ತಿರುವನಂತಪುರಂ: ತಿರುವನಂತಪುರಂನ ಬಿಜೆಪಿ ಅಭ್ಯರ್ಥಿ ಕುಮ್ಮಾನಂ ರಾಜಶೇಖರನ್ ಅವರು, ಪ್ರಚಾರ ಕಾರ್ಯದ ಸಂದರ್ಭಗಳಲ್ಲಿ ತಮಗೆ ದೊರೆತ ಶಾಲುಗಳನ್ನು ಬ್ಯಾಗ್ ಮತ್ತು ದಿಂಬು ಕವರ್ಗಳಾಗಿ ಪರಿವರ್ತಿಸಲು, ಬ್ಯಾನರ್, ಹೋರ್ಡಿಂಗ್ಸ್ಗಳನ್ನು ಗ್ರೋ ಬ್ಯಾಗ್ ಆಗಿ ಪರಿವರ್ತಿಸಲು ನಿರ್ಧರಿಸಿದ್ದಾರೆ. ಈಗಾಗಲೇ ಅವರು ತಮ್ಮ ಪರವಾಗಿ ಹಾಕಲಾಗಿದ್ದ ಬ್ಯಾನರ್, ಬಂಟಿಂಗ್ಗಳನ್ನು ತೆಗೆದು ಸ್ಥಳವನ್ನು ಸ್ವಚ್ಛಗೊಳಿಸಿದ್ದಾರೆ. ಈ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಚುನಾವಣಾ ಆಯೋಗವು ಪರಿಸರ ಸ್ನೇಹಿ ಮತ್ತು ಶೂನ್ಯ ತ್ಯಾಜ್ಯ ಚುನಾವಣೆಯನ್ನು ನಡೆಸುವಂತೆ ಎಲ್ಲರಿಗೂ ಮನವಿಯನ್ನು ಮಾಡಿಕೊಂಡಿದೆ. ಆದರೆ ಯಾವ ಅಭ್ಯರ್ಥಿಗಳೂ ಇದನ್ನು ಪಾಲನೆ ಮಾಡಿಲ್ಲ. ಕರಪತ್ರಗಳು, ಶಾಲುಗಳು, ಬ್ಯಾನರ್ಗಳು ರಸ್ತೆಯನ್ನು ಗಲೀಜು ಮಾಡಿ ಹಾಕಿವೆ.
ಆದರೆ ಕೇರಳದಲ್ಲಿ ಇತರ ಪಕ್ಷಗಳಿಗೆ ಬಿಜೆಪಿ ಹೊಸ ಮಾದರಿಯನ್ನು ಹಾಕಿ ಕೊಟ್ಟಿದೆ. ಶೂನ್ಯ ತ್ಯಾಜ್ಯ ಚುನಾವಣೆಯತ್ತ ಮಹತ್ವದ ಹೆಜ್ಜೆ ಇಟ್ಟಿದೆ. ಕುಮ್ಮಾನಂ ರಾಜಶೇಖರನ್ ಅವರು ಶಾಲುಗಳನ್ನು ರಿಸೈಕಲ್ ಮಾಡುವ ನಿರ್ಧಾರವನ್ನು ತೆಗದುಕೊಂಡಿದ್ದಾರೆ.
‘ಶಾಲುಗಳನ್ನು ಸಂಗ್ರಹಿಸುವ ಕಾರ್ಯ ಸದ್ಯ ನಡೆಯುತ್ತಿದೆ. ಅವುಗಳನ್ನು ನಾವು ಕ್ಯಾರಿ ಬ್ಯಾಗ್, ಪಿಲ್ಲೋ ಕವರ್ ಆಗಿ ಪರಿವರ್ತಿಸಲು ನಿರ್ಧರಿಸಿದ್ದೇವೆ’ ಎಂದು ರಾಜಶೇಖರನ್ ಅವರು ಫೇಸ್ಬುಕ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಚುನಾವಣಾ ಪ್ರಚಾರದ ಭಾಗವಾಗಿ ಹಾಕಲಾಗಿದ್ದ ಬ್ಯಾನರ್, ಹೋರ್ಡಿಂಗ್ ಇತ್ಯಾದಿಗಳನ್ನು ನಾವು ತೆಗೆಯುತ್ತಿದ್ದೇವೆ, ಅವುಗಳನ್ನು ನಾವು ಗ್ರೋ ಬ್ಯಾಗ್ ಆಗಿ ಪರಿವರ್ತಿಸುತ್ತೇವೆ ಎಂದಿದ್ದಾರೆ.
ಪರಿಸರ ಸ್ನೇಹಿ ಮತ್ತು ಪ್ಲಾಸ್ಟಿಕ್ ಮುಕ್ತ ಜೀವನ ಶೈಲಿಯನ್ನು ಉತ್ತೇಜಿಸುವ ಸಲುವಾಗಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಅವರು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.