ಮುಂಬಯಿ: ಸಚಿವ ಪಿಯೂಶ್ ಗೋಯಲ್ ಅವರ ನೇತೃತ್ವದಲ್ಲಿ ಭಾರತೀಯ ರೈಲ್ವೇಯು ಮಹತ್ವದ ಸುಧಾರಣೆಗಳನ್ನು ಕಾಣುತ್ತಿದೆ. ಮಾನವ ರಹಿತ ಕ್ರಾಸಿಂಗ್ ನಿರ್ಮೂಲನೆಯಿಂದ ಹಿಡಿದು, ಶೇ. 100 ವಿದ್ಯುದೀಕರಣವನ್ನು ರೈಲ್ವೇ ಕಂಡಿದೆ. ಇದೀಗ ರೈಲುಗಳಲ್ಲಿ ಜನಜಂಗುಳಿಯನ್ನು ಕುಗ್ಗಿಸಲು ಪರಿಣಾಮಕಾರಿಯಾದ ಕ್ರಮವನ್ನು ತೆಗೆದುಕೊಳ್ಳಲಾಗುತ್ತಿದೆ. ಇದಕ್ಕಾಗಿ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಪರಿಚಯಿಸಲಾಗುತ್ತಿದೆ.
ಸೆಂಟ್ರಲ್ ರೈಲ್ವೇಯು, ಮುಂಬಯಿಯಿ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಮತ್ತು ಲೋಕಮಾನ್ಯ ತಿಲಕ್ ಟರ್ಮಿನಸ್ನಿಂದ ಹೊರಡುವ ರೈಲುಗಳಲ್ಲಿ ಬಯೋಮೆಟ್ರಿಲ್ ಸಿಸ್ಟಮ್ ಅನ್ನು ಅಳವಡಿಸಲು ನಿರ್ಧರಿಸಿದೆ. ಇದರಿಂದ ಸಾಮಾನ್ಯ ಕಂಪಾರ್ಟ್ಮೆಂಟ್ಗಳಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸುವವರನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತದೆ. ಸೀಟುಗಳನ್ನು ಸಮರ್ಪಕವಾಗಿ ಅರೇಂಜ್ ಮಾಡಲು ಸಹಕಾರಿಯಾಗುತ್ತದೆ. ದುಷ್ಕರ್ಮಿಗಳನ್ನು ಪತ್ತೆ ಹಚ್ಚಲೂ ಸುಲಭವಾಗುತ್ತದೆ.
ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಮತ್ತು ಲೋಕಮಾನ್ಯ ತಿಲಕ್ ಟರ್ಮಿನಸ್ಗಳಲ್ಲಿ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಔಪಚಾರಿಕವಾಗಿ ಅನುಷ್ಠಾನಗೊಳಿಸಿದ ಬಳಿಕ ಟೆಂಡರ್ ಅನ್ನು ಕರೆಯಲಾಗುತ್ತದೆ ಎಂದು ರೈಲ್ವೇ ಹೇಳಿದೆ.
ಈ ವ್ಯವಸ್ಥೆಯಡಿಯಲ್ಲಿ, ಪ್ರಯಾಣ ಬಯಸುವವರು ಮೊದಲು ತಮ್ಮ ಬಯೋಮೆಟ್ರಿಕ್ ವಿವರವನ್ನು ನೀಡಬೇಕಾಗುತ್ತದೆ. ಬಳಿಕ ಅವರಿಗೆ ಟೋಕನ್ ನೀಡಲಾಗುತ್ತದೆ, ಟೋಕನ್ ಆಧರಿಸಿ ಪ್ರಯಾಣಿಕರು ಕ್ಯೂನಲ್ಲಿ ನಿಲ್ಲಬೇಕು, ಅವರ ಬಯೋಮೆಟ್ರಿಕ್ ಖಚಿತವೆಂದು ಸಾಬೀತಾದ ಬಳಿಕ ಅವರು ರೈಲಿನೊಳಗೆ ಹೋಗಬಹುದು. ಎರಡು ತಿಂಗಳುಗಳ ಕಾಲ ಬಯೋಮೆಟ್ರಿಕ್ ಇರುತ್ತದೆ. ಬಳಿಕ ಅದು ಡಿಲೀಟ್ ಆಗುತ್ತದೆ. ಟಿಕೆಟ್ ಇಲ್ಲದೆ ಪ್ರಯಾಣ ಮಾಡುವುದನ್ನು ತಪ್ಪಿಸಲು ಇದು ಪ್ರಯೋಜನಕಾರಿಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.