ನವದೆಹಲಿ : ಪತ್ರಕರ್ತ ರಾಜ್ದೀಪ್ ಸರ್ದೇಸಾಯಿ ಕೊನೆಗೂ 2002ರ ಗುಜರಾತ್ ದಂಗೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಕಾರಣರಲ್ಲ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಬರಹಗಾರ ಮತ್ತು ಪತ್ರಕರ್ತ ಮನು ಜೋಸೆಫ್ ಅವರಿಗೆ ಏಪ್ರಿಲ್ 15 ರಂದು ನೀಡಿದ ಸಂದರ್ಶನದಲ್ಲಿ, ಗುಜರಾತ್ ಗಲಭೆಗೆ ನರೇಂದ್ರ ಮೋದಿ ಅವರನ್ನು ಹೊಣೆ ಮಾಡಲಾಗುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.
ಮೋದಿ ಅವರನ್ನು ಟೀಕಿಸುತ್ತಲೇ ತನ್ನ ವೃತ್ತಿಯಲ್ಲಿ ನೆಲೆ ಕಂಡುಕೊಂಡ ಸರ್ದೇಸಾಯಿ ಅವರು, ತಮ್ಮ ಹಲವಾರು ಚರ್ಚೆ, ಸಂವಾದಗಳಲ್ಲಿ ಗುಜರಾತ್ ಗಲಭೆಗೆ ಮೋದಿ ಅವರನ್ನು ಹೊಣೆಯಾಗಿಸಿದ್ದರು. ಗಲಭೆಯ ವೇಳೆ ಉದ್ರಿಕ್ತ ಜನರನ್ನು ನಿಯಂತ್ರಿಸಲು ಮೋದಿ ಅಸಮರ್ಥತೆಯನ್ನು ಪ್ರದರ್ಶಿಸಿದ್ದರು ಎಂದು ಹೇಳುತ್ತಿದ್ದರು. ಆದರೆ ಈಗ, ಕೊನೆಗೂ ಸರ್ದೇಸಾಯಿ ಅವರು ಸತ್ಯವನ್ನು ಒಪ್ಪಿಕೊಂಡಿದ್ದಾರೆ. ಮನು ಜೋಸೆಫ್ ಅವರು ಅವರನ್ನು ಸತ್ಯ ಒಪ್ಪಿಕೊಳ್ಳುವಂತೆ ಮಾಡಿದ್ದಾರೆ.
ವೈಯಕ್ತಿಕವಾಗಿ ನಾನು ಗುಜರಾತ್ ಗಲಭೆಗೆ ಮೋದಿ ಕಾರಣರಲ್ಲ ಎಂಬುದನ್ನು ನಂಬುತ್ತೇನೆ ಎಂದು ಸರ್ದೇಸಾಯಿ ಸಂದರ್ಶನದಲ್ಲಿ ಹೇಳಿದ್ದಾರೆ. ಮೋದಿ ಅಥವಾ ಇತರರನ್ನು ಗಲಭೆಗೆ ಹೊಣೆ ಮಾಡಲಾಗುವುದಿಲ್ಲ. ಮೋದಿ ಗಲಭೆ ನಡೆಸುವಂತೆ ಕರೆ ನೀಡಿಲ್ಲ ಎಂಬುದನ್ನು ಸಂದರ್ಶನದ ವೇಳೆ ಉಲ್ಲೇಖ ಮಾಡಿದ್ದಾರೆ. ಮೋದಿ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಆರು ತಿಂಗಳಲ್ಲಿ ಗಲಭೆ ನಡೆದು ಹೋಗಿದೆ, ಹೀಗಿರುವಾಗ ಅದನ್ನು ನಿಯಂತ್ರಿಸುವಲ್ಲಿ ಅವರು ವಿಫಲರಾಗಿದ್ದಾರೆ ಎಂಬುದನ್ನು ಹೇಳಲು ಸಾಧ್ಯವಾಗುವುದಿಲ್ಲ ಎಂದಿದ್ದಾರೆ.
ಸರ್ದೇಸಾಯಿ ಅವರ ಪ್ರಕಾರ, ರಾಷ್ಟ್ರೀಯ ನಾಯಕನಾಗಿ ಮೋದಿ ಇಂದು ಪ್ರಬಲರಾಗಿರುವಷ್ಟು 2002 ರಲ್ಲಿ ಪ್ರಬಲರಾಗಿರಲಿಲ್ಲ, ಆ ಸಂದರ್ಭದಲ್ಲಿ ಜನರು ಅಂದುಕೊಂಡಷ್ಟು ಅವರು ಶಕ್ತಿಶಾಲಿಯಾಗಿ ಇರಲಿಲ್ಲ. 2002ರಲ್ಲಿ ಗುಜರಾತ್ನಲ್ಲಿ ರಾಜಕೀಯ ವಲಯದಲ್ಲಿ ಹೆಚ್ಚು ಶಕ್ತಿಶಾಲಿಯಾಗಿದ್ದುದು ಪ್ರವೀಣ್ ತೊಗಾಡಿಯಾ. ಮಾತ್ರವಲ್ಲದೇ, ಗುಜರಾತ್ ದಂಗೆಯನ್ನು ಮಾಧ್ಯಮಗಳು ಹೆಚ್ಚು ವೈಭವೀಕರಿಸಿದೆ ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ. ಸ್ವಯಂ ನಿಯಂತ್ರಣ ಇಂಥವುಗಳನ್ನು ತಡೆಯಬಲ್ಲದು ಎಂದು ಅವರು ಹೇಳಿಕೊಂಡಿದ್ದಾರೆ.
2002ರ ದಂಗೆಯಲ್ಲಿ ಮೋದಿ ಅವರ ಕೈವಾಡ ಇಲ್ಲ ಎಂಬುದನ್ನು ನಾನು ವೈಯಕ್ತಿಕವಾಗಿ ನಂಬುವುದಿಲ್ಲ ಎಂಬ ಸರ್ದೇಸಾಯಿ ಅವರ ಮಾತನ್ನು ಅರ್ಥ ಮಾಡಿಕೊಳ್ಳಲು ನಿಜಕ್ಕೂ ಕಷ್ಟವಾಗುತ್ತದೆ. ಯಾಕೆಂದರೆ, ಇದುವರೆಗೂ ಅವರು ಗುಜರಾತ್ ದಂಗೆಗೆ ಮೋದಿ ಕಾರಣ ಎಂದು ನಿರಂತರವಾಗಿ ಹೇಳಿಕೊಂಡು ಬಂದಿದ್ದಾರೆ, ಆದರೆ ಈಗ ಅವರು ಉಲ್ಟಾ ಹೊಡೆದಿರುವುದು ನೋಡಿದರೆ ಇದರಲ್ಲಿ ಏನೋ ಅಜೆಂಡಾ ಇದ್ದಂತೆ ಕಾಣುತ್ತದೆ. ಇಲ್ಲವೇ ಅವರಿಗೆ ಸತ್ಯದ ದರ್ಶನವಾಗಿರಬೇಕು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.