ನವದೆಹಲಿ: ದೇಶದಾದ್ಯಂತ ಇಂದು ನಾಲ್ಕನೆ ಹಂತದ ಲೋಕಸಭಾ ಚುನಾವಣೆ ನಡೆಯುತ್ತಿದೆ. ಬೆಳಗ್ಗಿನಿಂದಲೇ ಜನರು ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡುತ್ತಿದ್ದಾರೆ. ಅತ್ಯಧಿಕ ಪ್ರಮಾಣದಲ್ಲಿ ಮತದಾನ ಮಾಡಿ ಹಿಂದಿನ ದಾಖಲೆಯನ್ನು ಮುರಿಯುವಂತೆ ಕರೆ ನೀಡಿರುವ ಮೋದಿ, ‘ಹಿಂದಿನ ಮೂರು ಹಂತಗಳ ದಾಖಲೆಯನ್ನು ಇಂದು ಮುರಿಯಿರಿ’ ಎಂದಿದ್ದಾರೆ.
ಟ್ವಿಟ್ ಮಾಡಿರುವ ಮೋದಿ, ”ಸಾರ್ವತ್ರಿಕ ಚುನಾವಣೆಯ ಮತ್ತೊಂದು ಹಂತ ಆರಂಭಗೊಂಡಿದೆ. ಇಂದು ಅತ್ಯಧಿಕ ಪ್ರಮಾಣದಲ್ಲಿ ಮತದಾನವಾಗುತ್ತದೆ ಮತ್ತು ಹಿಂದಿನ ಮೂರು ಹಂತದ ದಾಖಲೆ ಮುರಿಯುತ್ತದೆ ಎಂಬ ಭರವಸೆ ಇದೆ. ಮತಗಟ್ಟೆಯತ್ತ ತೆರಳಿ ಮತ್ತು ಹಕ್ಕನ್ನು ಚಲಾಯಿಸಿ ಎಂದು ಯುವ ಮತದಾರರದಲ್ಲಿ ಮನವಿ ಮಾಡುತ್ತೇನೆ” ಎಂದಿದ್ದಾರೆ.
Another phase of the General Elections begins today. I hope those voting today do so in large numbers and break the voting records of the previous three phases.
A special appeal to young voters to head to the polling booth and exercise their franchise.
— Chowkidar Narendra Modi (@narendramodi) April 29, 2019
ಗೃಹಸಚಿವ ರಾಜನಾಥ್ ಸಿಂಗ್ ಅವರು ಟ್ವಿಟ್ ಮಾಡಿ, ‘ನಿಮ್ಮ ಮತದ ಪ್ರಜಾಪ್ರಭುತ್ವದ ಅಡಿಪಾಯವನ್ನು ಗಟ್ಟಿಗೊಳಿಸುವುದು ಮಾತ್ರವಲ್ಲ, ನವ ಭಾರತದ ರಚನೆಯಲ್ಲೂ ಸಹಾಯ ಮಾಡಲಿದೆ” ಎಂದಿದ್ದಾರೆ.
The polling for the 4th phase of General Elections begins today. I appeal to the voters to ensure a record turnout. Your vote will not only strengthen the pillars of democracy but it will also help shaping of a New India.
— Chowkidar Rajnath Singh (@rajnathsingh) April 29, 2019
ನಾಲ್ಕನೆಯ ಹಂತದಲ್ಲಿ ರಾಜಸ್ಥಾನ, ಮಧ್ಯಪ್ರದೇಶಗಳು ಚುನಾವಣೆಯನ್ನು ಎದುರಿಸಲಿವೆ. ಮುಂಬಯಿಯಲ್ಲೂ ಚುನಾವಣೆ ನಡೆಯಲಿದೆ. ಮಧ್ಯಪ್ರದೇಶದ ಮತ್ತು ರಾಜಸ್ಥಾನದ 13 ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದೆ. ಒಟ್ಟು 9 ರಾಜ್ಯಗಳ 72 ಕ್ಷೇತ್ರಗಳ ಭವಿಷ್ಯ ಇಂದು ನಿರ್ಧರಿತವಾಗಲಿದೆ, ಆರು ಕೇಂದ್ರ ಸಚಿವರುಗಳು ಕಣದಲ್ಲಿದ್ದಾರೆ.
ಈ ಚುನಾವಣಾ ಹಂತ ಬಿಜೆಪಿಯ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ. ಹಿಂದು ಹೃದಯ ಭಾಗಗಳಾದ ರಾಜಸ್ಥಾನ, ಮಧ್ಯಪ್ರದೇಶ ಕಳೆದ ಒಂದು ವರ್ಷದಿಂದ ಕಾಂಗ್ರೆಸ್ ಕೈಯಲ್ಲಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಈ ರಾಜ್ಯಗಳಲ್ಲಿ ಬಿಜೆಪಿ ಅತ್ಯುನ್ನತ ವಿಜಯವನ್ನೇ ಸಾಧಿಸಿತ್ತು. ಅದನ್ನು ಮರುಕಳಿಸುವುದು ಅದಕ್ಕೆ ಅನಿವಾರ್ಯವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.