ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.